Saturday, 26 August 2017

the paramis ಪಾರಮಿಗಳು

                                             ಪಾರಮಿಗಳು
 

ಪಾರಮಿಗಳು ಹತ್ತು

ಅವು ಯಾವುವೆಂದರೆ :
                1. ದಾನ ಪಾರಮಿ : ಶ್ರೇಷ್ಠವಾದುದರಲ್ಲಿ ಶ್ರೇಷ್ಠವೆಂದರೆ ದಾನ ಹೃದಯ ಎಂದು ಬೋಧಿಸತ್ತ್ವರ ಅಭಿಪ್ರಾಯ. ದಾನಕ್ಕಿಂತಲೂ ಬೇರಾವುದರಲ್ಲೂ ಅಂತಹ ಆನಂದ ಅವರಿಗೆ ಲಭಿಸುವುದಿಲ್ಲ. ಬೋಧಿಸತ್ತ್ವರು ನಿಸ್ವಾರ್ಥರಾಗಿ ದಾನ ಮಾಡುತ್ತಾರೆ. ದ್ವೇಷರಹಿತರಾಗಿ ದಾನ ಮಾಡುತ್ತಾರೆ. ಸರ್ವರಿಗೂ ದಾನ ಮಾಡುತ್ತಾರೆ. ಪ್ರಜ್ಞಾಪೂರ್ವಕವಾಗಿ ದಾನ ಮಾಡುತ್ತಾರೆ. ಭಕ್ತಿಯಿಂದ, ಮೈತ್ರಿಯಿಂದ, ಕರುಣೆಯಿಂದ, ಆನಂದದಿಂದ ದಾನ ಮಾಡುತ್ತಾರೆ. ದಾನದಲ್ಲಿ ತಮ್ಮ ಐಶ್ವರ್ಯ, ಶರೀರ, ತಮ್ಮ ಪತ್ನಿ ಪುತ್ರರು, ತಮ್ಮ ಪ್ರಾಣ, ತಮ್ಮ ಮನಸ್ಸು, ತಮ್ಮ ಕಾಲ, ತಮ್ಮ ಜ್ಞಾನ, ಒಟ್ಟಾರೆ ತಮ್ಮ ಸರ್ವಸ್ವವನ್ನು ಪರರಿಗಾಗಿ ಧಾರೆ ಎರೆಯುತ್ತಾರೆ. ನಿಜ ಹೇಳಬೇಕಾದರೆ ಪರರಿಗಾಗಿ ಮಾತ್ರ ಜೀವಿಸುವ ಅದ್ವಿತೀಯ ಜೀವಿ ಬೋಧಿಸತ್ತ್ವ.
                2. ಶೀಲ ಪಾರಮಿ : ಪರರಿಗೆ ಅಣು ಮಾತ್ರವೂ ನೋವನ್ನು ಬಯಸದ ಬೋಧಿಸತ್ತ್ವರು ಅದಕ್ಕಾಗಿ ಶೀಲವಂತರಾಗುತ್ತಾರೆ. ಯಾವ ರೀತಿಯಲ್ಲಿಯೂ ಕೆಟ್ಟ (ಪಾಪ) ಕಾರ್ಯ ಮಾಡದೆ ತ್ರಿಕರಣ ಪೂರ್ವಕವಾಗಿ ಪರಿಶುದ್ಧರಾಗುತ್ತಾರೆ. ಪ್ರಾಣ ನೀಡಲು ಸಿದ್ಧ, ನರಕ ಪ್ರವೇಶಿಸಲೂ ಸಿದ್ಧ, ಆದರೆ ಪಾಪ ಕಾರ್ಯಕ್ಕೆ ಸಿದ್ಧರಲ್ಲ. ಬೋಧಿಸತ್ತ್ವರು ಸರ್ವರೊಂದಿಗೆ ಆದರ್ಶವಾಗಿ ವ್ಯವಹರಿಸುತ್ತಾ ಶ್ರೇಷ್ಠ ಗುರು, ಶ್ರೇಷ್ಠ ಪಿತ, ಶ್ರೇಷ್ಠ ಮಿತ್ರರಾಗಿ ಶೀಲದ ಸುಗಂಧವನ್ನು ಎಲ್ಲೆಡೆ ಹಂಚಿ ಶೀಲಕ್ಕೆ ಅಲಂಕಾರಪ್ರಾಯರಾಗಿರುತ್ತಾರೆ.
3.            ನೆಖ್ಖಮ್ಮ ಪಾರಮಿ : ಪರರಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವವನೇ ಸೇವೆಗಾಗಿ ಅರ್ಹನಾಗಿರುತ್ತಾನೆ ಎಂದು ನಂಬಿರುವ ಮಹಾಬೋಧಿಸತ್ತ್ವರವರು ಪರಹಿತಕ್ಕಾಗಿ ಮತ್ತು ಸಂಬೋಧಿ ಪ್ರಾಪ್ತಿಗಾಗಿ ಎಲ್ಲಾ ಪ್ರಾಪಂಚಿಕ ಐಶ್ವರ್ಯ, ಅಂತಸ್ತು, ಭೋಗ ಮತ್ತು ಸ್ವಾರ್ಥಗಳೆಲ್ಲವನ್ನು ತ್ಯಜಿಸುತ್ತಾರೆ. ಪ್ರಪಂಚದ ಯಾವ ಸ್ಥಿತಿಯೂ, ಯಾವ ಜೀವಿಯೂ, ಯಾವ ವಸ್ತುವು ಅವರಿಗೆ ಸ್ವಾರ್ಥರನ್ನಾಗಿ ತಿರುಗಿಸಲು ಅಸಾಧ್ಯ.
                4.            ಪ್ರಜ್ಞಾ ಪಾರಮಿ : ಸೂರ್ಯನನ್ನು ಎಲ್ಲಾ ಗ್ರಹಗಳು ಹಿಂಬಾಲಿಸುವಂತೆ ಪ್ರಜ್ಞೆಯ ಹಿಂದೆ ಎಲ್ಲಾ ಪಾರಮಿಗಳು (ಸದ್ಗುಣಗಳು) ಕ್ರಿಯಬದ್ಧರಾಗುತ್ತವೆ. ಪ್ರಜ್ಞಾ (ಜ್ಞಾನ)ವುಳ್ಳವರಿಗೆ ಯಾವ ಸಮಸ್ಯೆಯೂ ಇಲ್ಲ. ಯಾವ ದುಃಖವೂ ಇಲ್ಲ. ಏಕೆಂದರೆ ಸರ್ವ ಸದ್ಗುಣದ ಮೂಲ ಪ್ರಜ್ಞಾ ಸರ್ವ ಸದ್ಗುಣಗಳ ಶಿಖರಪ್ರಙ್ಞ ಬೋಧಿಸತ್ತ್ವರು ಪ್ರಜ್ಞೆಯ ಸಹಾಯದಿಂದ ಪ್ರಾಪಂಚಿಕ ಜ್ಞಾನ ಮತ್ತು ಮಹಾ ಸಮ್ಮಾ ಸಂಬೋಧಿಯ ಜ್ಞಾನ ಪಡೆದು ಅಸವಕ್ಷಯರಾಗಿ, ಪ್ರಜ್ಞಾಬಲದಿಂದ ಬೋಧಿಸಿ ಸರ್ವರನ್ನೂ ದುಃಖ ವಿಮುಕ್ತಿಗೊಳಿಸುತ್ತಾರೆ. ಎಲ್ಲಾ ಬೋಧಿಸತ್ತ್ವರು ಪ್ರಜ್ಞಾವಂತರಾಗಿ ಅವರನ್ನು ಪರಿಪೂರ್ಣ ಗೊಳಿಸುತ್ತಾರೆ.
                5. ವೀರ್ಯ ಪಾರಮಿ : ಪ್ರಯತ್ನಶೀಲತೆಯಿಂದಲೇ ಪರಿಪೂರ್ಣತೆ ಎಂದು ಅರಿತು ಕ್ರಿಯಾಶಕ್ತಿಯ ಸಾಕಾರರಾಗಿರುವ ಬೋಧಿಸತ್ತ್ವರು ತಮ್ಮ ಪ್ರಯತ್ನಶೀಲತೆಯಿಂದ ಸದಾ ಪರಹಿತಕಾರ್ಯಗಳನ್ನು ಮಾಡುತ್ತಾ, ತಮ್ಮನ್ನು ಪರಿಪೂರ್ಣರಾಗಿಸಿಕೊಳ್ಳುತ್ತಾರೆ.
                6.            ಖಾಂತಿ ಪಾರಮಿ : ಕ್ಷಮಾಶೀಲ ಸಹನೆಯಿಲ್ಲದೆ ಕರುಣಾ ಹೃದಯ  ಪರಿಪೂರ್ಣವಾಗಿ ವಿಕಾಸ ಹೊಂದಲಾರದು ಎಂದು ಅರಿತಿರುವ ಬೋಧಿಸತ್ತ್ವರು ಪರರು ಮಾಡುವ ಎಲ್ಲಾ ಬಗೆಯ ಹಿಂಸೆಗಳನ್ನು, ಎಲ್ಲಾ ಬಗೆಯ ನಿಂದೆ, ಎಲ್ಲಾ ಅಪಕಾರವನ್ನು, ಎಲ್ಲಾ ಬಗೆಯ ಕೃತಘ್ನ ಕಠೋರತೆಗಳನ್ನು ದಯೆಯಿಂದ ಶಾಂತಚಿತ್ತದಿಂದ ಸಹಿಸಿ ಮತ್ತೆ ಅವರನ್ನೇ ಪ್ರೀತಿಸುವಂತಹ ಅನುಪಮಜೀವಿಯಾಗಿರುತ್ತಾರೆ.
                7. ಸಚ್ಚ ಪಾರಮಿ : ನುಡಿದಂತೆ ನಡೆಯುವ, ನಡೆದಂತೆ ನುಡಿಯುವ, ನುಡಿದಂತೆ ಸಮ್ಮಾ ಸಂಬೋಧಿಯನ್ನು ಪ್ರಾಪ್ತಗೊಳಿಸಿಕೊಳ್ಳುವ, ಪರರಿಗೆ ದುಃಖ ವಿಮುಕ್ತಿಗೆ ಮಾರ್ಗದಶರ್ಿಯಾಗಿರುವ, ಮೃದುಭಾಷಿಗಳು, ಸುಮಧುರ ಭಾಷಿಗಳು, ಸತ್ಯವಂತರು, ಸತ್ಯಸಂಧರು, ಲೋಕಕ್ಕೆ ಕೊಟ್ಟ ಮಾತು ತಪ್ಪದವರು ಆಗಿರುವ ಬೋಧಿಸತ್ತ್ವರು ಸಚ್ಚ ಮಾರ್ಗವನ್ನು ಪರಿಪೂರ್ಣಗೊಳಿಸಿ ಭವಿಷ್ಯದಲ್ಲಿ ತಥಾಗತರಾಗುತ್ತಾರೆ.
                8. ಅಧಿಷ್ಠಾನ ಪಾರಮಿ : ದೃಢ ನಿಧರ್ಾರವಿಲ್ಲದೆ ಯಾವ ಪಾರಮಿ (ಸದ್ಗುಣ)ಯೂ ಅಭಿವೃದ್ಧಿಯಾಗದು, ಪರಿಪೂರ್ಣತೆಯನ್ನು ಗಳಿಸದು ಎಂದು ಸ್ಪಷ್ಟವಾಗಿ ಅರಿತಿರುವ ಬೋಧಿಸತ್ತ್ವರು ತಮ್ಮ ಗುರಿಯಾದ ಸಮ್ಮಾ ಸಂಬೋಧಿಯಲ್ಲಿ ಮತ್ತು ಮಾರ್ಗವಾದ ಪಾರಮಿಗಳಲ್ಲಿ ಅಚಲವಾದ ವಜ್ರದಂತಹ ದೃಢನಿಧರ್ಾರ ತಾಳುತ್ತಾರೆ. ದೃಢ ನಿಧರ್ಾರದಿಂದ ಬೇರೆಯವರು ವರ್ಷಗಳಲ್ಲಿ ಮಾಡುವುದನ್ನು ದಿನಗಳಲ್ಲಿ ಸಾಧಿಸುತ್ತಾರೆ.
ದೃಢ ನಿಧರ್ಾರವುಳ್ಳವರು ಸುಖ ತ್ಯಾಗಕ್ಕೂ ಸಿದ್ಧರು. ಮಹಾಶ್ರಮಕ್ಕೆ ಸಿದ್ಧ, ನರಕ ಪ್ರವೇಶಕ್ಕೆ ಸಿದ್ಧ. ಆದರೆ ತಮ್ಮ ನಿಧರ್ಾರವನ್ನು ಎಂದಿಗೂ ಬಿಡರು. ದೃಢ ನಿಧರ್ಾರಕ್ಕೆ ಆದರ್ಶಪ್ರಾಯರು ಬೋಧಿಸತ್ತ್ವರು.
                9.            ಮೆತ್ತಾ ಪಾರಮಿ : ಸರ್ವರ ಸುಖವೇ ಎನ್ನ ಸುಖ, ಸರ್ವ ದುಃಖ ವಿಮುಕ್ತಿಯೇ ನನ್ನ ದುಃಖ ವಿಮುಕ್ತಿ. ಸರ್ವರ ಉನ್ನತಿಯೇ ನನ್ನ ಉನ್ನತಿ ಎಂಬ ಸುಂದರ ಮನೋವೃತ್ತಿ ಬೋಧಿಸತ್ತ್ವರದು. ಮಹಾಭಾವದ ಕರುಣೆಯಿಂದಲೇ ಅವರು ಬೋಧಿಸತ್ತ್ವರ ಹುಟ್ಟನ್ನು ಪಡೆಯುತ್ತಾರೆ. ಎಲ್ಲಿಯವರೆಗೆ ಒಂದು ಜೀವಿಯ ಅಲ್ಪ ದುಃಖ ಇರುವುದೋ, ಅಲ್ಲಿಯವರೆಗೆ ನನ್ನ ಯೋಜನೆ ಅಪೂರ್ಣ ಎಂದು ನಂಬಿರುವ ಬೋಧಿಸತ್ತ್ವರು. ಹೂವಿನಂತಹ ಕೋಮಲ ಹೃದಯವುಳ್ಳವರು ಲೋಕಕಾರುಣಿಕನಾಥರು ಬೋಧಿಸತ್ತ್ವರು. ಅವರ ಕಾರ್ಯದ ಸ್ಫೂತರ್ಿಯೇ ಶುದ್ಧ ಪ್ರೀತಿ (ಮೈತ್ರಿ). ಅಷ್ಟೇ ಕಡು ಕಷ್ಟವಾಗಿರುವ ಸಾಹಸ ಕೈಗೊಳ್ಳುತ್ತಾರೆ. ಅವರಿಗೆ ಯಾವುದೇ ಅವಸ್ಥೆಯಿರಲಿ, ಮೈತ್ರಿಭಾವದಿಂದಲೇ ಇರುತ್ತಾರೆ. ನಿಸ್ವಾರ್ಥ ಪ್ರೀತಿ, ದ್ವೇಷರಹಿತ ಪ್ರೀತಿ. ಸರ್ವರಲ್ಲೂ ಪ್ರೀತಿ, ಜ್ಞಾನಯುತ ಪ್ರೀತಿ, ಅಗಾಧವಾದ, ಅಸೀಮವಾದ ಸಂಪೂರ್ಣ ಪ್ರೀತಿ ಅವರದು. ಶುದ್ಧಪೂರ್ಣ ಪ್ರೀತಿಯನ್ನು ಪರಿಪೂರ್ಣಗೊಳಿಸಿ ಅವರು ಲೋಕಾನುಕಂಪವುಳ್ಳವ ರಾಗುತ್ತಾರೆ.
                10)          ಉಪೇಖ್ಖಾ ಪಾರಮಿ : ಜಗತ್ತಿನ ಯಾವ ಸುಖದಿಂದಲೂ ಆಕಷರ್ಿಸಲಾಗದ, ಜಗತ್ತಿನ ಯಾವುದರಿಂದಲೂ ಕಂಪಿತವಾಗದ, ಪ್ರಪಂಚದ ಯಾವ ಜೀವಿಯ ಮೇಲೂ ಕೋಪಗೊಳ್ಳದ, ಯಾವ ದುಃಖದಿಂದಲೂ, ಕೂಡಿರದ ಚಿತ್ತ, ಉಪೇಖ್ಖಾ ಚಿತ್ತ ಅಂತಹ ಶಾಂತ ಸಮಚಿತ್ತತೆಯನ್ನು ಬೋಧಿಸತ್ತ್ವರು ಪಡೆದಿರುತ್ತಾರೆ. ಯಾವುದೇ ಸುಖ-ದುಃಖ-ಕಲ್ಮಶಗಳಿಲ್ಲದೆ ಅವರ ಚಿತ್ತ ನಿರ್ಮಲವಾಗಿರುತ್ತದೆ. ನಿಸ್ವಾರ್ಥ ಮನೋಭಾವದ ಅವರು ದ್ವೇಷರಹಿತರಾಗಿರುತ್ತಾರೆ. ಯಾವ ಸಂಕಷ್ಟಗಳಿಗೂ ಸಮಸ್ಯೆಗಳಿಗೂ ಭೀತಿ ಪಡದ ಅಭಯರು. ಎಲ್ಲಾ ದುಃಖಗಳಿಂದ ಮೀರಿದ ಅಶೋಕರು ಬೋಧಿಸತ್ತ್ವರು. ಅವರು ಕಡುಕಷ್ಟಕರವಾಗಿರುವ ಉಪೇಖ್ಖಾ ಪಾರಮಿಯನ್ನು ಎಲ್ಲಾ ಸಮ-ವಿಷಮ ಪರಿಸ್ಥಿತಿಯಲ್ಲಿ ಹೊಂದಿ ಬಲಿಷ್ಠಚಿತ್ತವನ್ನು ಸಾಧಿಸಿ ಮುಂದೆ ಸಮ್ಮಾ ಸಂಬುದ್ಧರಾಗಿ ಪರಿಪೂರ್ಣ ಪರಮಶಾಂತ ಸ್ವರೂಪಿಗಳಾಗುತ್ತಾರೆ.
                ರೀತಿ ಬೋಧಿಸತ್ತ್ವರು ಎಲ್ಲಾ ಪಾರಮಿಗಳನ್ನು ಪರಿಪೂರ್ಣಗೊಳಿಸಿ ಸಮ್ಮಾ ಸಂಬುದ್ಧರಾಗುತ್ತಾರೆ. ಎಲ್ಲಾ ಜೀವಿಗಳಿಗೂ ಸುಖ ನೀಡುವವ ರಾಗುತ್ತಾರೆ. ಎಲ್ಲರ ದುಃಖಗಳನ್ನು ವಿಮುಕ್ತಿಗೊಳಿಸಿ ನಿಬ್ಬಾಣದಲ್ಲಿ ಪ್ರತಿಷ್ಠಿತರಾಗಲು ಸಹಾಯಕರಾಗುತ್ತಾರೆ. ಎಲ್ಲರಿಗೂ ಜ್ಞಾನ ನೀಡಬಲ್ಲ ಪೂರ್ಣಪ್ರಜ್ಞರಾಗುತ್ತಾರೆ.




bodhisatta the great ideal - ಬೋಧಿಸತ್ತ್ವ - ಒಂದು ಮಹಾನ್ ಆದರ್ಶ

                    ಬೋಧಿಸತ್ತ್ವ - ಒಂದು ಮಹಾನ್ ಆದರ್ಶ



                ಬುದ್ಧರಾಗುವ ಮುನ್ನ ಭಗವಾನರಿಗೆ ಬೋಧಿಸತ್ತ್ವ ಎಂದೇ ಕರೆಯುತ್ತಾರೆ. ಬೋಧಿಸತ್ತ್ವ ಎಂದರೆ ಭವಿಷ್ಯದ ಬುದ್ಧ ಎಂದು ಹೇಳಬಹುದು. ಬೋಧಿಸತ್ತ್ವ ಪದ ಪಾಳಿಯದು. ಸಂಸ್ಕೃತದಲ್ಲಿ ಬೋಧಿಸತ್ತ್ವ ಅಥವಾ ಬೋಧಿಸತ್ತ ಎಂದು ಕರೆಯುತ್ತಾರೆ. ಬೋಧಿ ಎಂದರೆ ಪರಮ ಶ್ರೇಷ್ಠ ಜ್ಞಾನ. ಸತ್ತ್ವ ಎಂದರೆ ಜೀವಿ. ಒಟ್ಟಾರೆ ಹೇಳುವುದಾದರೆ ಜ್ಞಾನದ ಜೀವಿ ಎಂದು ಪದಶಃ ಅರ್ಥ ಹೇಳಬಹುದು. ಸ್ವಲ್ಪ ವಿವರವಾದ ಅರ್ಥವೆಂದರೆ ಲೋಕದ ಸರ್ವಜೀವಿಗಳನ್ನು ದುಃಖ ವಿಮುಕ್ತರನ್ನಾಗಿಸಲು, ನಿಬ್ಬಾಣಕ್ಕೆ ಮಾರ್ಗದಶರ್ಿಯಾಗಲು, ಅದಕ್ಕೆ ಅತ್ಯವಶ್ಯಕವಾಗಿರುವ ಸಮ್ಮ ಸಂಬುದ್ಧತ್ವವನ್ನು ಪ್ರಾಪ್ತಿಮಾಡಿ ಸಮ್ಮ ಸಂಬುದ್ಧರಾಗಲು ದೃಢಸಂಕಲ್ಪ ಮಾಡಿರುವ ಜೀವಿ. ಮಹಾನ್ ಗುರಿಗೆ ಬೇಕಾದ ಅಸೀಮ ಕರುಣೆ, ವಿಶಾಲಾನಂತ ಜ್ಞಾನವನ್ನು, ಅಪಾರ ಸಹನಾಶೀಲತೆ, ಶ್ರೇಷ್ಠ ಶೀಲ, ಪರಮ ಶಾಂತಶೀಲತೆ ಮುಂತಾದ ಪಾರಮಿ (ಪರಿಪೂರ್ಣ ಸದ್ಗುಣ)ಗಳನ್ನು ಹೊಂದಿರುವ ಜೀವಿ. ಸಾಮಾನ್ಯ ಅರ್ಥದಲ್ಲಿ ಬೋಧಿ ಪ್ರಾಪ್ತಿಗೆ ಇಚ್ಛಿಸುವ ವ್ಯಕ್ತಿಗಳಿಗೆ ಹೇಳುವುದಾದರೂ ನಿಜ ಅರ್ಥದಲ್ಲಿ ಅದಕ್ಕೆ ಬೇಕಾದ ಅರ್ಹಗುಣಗಳನ್ನು ಹೊಂದಿ ಭಗವಾನ್ ಬುದ್ಧರಿಂದಲೇ ಅಂಗೀಕರಿಸಿ ಮುಂದೆ ಬೋಧಿಸತ್ತ್ವ ಸಮ್ಮ ಸಂಬುದ್ಧನಾಗುವರು ಎಂದು ನಿಖರವಾಗುವವರಿಗೆ ಮಾತ್ರ ಬೋಧಿಸತ್ತ್ವ ಎನ್ನುವರು.

                ಬುದ್ಧತ್ವವು ಸಾಮಾನ್ಯವಾದುದಲ್ಲ. ಅದು ಬೇಗನೆ ಪ್ರಾಪ್ತವಾಗು ವಂತಹುದು ಅಲ್ಲ. ಮಹಾ ಪರ್ವತಕ್ಕೆ ಅಡ್ಡದಾರಿಗಳು ಇಲ್ಲ. ಬುದ್ಧತ್ವದ ಇಚ್ಛೆಯು ಉಂಟಾಗುವ ಬಗೆಯು ಸುಲಕ್ಷಣವಾಗಿದೆ. ಬುದ್ಧರ ಮಹೋನ್ನತೆ ಅರಿತು ಅವರಂತೆ ಆಗುವ ಬಯಕೆ ಒಂದು ವಿಧವಾದರೆ, ಜಗತ್ತಿನ ಜೀವಿಗಳು ದುಃಖದಿಂದ ನರಳುವುದನ್ನು ಕಂಡು ಜಗತ್ತಿನ ಜೀವಿಗಳು ದುಃಖದಿಂದ ನರಳುವುದನ್ನು ಕಂಡು ಜಗತ್ತಿನ ಜೀವಿಗಳ ದುಃಖ ವಿಮುಕ್ತಿಗಾಗಿ ಬುದ್ಧರಾಗಲು ಪ್ರಯತ್ನಿಸುತ್ತಾರೆ. ಮತ್ತೆ ಕೆಲವರು ಪರಿಪೂರ್ಣತೆಯ ಸ್ಥಿತಿಗೆ ಹಾತೊರೆದು ಬುದ್ಧರಾಗಲು ಇಚ್ಛಿಸುತ್ತಾರೆ. ಬುದ್ಧತ್ವಕ್ಕಿಂತ ಪರಮಸ್ಥಿತಿಯಿಲ್ಲ. ಬುದ್ಧತ್ವಕ್ಕೆ ಮೀರಿದುದು ಯಾವುದೂ ಇಲ್ಲ. ಬೇರೆಲ್ಲವೂ ಮಾನವನ ಅತೃಪ್ತಿಯನ್ನು ಅಶಾಂತಿಯನ್ನು ಹೆಚ್ಚಿಸುತ್ತದೆ. ಆದರೆ ಬುದ್ಧತ್ವವು ಸರ್ವರಿಗೆ ಪರಿಪೂರ್ಣ ಸುಖವನ್ನು, ಸರ್ವದುಃಖ ವಿಮುಕ್ತಿಯನ್ನು, ಪರಿಪೂರ್ಣ ಪರಮೋನ್ನತಿಯನ್ನು ನೀಡುತ್ತದೆ. ಅದು ಪೂರ್ಣ ಶಾಂತ ಸ್ಥಿತಿ. ಅದು ಮಹಾ ಕರುಣೆಯ ಸಾಕಾರ ಸ್ಥಿತಿ. ಸರ್ವ ಅಲೌಕಿಕ ಶಕ್ತಿಯ ಪರಮೋನ್ನತ ಸ್ಥಿತಿ. ಒಟ್ಟಾರೆ ಹೇಳುವುದಾದರೆ ಪೂರ್ಣ ಜ್ಞಾನ - ಪೂರ್ಣಕರುಣೆಯ ಅದ್ಭುತವಾದ ಸಂಗಮಸ್ಥಿತಿ. ಸಂಗಮದಿಂದ ಉಂಟಾಗುವ ಸ್ಫೋಟವೇ ಧಮ್ಮ ಘೋಷಣೆ. ಅಲ್ಲಿಂದ ಹೊರಹೊಮ್ಮುವ ಕೋಟಿ ಸೂರ್ಯರ ಪ್ರಕಾಶವೇ ನಿಬ್ಬಾಣ ಪ್ರಾಪ್ತಿಯ ಜ್ಞಾನ. ಅದ್ವಿತೀಯ ಅನುಭವ ಹೊಂದಿದವರೆ ಧನ್ಯರು. ಅವರು ಮತ್ತೆ ಅವನತಿಗೆ ಇಳಿಯುವುದಿಲ್ಲ. ಸದಾ ಮಂಗಳಕರ ವಾದುದನ್ನು ಸಾಧಿಸಿ ಎಲ್ಲ ದುಃಖದಿಂದ ಮುಕ್ತರಾಗುತ್ತಾರೆ.

                ಬೋಧಿಸತ್ತರು ತಮ್ಮನ್ನು ಹಾಗೂ ಪರರನ್ನೂ ಭೇದಭಾವದಿಂದ ನೋಡುವುದಿಲ್ಲ - ನಾನು ಎಲ್ಲಾ ಜೀವಿಗಳಂತೆಯೆ, ನಾನು ಸುಖವನ್ನು, ಶಾಂತಿಯನ್ನು ಇಚ್ಛಿಸುತ್ತೇನೆ, ದುಃಖವನ್ನಲ್ಲ. ರೀತಿ ನಾವೆಲ್ಲಾ ಒಂದೇ. ನಾನಾದರೂ ಒಬ್ಬ ಜೀವಿ. ಆದರೆ ಇಲ್ಲಿ ಅಸಂಖ್ಯ ಜೀವಿಗಳಿದ್ದಾರೆ. ಆದ್ದರಿಂದ ನನಗಿಂತ ಪರರಿಗೆ ನಾನು ಮೌಲ್ಯವನ್ನು ನೀಡಬೇಕು. ನಾನಾದರೋ ದುಃಖದಿಂದ ಮುಕ್ತನಾಗಬಲ್ಲೆ. ಆದರೆ ಸರ್ವರ ದುಃಖ ವಿಮುಕ್ತಿ ಪ್ರಧಾನವಾಗಿದೆ. ಆದ್ದರಿಂದ ನಾನು ದುಃಖ ವಿಮುಕ್ತ ಅರಹಂತನಾಗುವ ಬದಲು ಸಮ್ಮಸಂಬುದ್ಧ ಆಗುತ್ತೇನೆ ಎಂದು ಚಿಂತಿಸುತ್ತಾರೆ.

                ರೀತಿಯ ಕರುಣೆ ಮತ್ತು ಜ್ಞಾನದ ಪ್ರಚ್ಛನ್ನತೆಯ ಮನದಲ್ಲೆ ಆಳವಾಗಿ ಬೇರೂರುವ ಕಾಲಕ್ಕೆ ಮನೋ ಪಣಿದಾನ ಕಾಲ ಎನ್ನುತ್ತಾರೆ. ನಂತರ ಇಚ್ಛೆಯು ಮಾತಿನಲ್ಲಿ ಪ್ರಕಾಶವಾಗುವ ಕಾಲಕ್ಕೆ ವಚಿ ಪಣಿದಾನ ಕಾಲ ಎನ್ನುತಾರೆ. ನಂತರ ಕಾಯದಲ್ಲಿ ಆಗಬೇಕಾದ ಅರ್ಹಗುಣಗಳನ್ನು ಸಾಧಿಸಿ, ಸೇವಾಕಾರ್ಯಗಳು ಅಧಿಕವಾದಾಗ ಕಾಯಪಣಿಧಾನಕಾಲ ಎನ್ನುತ್ತಾರೆ

                ಬುದ್ಧರಿಂದ ಬೋಧಿಸತ್ತ್ವ ಎಂದು ಅಂಗೀಕಾರವಾಗಬೇಕಾದರೆ ಎಂಟು ಗುಣಗಳು ಪೂರ್ಣವಾಗಬೇಕಾಗುತ್ತದೆ, ಅದೆಂದರೆ :-

1.            ಆತನು ಮಾನವನಾಗಿರಬೇಕು.
2.            ಆತನು ಪುರುಷನಾಗಿರಬೇಕು.
3.            ಆತನು ತಿಹೇತುಕ - ಪಟಿಸಂದಿ - ಪುಗ್ಗಲನಾಗಿರಬೇಕು. ಅಂದರೆ ಅದ್ವೇಷ, ಅಲೋಭ ಮತ್ತು ಅಮೋಹದಿಂದ ಹುಟ್ಟಿರಬೇಕು. ಅಂತಹ ವ್ಯಕ್ತಿ ಯಾವಾಗ ಬೇಕಾದರೂ ಅರಹಂತನಾಗುವ ಸಾಮಥ್ರ್ಯ ಪಡೆದಿರುತ್ತಾನೆ.
4.            ಬೋಧಿಸತ್ತ್ವ ಭಗವಾನ್ ಬುದ್ಧರನ್ನು ಮುಖಾಮುಖಿಯಾಗಿ ಭೇಟಿಯಾಗಿ ಬುದ್ಧರಿಂದ ಅಂಗೀಕಾರ ಮಾಡಿಕೊಂಡಿರಬೇಕು.
5.            ಆತನು ಭಿಕ್ಷುವಾಗಿ ಅದಕ್ಕೆ ಅನುಗುಣವಾದ ಪರಿಶುದ್ಧ ಮತ್ತು ಸೇವಾಯುತ ಜೀವನವನ್ನು ನಡೆಸಬೇಕು.
6.            ಆತನು ದೃಢ ಪರಿಶ್ರಮದಿಂದ ಅಷ್ಠಸಮಾಪತ್ತಿ ಧ್ಯಾನವನ್ನು ಪ್ರಾಪ್ತಿಮಾಡಿ ಅಭಿಜ್ಞಾ (ಪವಾಡ) ಶಕ್ತಿಯನ್ನು ಗಳಿಸಿರಬೇಕು.
7.            ಬುದ್ಧರಲ್ಲಿ ಅದ್ವಿತೀಯ ಭಕ್ತಿಯುಳ್ಳವನಾಗಿ ಅವರಿಗಾಗಿ ಪ್ರಾಣ ಕೊಡಲು ಸಹಾ ಸಿದ್ಧನಾಗಿರಬೇಕು.
8.            ಬೋಧಿಸತ್ತ್ವರಿಗೆ ಅತ್ಯಂತ ಅವಿಚಲವಾದ ವಜ್ರದಂತಹ ದೃಢ ನಿಧರ್ಾರವಿರಬೇಕು. ತಮ್ಮ ಗುರಿ ಪ್ರಾಪ್ತಿಗಾಗಿ ಘೋರ ಸಂಕಷ್ಟಗಳು, ನರಕಗಳನ್ನು ಅನುಭವಿಸಲು ಸಿದ್ಧನಾಗಿರಬೇಕು.
                ರೀತಿಯ ಅರ್ಹ ಗುಣಗಳನ್ನು ಪೂರ್ಣಗೊಳಿಸಿಕೊಂಡು ಸುಮೇಧ ಬೋಧಿಸತ್ತ್ವರು ಬುದ್ಧ ದೀಪಂಕರರವರಿಂದ ಭವಿಷ್ಯ ಬುದ್ಧ ಎಂದು ಅಥವಾ ಮಹಾ ಬೋಧಿಸತ್ತ್ವ ಎಂದು ಕರೆಸಿಕೊಂಡರು. ಮುಂದೆ 24 ಬುದ್ಧರಿಂದ ರೀತಿ ನಿಶ್ಚಯಿಸಲ್ಪಟ್ಟು ಕೊನೆಗೆ ವೆಸ್ಸಂತರ ಜನ್ಮದಲ್ಲಿ ಮಹಾದಾನಗೈದು, ತುಸಿತ ಲೋಕದಲ್ಲಿ ಪ್ರಭಾಫಲ ದೇವನಾಗಿ ಹುಟ್ಟಿದರು. ನಂತರ ಅಂತಿಮ ಜನ್ಮದಲ್ಲಿ ಸಿದ್ಧಾರ್ಥಗೋತಮ ಸಮ್ಮ ಸಂಬುದ್ಧರಾದರು.

                ಬೋಧಿಸತ್ತ್ವರಾದ ಮೇಲೆ ಅವರು ಪಾರಮಿಗಳನ್ನು ಅಂದರೆ ಸಮ್ಮಾ ಸಂಬೋಧಿತ್ವವನ್ನು ಸಾಧಿಸಲು ಬೇಕಾದ ಸದ್ಗುಣದ ಪರಿಪೂರ್ಣತೆಗಳನ್ನು ಸಾಧಿಸಬೇಕಾಗುತ್ತದೆ. ಪಾರಮಿಗಳು ಮೂರು ಹಂತದಲ್ಲಿರುತ್ತವೆ. ಪಾರಮಿ, ಉಪ ಪಾರಮಿ, ಪಾರಮಿತ ಪಾರಮಿ.


ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....