Monday, 16 December 2019

ಬೋಧಿಸತ್ತರ ಅಭಯದಾನ

 ಬೋಧಿಸತ್ತರ ಅಭಯದಾನ


ಬಹುಕಾಲದ ಹಿಂದೆ ಬೋಧಿಸತ್ತರು ವಾರಾಣಸಿಯಲ್ಲಿ ವಾನರರಾಗಿ ಹುಟ್ಟಿದರು. ನಂತರ ಅವರೇ ಆ ಕಪಿಗಳ ದಂಡಿಗೆ ನಾಯಕರೂ ಆದರು. ಅವರು ಹಿಮಾಲಯದ ಗಂಗಾತಟದಲ್ಲಿ ಬೃಹತ್ ಮಾವಿನ ಮರದಲ್ಲಿ ವಾಸವಾಗಿದ್ದರು. ಆ ಮಾವಿನ ಮರದ ಒಂದು ಭಾಗವು ಹರಿಯುತ್ತಿರುವ ಗಂಗಾನದಿಯ ಕಡೆಗಿತ್ತು. ಆ ಮಾವಿನ ಮರದ ಹಣ್ಣುಗಳು ನಿಜಕ್ಕೂ ಅದ್ಭುತವಾಗಿತ್ತು. ಅದರ ರುಚಿಗೆ ಮಾರುಹೋಗದವರೇ ಇರಲಿಲ್ಲ. ಆ ಕಪಿಗಳ ಗುಂಪು ಸಹಾ ಆ ಮಾವಿಗೆ ಆಕಷರ್ಿತರಾಗಿ ಅಲ್ಲೇ ನೆಲೆಸಿದ್ದವು. ಆ ಮರವು ನಾಗರಿಕ ಪ್ರಪಂಚದಿಂದ ದೂರವಾಗಿತ್ತು. ಹೀಗಾಗಿ ಆ ಮಾವು ಜನರ ಕಣ್ಣಿಗೆ ಬಿದ್ದಿರಲಿಲ್ಲ. ಬೋಧಿಸತ್ವರಿಗೆ ದೂರದೃಷ್ಟಿಯ ಪ್ರಜ್ಞೆಯಿದ್ದುದರಿಂದಾಗಿ ಅವರು ಆ ಮಾವು ಜನರ ಕಣ್ಣಿಗೆ ಬೀಳಬಾರದೆಂದು ಅವರು ಗಂಗಾನದಿಗೆ ವಾಲಿದ್ದ ಕೊಂಬೆಯಲ್ಲಿದ್ದ ಹೂವು, ಕಾಯಿ ಮತ್ತು ಹಣ್ಣುಗಳೆಲ್ಲವನ್ನೂ ನಾಶಪಡಿಸಿತ್ತು. ಹೀಗಾಗಿ ಎಂದಿಗೂ ಮಾವು ನೀರಿನಲ್ಲಿ ಹರಿದು ಜನರಿಗೆ ಸಿಕ್ಕಿರಲಿಲ್ಲ. ಆದರೂ ಒಮ್ಮೆ ಹೇಗೋ ಒಂದು ಮಾವು ಹರಿಯುತ್ತ, ಹರಿಯುತ್ತ, ಜಲಕ್ರೀಡೆಯಾಡುತ್ತಿದ್ದ ವಾರಾಣಸಿಯ ರಾಜನಿಗೆ ಸಿಕ್ಕಿತ್ತು. ಅದನ್ನು ಆತನು ತಿಂದನಂತರ ಆತನು ಅಪಾರ ರಸತೃಷ್ಣೆಗೆ ಒಳಗಾದನು. ಕಂಡಕಂಡವರೊಂದಿಗೆ ಈ ಹಣ್ಣಿನ ಬಗ್ಗೆ ವಿಚಾರಿಸಿದನು. ಆದರೆ ಆ ಹಣ್ಣಿನ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಕೊನೆಗೆ ಒಬ್ಬ ಹಿಮಾಲಯದಲ್ಲಿ ವಾಸವಾಗಿ ಅಲ್ಲಿಂದ ವಲಸೆ ಬಂದಿದ್ದಂತಹ ಕಾಡು ಮನುಷ್ಯರಿಗೆ ವಿಚಾರಿಸಿದಾಗ ಆ ಮಾವಿನ ಹಣ್ಣು ಹಿಮಾಲಯ ಪ್ರಾಂತ್ಯದಲ್ಲಿ ಸಿಗುವುದೆಂದು ಮಾಹಿತಿ ಪಡೆದನು. ರಾಜನು ಕೂಡಲೇ ಪ್ರಯಾಣ ಆರಂಭಿಸಿ ಆ ಸ್ಥಳವನ್ನು ಸಹಾ ಹುಡುಕಿ, ರಾಜ ಮತ್ತು ಆತನ ಸೈನ್ಯವು ಅಲ್ಲಿ ಬೀಡುಬಿಟ್ಟು ಹೊಟ್ಟೆ ತುಂಬಾ ಮಾವು ತಿಂದು ಅಲ್ಲೇ ಮಲಗಿದರು.

ಆ ಸಮಯದಲ್ಲಿ ಅಲ್ಲಿದ್ದ ವಾನರರು ಬೇರೆ ಸ್ಥಳದಲ್ಲಿ ಸುತ್ತಾಡಿ, ರಾತ್ರಿ ವೇಳೆಗೆ ಮಾವಿನ ಮರದ ಬಳಿಗೆ ಬಂದಾಗ, ಅಲ್ಲಿ ರಾಜ ಮತ್ತು ಅವನ ಸೈನ್ಯವನ್ನು ಕಂಡರು. ಅವುಗಳು ಹಸಿವು ತಾಳಲಾರದೆ ಎಚ್ಚರಿಕೆಯಿಂದ ಮರವನ್ನು ಹತ್ತಿ, ಹಣ್ಣುಗಳನ್ನು ತಿನ್ನತೊಡಗಿದವು. ಆದರೆ ಒಂದು ಕಪಿಯು ಅಭ್ಯಾಸ ಬಲದಿಂದ ಬೀಜವನ್ನು ಕೆಳಕ್ಕೆ ಎಸೆದಾಗ ಮಲಗಿದ್ದ ರಾಜನ ಮೇಲೆ ಬಿದ್ದಿತು. ಎಚ್ಚೆತ್ತ ಆತನು ಕಪಿಗಳು ಮಾವು ತಿನ್ನುವುದನ್ನು ಕಂಡು ಅತಿಯಾಗಿ ಕೋಪಗೊಂಡನು. ಕೂಡಲೇ ಹೀಗೆ ಆಜ್ಞಾಪಿಸಿದನು: ಈ ಕೋತಿಗಳನ್ನೆಲ್ಲಾ ಕೊಲ್ಲಿ, ನಾಳೆ ಕೋತಿ ಮಾಂಸದ ಜೊತೆಗೆ ಮಾವು ತಿನ್ನೋಣ ಎಂದನು. ಭಟರು ಬಾಣಗಳನ್ನು ಬಿಡತೊಡಗಿದರು. ಕೋತಿಗಳೆಲ್ಲಾ ಹೆದರಿದವು. ದೊಡ್ಡ ರೆಂಬೆಯ ಮರೆಯಲ್ಲಿ ಎಲ್ಲವೂ ರಕ್ಷಣೆ ಪಡೆದವು. ಆದರೂ ಅಲ್ಲಿಯೂ ಸುರಕ್ಷಿತೆ ಎಲ್ಲಿಯವರೆಗೆ, ಹೀಗಾಗಿ ಬೋಧಿಸತ್ವರಿಗೆ ಶರಣು ಹೇಳಿದವು. ಆಗ ಭೋಧಿಸತ್ವರು ಓ ಸೋದರರೇ, ಹೆದರದಿರಿ ನಾನು ಕಾಪಾಡುವೆನು, ಅಲ್ಲಿಯವರೆಗೆ ಇದೇ ಮರೆಯಲ್ಲಿರಿ ಎಂದು ಆಜ್ಞಾಪಿಸಿ, ಮಾವಿನ ಮರದ ತುದಿಗೆ ಏರಿ, ಒಂದು ಬಾಗಿದ ರೆಂಬೆಯಲ್ಲಿ ದುಮುಕಿ, ಅದರಿಂದಾದ ಎಸೆತಕ್ಕೆ ಹಾರಿ, ಗಂಗಾನದಿಯ ತೀರದ ಮರವೊಂದಕ್ಕೆ ದುಮುಕಿದನು. ನಂತರ ಆ ಮರದಿಂದ, ಈ ಮರಕ್ಕೆ ಆಗುವ ದೂರವನ್ನು ಲೆಕ್ಕಾಚಾರ ಹಾಕಿ ಅಲ್ಲಿದ್ದ ಬಳ್ಳಿಗಳನ್ನು ಸೇರಿಸಕೊಂಡು ಸೊಂಟಕ್ಕೆ ಕಟ್ಟಿಕೊಂಡು, ಆ ಮರದಿಂದ, ಮಾವಿನ ಮರಕ್ಕೆ ದೊಂಬಾರ ನೆಗೆತ ಮಾಡಿದನು. ಆದರೆ ಸ್ವಲ್ಪ ಲೆಕ್ಕಾಚಾರ ತಪ್ಪಿ, ಆತನು ಮಾವಿನ ಮರದಲ್ಲಿ ಇಳಿಯಲಾರದೆ, ಕೇವಲ ರೆಂಬೆಯನ್ನು ಹಿಡಿದನು. ಆದರೂ ವಿಷಾಧಿಸದೆ ತನ್ನ ಪಡೆಗೆ, ತನ್ನ ಬೆನ್ನ ಮೇಲಿಂದ ನಡೆದುಕೊಂಡು ಬಳ್ಳಿಯ ಸಹಾಯದಿಂದ ಆ ದಡವನ್ನು ಸೇರಿ ಪ್ರಾಣ ಉಳಿಸಿಕೊಳ್ಳಿ ಎಂದು ಸನ್ನೆ ಮಾಡಿದನು. ಅದರಂತೆಯೇ ಆ ಕಪಿಗಳೆಲ್ಲ ಬೋಧಿಸತ್ವರ ಬೆನ್ನನ್ನು ತುಳಿದುಕೊಂಡು ಬಳ್ಳಿಯಲ್ಲಿ ನೇತಾಡುತ್ತ ಆ ದಡವನ್ನು ತಲುಪಲು ಆರಂಭಿಸಿದವು.


 ಆದರೆ ಆ ಕಪಿ ಗುಂಪಿನಲ್ಲಿ ದುಷ್ಟ ಕೋತಿಯೊಂದು ಸಹಾ ಇತ್ತು. ಅದಕ್ಕೆ ಬೋಧಿಸತ್ವರನ್ನು ಕಂಡರೆ ಈಷರ್ೆಯಿತ್ತು. ಹೀಗಾಗಿ ಅದು ದೊಡ್ಡ ರೆಂಬೆ ಏರಿ, ಅಲ್ಲಿಂದ ಬೋಧಿಸತ್ವರ ಬೆನ್ನಮೇಲೆ ಜೋರಾಗಿ ಧುಮುಕಿತು. ಇದರಿಂದಾಗಿ ಬೋಧಿಸತ್ವರಿಗೆ ಪ್ರಾಣ ಹೋದಂತೆ ಆಯಿತು. ಆದರೂ ಸರ್ವಹಿತಕ್ಕಾಗಿ, ನೋವನ್ನು ಸಹಿಸಿಕೊಂಡು, ರೆಂಬೆ ಮಾತ್ರ ಬಿಡಲಿಲ್ಲ. ಎಲ್ಲರೂ ಹೊರಟ ನಂತರ ಕುಸಿದು ಬಿದ್ದಿತ್ತು.

 ರಾಜನು ಬೋಧಿಸತ್ವರ ಈ ಪರಾಕ್ರಮ, ನಾಯಕತ್ವ, ಬುದ್ಧಿಮತ್ತತೆ, ತನ್ನ ಗುಂಪಿಗಾಗಿ ತನ್ನನ್ನು ಅಪರ್ಿಸಿಕೊಂಡಿತ್ತು. ಈ ಎಲ್ಲವನ್ನು ಬಹುವಾಗಿ ಮೆಚ್ಚಿ ಆ ವಾನರನ ಆರೈಕೆ ಮಾಡಿದನು. ರಾಜನು ಮಾತನಾಡಿಸಿದಾಗ ಅದು ಹೀಗೆ ಹೇಳಿ ಮಡಿಯಿತು ನಾಯಕನಾದವನು ತನ್ನ ಹಿಂಡಿನ ಎಲ್ಲರ ಬಗ್ಗೆ ಕ್ಷೇಮ ಚಿಂತಿಸಿ, ಸುಖವನ್ನುಂಟು ಮಾಡಬೇಕು ಎಂದು. ರಾಜನು ಗೌರವದಿಂದ ಬೋಧಿಸತ್ತರಿಗೆ ಚೈತ್ಯ ಕಟ್ಟಿಸಿದನು. 

No comments:

Post a Comment

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....