Monday, 16 December 2019

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ

ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು. ಅದಕ್ಕೆ ಉದಾಹರಣೆಯೇ ಸಸ ಬೋಧಿಸತ್ವರ ಈ ದಾನಕಥೆ.
ಬಹುಕಾಲದ ಹಿಂದೆ ಬೋಧಿಸತ್ವರು ಮೊಲವಾಗಿ ಹುಟ್ಟಿದ್ದರು. ಆದರೂ ಸಹಾ ಪೂರ್ವ ಜನ್ಮಗಳ ನೆನಪಿನಿಂದಾಗಿ ಹಾಗು ನಿರಂತರ ಆಚರಣೆಗಳಿಂದಾಗಿ ಅವರು ಮೊಲವಾಗಿ ಹುಟ್ಟಿದ್ದರೂ ಸಹಾ ಅವರು ದಾನವನ್ನು ಮರೆಯುತ್ತಿರಲಿಲ್ಲ, ಶೀಲವನ್ನು ಭಂಗ ಮಾಡುತ್ತಿರಲಿಲ್ಲ. ಹುಣ್ಣಿಮೆಯ ದಿನ ಉಪೋಸಥ ವ್ರತಗಳನ್ನು ಪಾಲಿಸುತ್ತಿತ್ತು. ಹಾಗೆಯೇ ತನ್ನಂತೆ ಇತರರನ್ನು ದಾನಿಗಳಾಗಿ, ಶೀಲವಂತರಾಗಿ ಪರಿವತರ್ಿಸಲು ಯತ್ನಿಸುತ್ತಿತ್ತು. ಅದರಂತೆಯೇ ಅದಕ್ಕೆ ನೀರುಬೆಕ್ಕು, ನರಿ ಮತ್ತು ಕೋತಿಗಳ ಸ್ನೇಹ ಉಂಟಾಯಿತು. ಅವಕ್ಕೂ ಅದು ಬೋಧನೆ ನೀಡಿ ಧಮ್ಮದಲ್ಲಿ ಪ್ರತಿಷ್ಠಾಪಿಸಿತ್ತು.
ಹೀಗೆ ಕಾಲದ ಪ್ರಯೋಜನ ಪಡೆಯುತ್ತಿರಬೇಕಾದರೆ ಒಂದುದಿನ ಚಂದ್ರನನ್ನು ಕಂಡು ಮೊಲವು ತನ್ನ ಸ್ನೇಹಿತರಾದ ಬೆಕ್ಕು, ನರಿ ಮತ್ತು ಕೋತಿಗಳಿಗೆ ಹೀಗೆ ಹೇಳಿತು: ನಾಳೆ ಹುಣ್ಣಿಮೆ, ನಾಳೆ ಶೀಲಗ್ರಹಣೆ ಮಾಡಿ ಪಾಲಿಸುತ್ತ ಉಪವಾಸದಲ್ಲಿ ತೊಡಗಿ, ಯಾಚಕರು ಯಾರೇ ಆಗಿರಲಿ ಅವರಿಗೆ ದಾನ ನೀಡೋಣ ಎಂದು ಅವರ ಮನವೊಲಿಸಿತು.
ಅದರಂತೆಯೇ ಅವು ಅಂದು ಶೀಲವನ್ನು ಪಾಲಿಸುತ್ತ, ಉಪವಾಸದಲ್ಲಿ ತೊಡಗಿ ಮೈತ್ರಿಯ ಚಿಂತನೆ ಮಾಡುತ್ತಾ, ದಾನ ನೀಡಲು ಯಾಚಕರಿಗೆ ಕಾಯುತ್ತ ಇದ್ದವು.
ಇವುಗಳ ಧಮರ್ಾಚರಣೆಯೂ ಇಂದ್ರನ ಗಮನಕ್ಕೂ ಬಂದಿತು. ಆತನು ಇವರೆಲ್ಲರನ್ನು ಪರೀಕ್ಷಿಸಲು ಬಂದನು. ಆತನು ಮೊದಲಿಗೆ ನೀರುಬೆಕ್ಕಿನ ಬಳಿಗೆ ಬಂದನು. ಅದು ಹತ್ತಿರದ ನೀರಿನಿಂದ ಏಳು ಕೆಂಪು ಮೀನುಗಳನ್ನು ತಂದು ದಾನ ನೀಡಬೇಕೆಂದು ಇಟ್ಟುಕೊಂಡಿತ್ತು. ಬ್ರಾಹ್ಮಣ ವೇಷಧಾರಿಯಾದ ಇಂದ್ರನಿಗೆ ಅದು ಏಳು ಕೆಂಪು ಮೀನುಗಳನ್ನು ನೀಡಲು ಮುಂದಾಯಿತು. ಆದರೆ ಬ್ರಾಹ್ಮಣ ಆಮೇಲೆ ಬರುತ್ತೇನೆ ಎಂದು ಹೊರಟನು.
ನಂತರ ಆ ಬ್ರಾಹ್ಮಣನು ನರಿಯ ಬಳಿಗೆ ಬಂದಾಗ, ಅದು ಸುಟ್ಟ ಮಾಂಸ ಮತ್ತು ಮೊಸರನ್ನು ದಾನವಾಗಿ ನೀಡಲು ಮುಂದಾಯಿತು. ಆದರೆ ಬ್ರಾಹ್ಮಣನು ಅದನ್ನು ಆಮೇಲೆ ಸ್ವೀಕರಿಸುವೆ ಎಂದು ಹೇಳಿ ಮುಂದೆ ನಡೆದನು.
ನಂತರ ಅವನು ಕೋತಿಯ ಬಳಿಗೆ ಬಂದಾಗ ಅದು ಮಾವಿನ ಗೊಂಚಲನ್ನು ನೀಡಲು ಮುಂದಾಯಿತು. ಆ ಬ್ರಾಹ್ಮಣನು ಪುನಃ ಬರುವೆ ಎಂದು ನುಡಿದು ಮೊಲದ ಬಳಿಗೆ ಬಂದರು.
ಆ ಸಮಯದಲ್ಲಿ ಮೊಲವು ದಾನದ ಬಗ್ಗೆ ಹೀಗೆ ಗಂಭೀರವಾಗಿ ಚಿಂತಿಸುತ್ತಿತ್ತು. ನಾನು ಯಾಚಕರಿಗೆ ಹುಲ್ಲು ನೀಡಲಾರೆ, ಎಳ್ಳಾಗಲಿ ಅಥವಾ ಅಕ್ಕಿಯಾಗಲಿ ನನ್ನಲ್ಲಿ ಇಲ್ಲ. ಆದ್ದರಿಂದ ನನ್ನ ದೇಹವನ್ನು ದಾನವಾಗಿ ನೀಡಿದರೆ ಹೇಗೆ?
ಅದೇ ಸಮಯದಲ್ಲಿ ಬ್ರಾಹ್ಮಣ ಅಲ್ಲಿಗೆ ಬಂದಾಗಿ ದಾನ ನೀಡಲು ಅದು ಅತ್ಯಂತ ಆನಂದವನ್ನೇ ವ್ಯಕ್ತಪಡಿಸಿತು. ಅದು ಬ್ರಾಹ್ಮಣನಿಗೆ ಹೀಗೆ ಹೇಳಿತು: ಓ ಬ್ರಾಹ್ಮಣ, ನನ್ನ ಬಳಿ ಯಾಚನೆಗೆ ಬಂದು, ಮಹದುಪಕಾರವನ್ನೇ ಮಾಡಿರುವೆ. ಆದರೆ ನನ್ನ ಬಳಿ ಅಕ್ಕಿಯಾಗಲಿ, ಎಳ್ಳಾಗಲಿ, ಕೊನೇಪಕ್ಷ ಹುಲ್ಲು ಸಹಾ ನನ್ನಲ್ಲಿಲ್ಲ. ಆದರೆ ನನ್ನ ದೇಹವೇ ದಾನಕ್ಕೆ ಸಿದ್ಧವಾಗಿದೆ, ದಯವಿಟ್ಟು ಸ್ವೀಕರಿಸಲು ಸಂಕೋಚಿಸಬೇಡ, ನೀನೇನು ಕೊಲ್ಲಬೇಕಾಗಿಲ್ಲ, ಕೇವಲ ಅಗ್ನಿಯನ್ನು ಸಿದ್ಧಪಡಿಸಿದರೆ ಸಾಕು, ನಾನು ಅಗ್ನಿಯನ್ನು ಕಂಪಿಸದೆ ಪ್ರವೇಶ ಮಾಡುವೆ, ನನ್ನನ್ನು ತಿಂದು ಸುಖವಾಗಿರು.
ಇಂದ್ರನು ಇದನ್ನು ಕೇಳಿ ಸ್ತಂಭೀಭೂತನಾದನು. ಆದರೂ ಪರೀಕ್ಷಿಸಲು ಮುಂದಾದನು. ಆತನು ಬೆಂಕಿಯನ್ನು ಸಿದ್ಧಪಡಿಸಿದನು. ಆಗ ಮೊಲವು ಅಗ್ನಿ ಪ್ರವೇಶಿಸುವ ಮುನ್ನ ದೇಹವನ್ನು ಪ್ರಬಲವಾಗಿ ಒದರಿತು.
ಅದನ್ನು ಕಂಡು ಇಂದ್ರನು ಓ ಮೊಲವೆ, ನಿನಗೆ ಭಯವಾದರೆ ಬೇಡ ಎಂದನು. ಆದರೆ ಆ ಮೊಲವು ಹೀಗೆ ಹೇಳಿತು: ಓ ಬ್ರಾಹ್ಮಣ, ನಾನು ದಾನ ನೀಡಲು ಎಂದಿಗೂ ನಡುಗಲಾರೆನು. ನಾನು ನನ್ನ ಶರೀರವನ್ನು ಒದರಿದ್ದು ಏಕೆಂದರೆ ಕೂದಲಿನಲ್ಲಿ ನೆಲೆಸಿರುವ ಕ್ರಿಮಿಗಳು ಅಗ್ನಿಗೆ ಆಹುತಿಯಾಗದಿರಲೆಂದು ಎಂದು ಹೇಳಿ ಅಗ್ನಿಯ ಮಧ್ಯೆ ಹೋಗಿ ಕುಳಿತಿತು. ಆದರೆ ಆಶ್ಚರ್ಯ ಬೆಂಕಿಯೇ ಅದಕ್ಕೆ ಸುಡಲಿಲ್ಲ. ಅದು ಆಶ್ಚರ್ಯದಿಂದಾಗಿ ಬ್ರಾಹ್ಮಣನಿಗೆ ನೋಡಿತು. ಆಗ ಇಂದ್ರನು ತನ್ನ ನಿಜರೂಪವನ್ನು ತೋರಿಸಿ ತಾನು ಪರೀಕ್ಷಿಸಲು ಬಂದಿದ್ದೆ ಎಂದು ಹೇಳಿದನು. ಆಗ ಮೊಲವು ಹೀಗೆ ಸಿಂಹನಾದ ಮಾಡಿತು: ಓ ಸಕ್ಕ, ನೀನೇ ಅಲ್ಲ, ಇಡೀ ಪ್ರಪಂಚದ ಯಾವ ವ್ಯಕ್ತಿಯೇ ಆಗಿರಲಿ, ನನ್ನಲ್ಲಿ ದಾನಕ್ಕೆ ವಿರುದ್ಧವಾದ ಇಚ್ಛೆಯನ್ನು ಕಾಣಲಾರರು. ಸದಾ ದಾನದ ಇಚ್ಛೆಯನ್ನು, ಆಚರಣೆಯನ್ನೇ ಕಾಣುವರು.
ಸಂತುಷ್ಟನಾದ ಇಂದ್ರನು ನಾಲ್ಕು ಪ್ರಾಣಿಗಳಿಗೂ ಹರಸಿ ಅಂತದರ್ಾನವಾದನು. 

ಬೋಧಿಸತ್ವರ ಪರಮತ್ಥ ಪಾರಮಿ

ಬೋಧಿಸತ್ವರ ಪರಮತ್ಥ ಪಾರಮಿ

 ಬೋಧಿಸತ್ವ ಮಹಾನಂದಿಯ

ಬಹುಕಾಲದ ಹಿಂದೆ ಬೋಧಿಸತ್ವರು ಮಹಾನಂದಿಯನೆಂಬ ವಾನರರಾಗಿ ಹುಟ್ಟಿದರು. ಅವರಿಗೆ ಒಬ್ಬ ತಮ್ಮ ಇದ್ದ. ಆತನು ಚುಲ್ಲನಂದಿಯನಾಗಿದ್ದನು. ಮಹಾನಂದಿಯರು ಅಲ್ಲಿದ್ದ ಇಡೀ ವಾನರಗಣಕ್ಕೆ ನಾಯಕರಾಗಿದ್ದರು. ಆದರೆ ನಂದಿಯ ಸೋದದರ ತಾಯಿಯು ಕುರುಡಿಯಾಗಿತ್ತು. ಆ ಕುರುಡಿ ತಾಯಿಗೆ ನಿಗ್ರರ್ೊಧ ವೃಕ್ಷದಲ್ಲಿ ನೆಲೆಸಲು ಅನುಕೂಲ ಮಾಡಿಕೊಟ್ಟು ಪ್ರತಿನಿತ್ಯ ಹಣ್ಣು ಹಂಪಲುಗಳನ್ನು ನಂದಿಯ ಸೋದರರು ಕಳುಹಿಸುತ್ತಲೇ ಇದ್ದರು.
ಒಂದುದಿನ ತಾಯಿಯನ್ನು ಬಂದು ನೋಡಿದಾಗ ಆ ಮುದಿ ಕೋತಿಯು ಅತಿಕೃಶವಾಗಿ ಬಿಟ್ಟಿತ್ತು. ಆಗ ನಂದಿಯ ಹೀಗೆ ಕೇಳಿದನು ಅಮ್ಮ, ನಾನು ಪ್ರತಿದಿನ ನಿನಗೆ ಹಣ್ಣುಗಳನ್ನು ಕಳುಹಿಸುತ್ತಲೆ ಇದ್ದೀವಲ್ಲ, ನೀನೇಕೆ ಹೀಗಾಗಿದ್ದೀ? ಅದಕೆ ತಾಯಿಯು: ಮಗು ನನಗೆ ಯಾರೂ ತಂದು ನೀಡಲಿಲ್ಲ ಎಂದಿತು. ಆಗ ಕೂಡಲೇ ಮಹಾನಂದಿಯನಿಗೆ ತನ್ನ ಕೃತಘ್ನ ಅನುಚರರ ಮೇಲೆ ಅಸಹ್ಯ ಉಂಟಾಯಿತು. ಆದರೂ ಸೈರಿಸಿಕೊಂಡು ತನ್ನ ತಮ್ಮನಿಗೆ ನಾಯಕನಾಗುವಂತೆ ಹೇಳಿತು. ಆದರೆ ಆ ತಮ್ಮ ಚುಲ್ಲನಂದಿಯನು ಅದಕ್ಕೆ ಒಪ್ಪದೆ ಹೋದಾಗ, ಅವರಿಬ್ಬರೂ ವಾನರ ಗಣದಿಂದ ನಿವೃತ್ತಿ ತಾಳಿದರು. ಬೇರೆ ವಾನರರು ಆ ನಾಯಕತ್ವ ಸ್ವೀಕರಿಸಿದರು. ಈ ಇಬ್ಬರು ವಾನರರು ಈಗ ತುಂಬಾ ಚೆನ್ನಾಗಿ ತಾಯಿಗೆ ಸೇವೆ ಸಲ್ಲಿಸುತ್ತ ಕಾಲಕಳೆದರು.
ಅದೇ ಸಮಯದಲ್ಲಿ ವಾರಣಾಸಿಯ ವಿದ್ಯಾಥರ್ಿಯೊಬ್ಬ ಶಿಕ್ಷಣ ಮುಗಿಸಿ, ಸುಲಭವಾದ ವೃತ್ತಿಯೆಂದು ಬೇಟೆಯನ್ನೇ ತನ್ನ ವೃತ್ತಿಯಾಗಿ ಆರಿಸಿಕೊಂಡಿದ್ದನು, ಅದರಲ್ಲೇ ಜೀವಿಸುತ್ತಿದ್ದನು. ಒಂದುದಿನ ಆತನಿಗೆ ಬೇಟೆಗೆ ಯಾವ ಪ್ರಾಣಿಯೂ ದೊರೆಯದಾಯಿತು. ಆಗ ಆತನ ಕಣ್ಣಿಗೆ  ಮೂರು ಕೋತಿಗಳು ಕಂಡವು. ಬೇಟೆಗಾರನು ಬಾಣದಿಂದ ಗುರಿಯಿಟ್ಟನು. ತಕ್ಷಣ ಬಲಿಷ್ಠವಾಗಿದ್ದ ಸೋದರರು ತಾವು ಕೊಂಬೆಗಳಲ್ಲಿ ಹಾರಿ ಅಡಗಿಕೊಂಡರು. ತಮ್ಮ ಮುದಿ ತಾಯಿಗೆ ಬೇಟೆಗಾರನು ಏನೂ ಮಾಡಲಾರ ಎಂದು ಅವು ನಂಬಿದ್ದವು. ಆದರೆ ಆ ಬೇಟೆಗಾರನು ಈಗ ಮುದಿತಾಯಿಗೆ ಗುರಿಯಿಟ್ಟನು. ಇದರಿಂದ ನಡುಗಿದ ಮಹಾನಂದಿಯ ಚಂಗನೆ ಹಾರಿ ತಾಯಿಯ ಮುಂದೆ ಬಂದು ನಿಂತಿತು. ತನ್ನನ್ನು ಕೊಂದು ಹಾಕು, ಆದರೆ ತಾಯಿಯನ್ನು ಬಿಟ್ಟುಬಿಡು ಎಂದು ಪ್ರಾಥರ್ಿಸಿತು. ಆ ನಿರ್ದಯಿ ಬೇಟೆಗಾರ ಬೋಧಿಸತ್ವರನ್ನು ಬಾಣದಿಂದ ಸಂಹರಿಸಿಬಿಟ್ಟನು. ಮತ್ತೆ ಆತನು ತಾಯಿ ಕೋತಿಯನ್ನು ಕೊಲ್ಲಲು ಮುಂದಾದನು. ಈ ಬಾರಿ ಚುಲ್ಲನಂದಿಯ ತನ್ನ ಅಣ್ಣನ ತ್ಯಾಗದಿಂದ ಹಾಗೂ ತಾಯಿಯ ಮೇಲಿನ ಭಕ್ತಿಯಿಂದಾಗಿ, ತಾನು ತಾಯಿಯ ಮುಂದೆ ಬಂದು ನಿಂತು, ತನ್ನನ್ನು ಕೊಂದು, ತಾಯಿಯನ್ನು ಬಿಟ್ಟುಬಿಡು ಎಂದು ಆ ಚುಲ್ಲ ನಂದಿಯ ಸಹಾ ಪ್ರಾಥರ್ಿಸಿದನು. ಆದರೆ ಆ ಕಠೋರ ಹೃದಯಿ ಬೇಟೆಗಾರ ಆ ಚುಲ್ಲನಂದಿಯನ್ನು ಬಾಣದಿಂದ ಸಂಹರಿಸಿ, ಕೊನೆಗೆ ಆ ತಾಯಿಯನ್ನು ಸಂಹರಿಸಿ ಮನೆ ಕಡೆಗೆ ಹೊರಟನು.
ಆದರೆ ದಾರಿಯಲ್ಲಿ ಯಾರೋ ಆತನಿಗೆ ಹೀಗೆ ಹೇಳಿದರು: ಓ ಬೇಟೆಗಾರ, ನಿನ್ನ ಮನೆಗೆ ಸಿಡಿಲು ಬಡಿದು, ನಿನ್ನ ಪತ್ನಿ ಪುತ್ರರು ಮೃತರಾಗಿದ್ದಾರೆ. ಇದನ್ನು ಕೇಳಿ ಅತ್ಯಂತ ದುಃಖದಿಂದ ಆತನು ಮನೆಗೆ ಓಡಿಬಂದನು. ಆಗ ಶಿಥಿಲವಸ್ಥೆಯಿಂದಿದ್ದ ಕಂಬವೊಂದು ಆತನ ತಲೆಗೆ ಬಿದ್ದು ಪೆಟ್ಟಾಗಿ ನೆಲಕ್ಕೆಬಿದ್ದನು. ಭೂಮಿಯು ಸಹಾ ಕಂಪಿಸಿ ಸೀಳಿ, ಆತನು ಭೂಗರ್ಭದಲ್ಲಿ ಬಿದ್ದನು. ಬೆಂಕಿಯ ಕೆನ್ನಾಲಿಗೆ ಆತನನ್ನು ಸೆಳೆದುಕೊಂಡು ಒಳಹೋಯಿತು.

ಛದ್ದಂತ ಬೋಧಿಸತ್ವರ ಅಂಗದಾನ

ಛದ್ದಂತ ಬೋಧಿಸತ್ವರ ಅಂಗದಾನ

ಬಹುಕಾಲದ ಹಿಂದೆ ಹಿಮಾಲಯ ಪ್ರಾಂತ್ಯದಲ್ಲಿರುವ ಸರೋವರದ ಬಳಿ ಎಂಬತ್ತು ಸಾವಿರ ಆನೆಗಳು ವಾಸವಾಗಿದ್ದವು. ಆ ಆನೆಗಳಿಗೆ ನಾಯಕರಾಗಿದ್ದವರೇ ಛದ್ದಂತ ಬೋಧಿಸತ್ವರು. ಈ ಛದ್ದಂತ ಆನೆಗೆ ತನ್ನ ಪೂರ್ವ ಜನ್ಮದ ಫಲದಿಂದಾಗಿ ಸುಂದರವಾದ ದಂತಗಳಿದ್ದು ಅದರಿಂದಾಗಿ ಸದಾ ಆರು ಬಣ್ಣದ ಪ್ರಬೆಯು ಹೊರಹೊಮ್ಮುತ್ತಿತ್ತು. ಈ ಕಾರಣದಿಂದಾಗಿ ಅದಕ್ಕೆ ಛದ್ದಂತ (ಆರು ವರ್ಣಗಳ ದಂತ) ಎನ್ನಲಾಗುತ್ತಿತ್ತು. ಈ ಆನೆಯ ದಾನಶೀಲಾದಿ ಸದ್ಗುಣಗಳಿಂದ ಕೂಡಿತ್ತು. ಹಿಮಾಲಯದಲ್ಲೇ ವಾಸವಾಗಿದ್ದ ಪಚ್ಚೇಕ ಬುದ್ಧರ ಸೇವೆಯನ್ನು ಮಾಡುತ್ತಿತ್ತು.
ಒಂದುದಿನ ಎಂದಿನಂತೆ ಆನೆಯು ಕಾಡಿನಲ್ಲಿ ಹೊರಟಿರಬೇಕಾದರೆ ಆ ಆನೆಗೆ ಹೊಂಚುಹಾಕುತ್ತಿದ್ದ ಕಾಷಾಯ ವಸ್ತ್ರದ ಬೇಟೆಗಾರನು ಅತ್ಯಂತ ಉಪಾಯದಿಂದಾಗಿ ಪ್ರಬಲವಾದ ಬಾಣದಿಂದಾಗಿ ಆನೆಗೆ ಗುರಿಯಿಟ್ಟು ಬಿಟ್ಟನು. ಹೀಗೆ ಬಾಣದಿಂದ ಸೀಳಲ್ಪಟ್ಟ ಆನೆಯು ನೋವಿನಿಂದ ಜೋರಾದ ಶಬ್ದದಿಂದ ನರಳಿತು. ಆ ಶಬ್ದಕ್ಕೆ ಹೆದರಿ ಉಳಿದ ಆನೆಗಳೆಲ್ಲಾ ಚೆಲ್ಲಾಪಿಲ್ಲಿಯಾದವು. ಗಾಯಗೊಂಡ ಆನೆಗೆ ಕೋಪವುಂಟಾಗಿ ಬಾಣ ಬಿಟ್ಟಂತಹ ವ್ಯಕ್ತಿಯತ್ತ ನುಗ್ಗಿತು. ಆದರೆ ಆತನು ಧರಿಸಿದ ಕಾಷಾಯ ವಸ್ತ್ರವನ್ನು ನೋಡಿ ಓಹ್ ಇದು ಪವಿತ್ರ ವ್ಯಕ್ತಿಗಳು ಧರಿಸುವಂತಹ ವಸ್ತ್ರಗಳಾಗಿವೆ. ಇದನ್ನು ಧರಿಸಿರುವಂತಹವರನ್ನು ಕೊಲ್ಲುವುದು ಸರಿಯಲ್ಲ. ಸಂಯಮ ಸತ್ಯ ಮತ್ತು ಅಹಿಂಸೆಯಿಲ್ಲದವರು ಈ ಕಾಷಾಯ ವಸ್ತ್ರ ಧರಿಸಿಯು ಅದಕ್ಕೆ ಯೋಗ್ಯರಾಗಿರುವುದಿಲ್ಲ. ಆದರೂ ಈ ವಸ್ತ್ರಕ್ಕೆ ಗೌರವಕ್ಕಾದರೂ ನಾನು ಹಿಂಸಿಸಬಾರದು ಎಂದು ನಿರ್ಧರಿಸಿತು. ಮತ್ತು ಹಿಂದಿನ ಜನ್ಮ ಸತ್ಯ ಪಾಲನೆಯಿಂದಾಗಿ ಅದಕ್ಕೆ ಮಾನವ ಭಾಷೆಯಲ್ಲಿ ಮಾತನಾಡುವ ಸಾಮಥ್ರ್ಯವಿತ್ತು. ಅದು ಬೇಟೆಗಾರನಿಗೆ ತನ್ನನ್ನು ಏಕೆ ಕೊಲ್ಲಲು ಬಂದಿದ್ದೀಯೆ ಎಂದು ವಿಚಾರಿಸಿತು. ಅದಕ್ಕೆ ಆ ಬೇಟೆಗಾರನು ಓ ಮಹಾ ಆನೆಯೇ, ಕಾಶಿ ರಾಜ್ಯದ ರಾಣಿಯಾದ ಸುಭದ್ರೆಗೆ ನಿನ್ನ ದಂತಗಳು ಬೇಕೆಂದು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾಳೆ ಎಂದನು.
ಆಗ ಬೋಧಿಸತ್ವರಿಗೆ ಎಲ್ಲವೂ ಕ್ಷಣಮಾತ್ರದಲ್ಲಿ ಅರ್ಥವಾಯಿತು. ಆ ಕಾಶಿ ರಾಣಿಯು  ತಾನು ಹುಟ್ಟುವ ಮುನ್ನ ಇದೇ ಛದ್ದಂತ ಆನೆಗೆ ಎರಡನೆಯ ಪತ್ನಿಯಾಗಿತ್ತು. ಛದ್ದಂತರು ಎರಡು ಹೆಣ್ಣು ಆನೆಗಳಿಗೂ ಸಮಾನವಾಗಿ ನೋಡಿಕೊಂಡರೂ ಸಹಾ ವಿನಾಕಾರಣ ಸಂಶಯದಿಂದಾಗಿ ಕಿರಿಯ ಪತ್ನಿಯು ಸವತಿ ಮಾತ್ಸರ್ಯದಿಂದಾಗಿ ಛದ್ದಂತವನ್ನು ದ್ವೇಷಿಸಿ, ಸತ್ತು ಪುನರ್ಜನ್ಮ ತಾಳಿ ಸೇಡು ತೀರಿಸುವಷ್ಟು ಕೋಪವುಂಟಾಗಿ, ಪಚ್ಚೇಕ ಬುದ್ಧರಿಗೆ ಹಣ್ಣು ಹಂಪಲುಗಳನ್ನು ನೀಡುವಾಗ ಬೋಧಿಸತ್ವರು ಬುದ್ಧತ್ವವನ್ನು ಅಶಿಸಿದರೆ, ಆ ಹೆಣ್ಣು ಆನೆಯು ಸತ್ತು ಸೇಡುತೀರಿಸಿಕೊಳ್ಳಲು ಕಾಶಿ ರಾಣಿಯಾಗಿ ಹುಟ್ಟಬೇಕು ಎಂದು ಸಂಕಲ್ಪಿಸಿದಳು ಮತ್ತು ಆಗ ಈ ಜನ್ಮದ ನೆನಪಿರಬೇಕೆಂದು ಆಶಿಸಿದಳು. ನಂತರ ಆ ಹೆಣ್ಣಾನೆಯು ನಿರಾಹಾರಿಯಾಗಿ ಸತ್ತಿತ್ತು. ಇದೆಲ್ಲವನ್ನೂ ನೆನಪಿಸಿಕೊಂಡ ಬೋಧಿಸತ್ವರಿಗೆ ಸ್ಪಷ್ಟವಾಗಿ ಇದು ಕಿರಿಯ ಪತ್ನಿಯ ಕೆಲಸವೆಂದು ಅರ್ಥವಾಗಿ ಓಹ್ ಬೇಟೆಗಾರನೇ, ಆಕೆಗೆ ದಂತಗಳು ಬೇಕಿಲ್ಲ. ನನ್ನ ವಧೆ ಮಾಡಲೆಂದೇ ಆಕೆ ನಿನಗೆ ಕಳುಹಿಸಿದ್ದಾಳೆ. ಆದರೂ ನಾನು ನಿನಗೆ ಸಾಯುವ ಮುನ್ನ ನನ್ನ ದಂತಗಳನ್ನು ದಾನವಾಗಿ ನೀಡಲು ಇಚ್ಛಿಸುತ್ತಿದ್ದೇನೆ ಕೊಯ್ದುಕೋ ಎಂದಿತು.
ಆದರೆ ಬಲಿಷ್ಠವಾದ ಆನೆಯ ದಂತ ಕೊಯ್ಯಲು ಆ ಬಲಿಷ್ಠ ಬೇಟೆಗಾರನ ಕೈಯಲ್ಲೂ ಆಗಲಿಲ್ಲ. ಆದರೆ ಆಗ ದಮಾಮಯಿಯಾದ ಆ ಛದ್ದಂತ ಆನೆಯೇ ಅದಕ್ಕೆ ಕೊಯ್ಯಲು ಸಹಾಯ ಮಾಡಿತು ತಾನು ನೋವಿನಿಂದ ನರಳುತ್ತಿದ್ದರೂ ಸಹಾ ತನ್ನ ಪ್ರಿಯವಾದ ಪ್ರಭಾವಳಿ ಬೀರುತ್ತಿದ್ದ ದಂತಗಳನ್ನು ಕತ್ತರಿಸಿ ನೀಡಿತು. ಹಾಗು ಆ ದಾನದ ಪ್ರತಿಫಲವಾಗಿ ಬುದ್ಧತ್ವ ಆಶಿಸಿತು. ನಂತರ ಹಾಗೆಯೇ ಆತನನ್ನು ಕಳುಹಿಸಿಕೊಟ್ಟು ಅದು ಮಡಿಯಿತು. ಆನಂತರ ಉಳಿದ ಆನೆಗಳು ಮತ್ತು ಪಚ್ಚೇಕ ಬುದ್ಧರೆಲ್ಲ ಅಲ್ಲಿಗೆ ಬಂದರು. ನಂತರ ಗೌರವ ಆದರಗಳಿಂದ ಅದಕ್ಕೆ ಶವಸಂಸ್ಕಾರ ಮಾಡಿದರು.
ಇತ್ತ ಬೇಟೆಗಾರನು ಆ ದಂತಗಳನ್ನು ಕಾಶಿ ರಾಣಿಗೆ ನೀಡಿದನು. ಆ ದಂತಗಳನ್ನು ನೋಡುತ್ತಲೇ ಆಕೆಗೆ ತನ್ನ ಪೂರ್ವ ಜನ್ಮದ ಪೂರ್ಣ ವಿವರಗಳು ಜ್ಞಾಪಕಕ್ಕೆ ಬಂದವು. ಆಗ ಆಕೆಗೆ ಬೋಧಿಸತ್ವರ ಮಹಾಸದ್ಗುಣಗಳು, ಅದರ ಪ್ರೇಮ ಎಲ್ಲವೂ ನೆನಪಿಗೆ ಬಂದಿತು. ತನ್ನ ಮೂರ್ಖತ್ವವೂ ಆಕೆಯ ಅರಿವಿಗೆ ಬಂದು ಇಂತಹ ಪುಣ್ಯಶಾಲಿ ಶ್ರೇಷ್ಠ ಆನೆಯನ್ನು ಕೊಲ್ಲಿಸಿದೆನಲ್ಲಾ ಎಂದು ಅಪಾರ ದುಃಖದಿಂದ ಎದೆಬಡಿದು ಅದೇದಿನ ಸತ್ತಳು.

ಶತ್ರುವಿಗೂ ಅಭಯದಾನ ನೀಡಿದ ಭೋಧಿಸತ್ವ

ಶತ್ರುವಿಗೂ ಅಭಯದಾನ ನೀಡಿದ ಭೋಧಿಸತ್ವ

ಬಹುಕಾಲದ ಹಿಂದೆ ಬೋಧಿಸತ್ವರು ವಾರಣಾಸಿಯ ಪಕ್ಕದ ಕಾಡಿನಲ್ಲಿ ವಾನರರಾಗಿ ಜನ್ಮ ತಾಳಿ ಅಲ್ಲಿ ವಾಸವಾಗಿದ್ದರು. ಪುಣ್ಯವಂತರಾಗಿದ್ದರಿಂದಾಗಿ ಬೃಹತ್ ಶರೀರವನ್ನು ಹೊಂದಿದ್ದರು. ಹಾಗೆಯೇ ಕೋಮಲ ಹೃದಯಿಯೂ ಆಗಿದ್ದರು. ಜೊತೆಗೆ ಪ್ರಜ್ಞಾವಂತರೂ ಸಹಾ ಆಗಿದ್ದರು.
ಒಂದುದಿನ ಕಾಶಿ ಗ್ರಾಮದ ಕೃಷಿಕನೊಬ್ಬನು ತನ್ನ ಕಾಣೆಯಾದ ಎತ್ತುಗಳನ್ನು ಹುಡುಕುತ್ತಾ ಕಾಡಿನಲ್ಲಿ ಪ್ರವೇಶಿಸಿದನು. ಅವು ಸಿಗದೆ, ಇತ್ತ ಹಸಿವಿನಿಂದ ಕಂಗೆಟ್ಟು ಆತನು ತಿಂದುಕವೃಕ್ಷವೇರಿ ಹಣ್ಣುಗಳನ್ನು ತಿನ್ನುತ್ತಿದಾಗ ಕಾಲುಜಾರಿ ಆಳವಾದ ಪ್ರಪಾತಕ್ಕೆ ಬಿದ್ದುಬಿಟ್ಟನು. ಅಲ್ಲಿ ಸ್ವಲ್ಪ ನೀರಿದ್ದರಿಂದಾಗಿ ಆತನ ಜೀವ ಉಳಿಯಿತು. ಆದರೂ ಅಲ್ಲಿಂದ ಹೊರಬರಲಾರದೆ ಅಲ್ಲೇ 10 ದಿನಗಳು ಕಾಲ ಕಳೆದುಬಿಟ್ಟನು. ಆತನು ಅಳುತ್ತಾ ಪ್ರಲಾಪಿಸುತ್ತಿದ್ದನು. ಆತನ ಧ್ವನಿಯು ಬೋಧಿಸತ್ವರಿಗೆ ಕೇಳಿಸಿತು. ಅವರು ಕಲ್ಲುಗಳನ್ನು ಇನ್ನೊಂದು ಬದಿಗೆ ಎಸೆಯುತ್ತ ಮೆಟ್ಟಿಲು ರೀತಿ ಮಾಡಿ ಆ ಕೃಷಿಕನಿಗೆ ಹೊರಬರುವಂತೆ ಸನ್ನೇ ಮಾಡಿದರು. ಆದರೆ ಹತ್ತು ದಿನದಿಂದ ಆಹಾರವಿಲ್ಲದೆ ದುರ್ಬಲವಾಗಿದ್ದ ಆತನಿಗೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಬೋಧಿಸತ್ವರೇ ಸ್ವತಃ ಆ ಪ್ರಪಾತದಲ್ಲಿ ಗಿರಿಗಹ್ವರದಲ್ಲಿ ಇಳಿದರು. ಹಾಗು ಆತನನ್ನು ಬೆನ್ನಮೇಲೆ ಕುಳ್ಳರಿಸಿಕೊಂಡು ಆ ಗಿರಿಗಹ್ವರದಿಂದ ಬಹಳ ಕಷ್ಪಟ್ಟು ಮೇಲಕ್ಕೆ ತಂದರು. ತುಂಬಾ ದಣಿದ್ದುದ್ದರಿಂದಾಗಿ ಅದು ಸ್ವಲ್ಪಕಾಲ ವಿಶ್ರಾಂತಿ ಬಯಸಿತು. ಹಾಗೆಯೇ ಕಣ್ಣುಮುಚ್ಚಿ ಮಲಗಿತು.
ಈಗ ಆ ಕೃಷಿಕನಿಗೆ ಪಾಪಯೋಚನೆಗಳು ಉಂಟಾಯಿತು. ಅದು ಏನೆಂದರೆ ಹಸಿದಿದ್ದ ಆತನಿಗೆ ಈ ಮಹಾಕಪಿಯು ಉತ್ತಮ ಆಹಾರವೆಂದು ಆತನು ಭಾವಿಸಿ, ತನಗಾಗಿ ಜೀವವನ್ನು ಒತ್ತೆಯಿಟ್ಟು ಪ್ರಾಣ ಉಳಿಸಿದ ವಾನರನನ್ನೇ ಕೊಲ್ಲಲು ನಿರ್ಧರಿಸಿದನು. ಅದಕ್ಕಾಗಿ ಆತನು ದೊಡ್ಡ ಕಲ್ಲನ್ನು ಎತ್ತಿ ಮಹಾಕಪಿಯ ತಲೆಯ ಮೇಲೆ ಹಾಕಲು ಪ್ರಯತ್ನಿಸಿದನು. ಆದರೆ ದುರ್ಬಲನಾಗಿದ್ದರಿಂದಾಗಿ ಅದು ಪೂರ್ಣ ತಲೆಗೆ ಬೀಳದೆ ಕೇವಲ ತಲೆಗೆ ದೊಡ್ಡ ಗಾಯವಾಯಿತು, ರಕ್ತ ಹರಿಯತೊಡಗಿತು.
ಎಚ್ಚೆತ್ತ ಮಹಾಕಪಿಗೆ ಆಶ್ಚರ್ಯವಾಯಿತು. ಉಪಕಾರಿಗೆ ಹತ್ಯೆ ಮಾಡಲು ಬಯಸುತ್ತಾನಲ್ಲ ಎಂದು ಯೋಚಿಸಿತು. ಅದಕ್ಕೆ ತಲೆಗೆ ತೀವ್ರ ಪೆಟ್ಟಾಗಿ ನೋವು ಆವರಿಸುತ್ತಿದ್ದರೂ ಸಹಾ ಆ ಕೃಷಿಕನ ಒಳಿತನ್ನೇ ಚಿಂತಿಸಿತು. ಆಗ ಅದು ಆತನಿಗೆ ಹೀಗೆ ಹೇಳಿತು ಅಯ್ಯಾ, ನನ್ನ ಬಗ್ಗೆ ಹೀಗೆ ನೀನು ಮಾಡಬಾರದಿತ್ತು, ಏಕೆ ಹೀಗೆ ಮಾಡಿದೆ? ನಿನ್ನ ಪ್ರಾಣ ಉಳಿಸಿದ್ದಕ್ಕಾಗಿ ನನ್ನ ಪ್ರಾಣವನ್ನು ತೆಗೆಯಲು ಏಕೆ ಹೊರಟೆ? ಓಹ್! ಇದು ಪಾಪಕರ್ಮ, ಇದರ ಫಲವು ನಿನಗೆ ಸಿಗದಿರಲಿ, ಈ ನಿನ್ನ ಕೃತ್ಯದಿಂದ ನೀನು ದೀರ್ಘಕಾಲ ದುಃಖದಿಂದ ನರಳದಿರಲಿ, ನೀನು ಸುಖಿಯಾಗಿರು ಎಂದಿತು.
ಆಗ ಕೃಷಿಕನು ಕ್ಷಮೆಯಾಚಿಸಿದನು ಮತ್ತು ತಾನು ನಗರಕ್ಕೆ ಹೋಗಲು ಮಾರ್ಗವನ್ನು ಕೇಳಿದನು. ಆತನಿಗೆ ಕಾಡಿನ ಮಾರ್ಗ ತಿಳಿದಿರಲಿಲ್ಲ.
ಅದಕ್ಕೆ ಆ ಮಹಾಕಪಿಯು ಹೀಗೆ ಉತ್ತರಿಸಿತು: ಓ ಅಸಂಯಮಿ, ನಿನ್ನ ಮೇಲೆ ನನಗೆ ನಂಬಿಕೆಯಿಲ್ಲ. ಆದರೂ ನಿನಗೆ ಸಹಾಯ ಮಡುವೆ, ನಾನು ಕೊಂಬೆಯಿಂದ ಕೊಂಬೆಗೆ ಹಾರುತ್ತಿರುತ್ತೇನೆ, ನನ್ನ ರಕ್ತದ ಬಿಂದುಗಳು ನೆಲದ ಮೇಲೆ ಬೀಳುತ್ತಿರುತ್ತವೆ. ಅವನ್ನೇ ಹಿಂಬಾಲಿಸುತ್ತ ನೀನು ನಗರವನ್ನು ಸೇರುವಂತಾಗು ಎಂದಿತು.
ಹಾಗೆಯೇ ಅದು ಹಾರುವಾಗ ನೋಡುತ್ತ, ಅದರ ರಕ್ತದ ಬಿಂದುಗಳನ್ನು ಹಿಂಬಾಲಿಸುತ್ತ ಆ ಕೃಷಿಕನು ನಗರ ಸೇರಿದನು.
ಆದರೆ ತನ್ನ ಹೀನ ಕರ್ಮದಿಂದಾಗಿ ಆತನಿಗೆ ಕುಷ್ಟರೋಗ ಉಂಟಾಯಿತು. ಅಸಹ್ಯಕರ ಹುಣ್ಣುಗಳಿಂದ ದುವರ್ಾಸನೆಯಿಂದ ಕೂಡಿದ ದೇಹದಿಂದ ಆತನು ಕೂಡಿಕೊಂಡನು. ಜನರು ಆತನಿಗೆ ಕಲ್ಲೆಸೆದು ದೂರ ಓಡಿಸಿದರು.
ಓ ಉಪಕಾರಕ್ಕೆ ಅಪಕಾರ ಬೇಡ, ಪ್ರಾಣ ಉಳಿಸಿದವನಿಗೆ ಪ್ರಾಣ ತೆಗೆಯುವ ಯೋಚನೆ ಸಹಾ ಬೇಡ. ಮಿತ್ರದ್ರೋಹ ಮಾಡಿದವನಿಗೆ ಕುಷ್ಟರೋಗ ಉಂಟಾಗುತ್ತದೆ ಹಾಗು ಸತ್ತನಂತರ ನರಕಪ್ರಾಪ್ತಿ ಎಂದು ತನ್ನ ಬಗ್ಗೆ ಕೇಳಿದವರಿಗೆ ಆತನು ಹೇಳುತ್ತಿದ್ದನು.

ನರಭಕ್ಷಕನನ್ನು ಪರಿವರ್ತನೆಗೊಳಿಸಿದ ಬೋಧಿಸತ್ವ ಅಲೀನ ಶತ್ರುಕುಮಾರ

 ನರಭಕ್ಷಕನನ್ನು ಪರಿವರ್ತನೆಗೊಳಿಸಿದ ಬೋಧಿಸತ್ವ ಅಲೀನ ಶತ್ರುಕುಮಾರ


ಬಹುಕಾಲದ ಹಿಂದೆ ಬೋಧಿಸತ್ವರು ಕಾಂಪಿಲ್ಯ ರಾಜ್ಯದಲ್ಲಿ ಜಯದ್ದಿಸ ರಾಜನಿಗೆ ಮಗನಾಗಿ ಹುಟ್ಟಿದ್ದರು. ಬಾಲ್ಯದಿಂದಲೂ ಅವರು ಮೇಧಾವಿಯು ಮತ್ತು ಧೈರ್ಯಶಾಲಿಯೂ ಆಗಿದ್ದರು.
ಒಂದುದಿನ ಜಯದ್ದಿಸ ಮಹಾರಾಜರು ಬೇಟೆಗೆಂದು ಹೊರಟಿದ್ದರು. ಅಲ್ಲಿ ಬಣ್ಣದ ಮೃಗವನ್ನು ಬೇಟೆಯಾಡಿ ಹಿಂತಿರುಗುವಾಗ ಮರದ ಆಶ್ರಯ ಪಡೆದರು. ಅಲ್ಲಿ ನರಭಕ್ಷಕನೊಬ್ಬ ಇದ್ದನು. ಆತನು ಬಲಶಾಲಿಯು, ವಿಕೃತನು, ಭಯಾನಕವಾಗಿ ಕಾಣುತ್ತಿದ್ದನು. ಆತನು ರಾಜನನ್ನು ತಿನ್ನಲು ಹಿಡಿದುಬಿಟ್ಟನು. ಆತನನ್ನು ಕಂಡೊಡನೆ ಭೀತಿಗೊಂಡ ರಾಜನು ನಿಶ್ಶಕ್ತನಾದನು. ಆದರೂ ಧೈರ್ಯ ತೆಗೆದುಕೊಂಡು, ತಾನು ಬೇಟೆಯಾಡಿದ ಮೃಗ ಆ ನರಭಕ್ಷಕನಿಗೆ ಒಪ್ಪಿಸಿ, ಖಂಡಿತ ಹಿಂತಿರುಗಿ ಬರುವೆ ಎಂದು ವಚನ ನೀಡಿ ರಾಜ್ಯಕ್ಕೆ ಹಿಂತಿರುಗಿದನು.
ನಂತರ ಅಲೀನ ಶತ್ರುಕುಮಾರನಿಗೆ (ಬೋಧಿಸತ್ವನಿಗೆ) ರಾಜನನ್ನಾಗಿ ಮಾಡಲು ನಿರ್ಧರಿಸಿದನು. ಅದಕ್ಕಾಗಿ ಸಿದ್ಧತೆ ನಡೆಸಿದನು. ಆದರೆ ಬೋಧಿಸತ್ವ ಇದಕ್ಕೆಲ್ಲಾ ಕಾರಣ ತಿಳಿದುಕೊಂಡರು. ಹಾಗು ತಾವೇ ಆ ನರಭಕ್ಷಕನ ಬಳಿಗೆ ಹೋಗಲು ನಿರ್ಧರಿಸಿದರು. ತಂದೆ-ತಾಯಿಯು ವಿರೋಧಿಸಿದರು. ಆದರೂ ಅವರಿಗೆಲ್ಲಾ ಸಾಂತ್ವನ ಮಾಡಿ, ಧೈರ್ಯತುಂಬಿ ಅವರಿಂದ ಅಪ್ಪಣೆ ಪಡೆದು ಆ ನರಭಕ್ಷಕನ ಬಳಿಗೆ ಬರುತ್ತಾರೆ. ಅಲ್ಲಿಯ ನರಭಕ್ಷಕನನ್ನು ಕಂಡರೂ ಹೆದರದೆ ನನ್ನ ತಂದೆಯ ಬದಲು ನನ್ನನ್ನೇ ತಿಂದುಬಿಡು ಎಂದರು.
ಬೋಧಿಸತ್ವರ ಧೈರ್ಯ ಮತ್ತು ಸ್ವಭಾವ ಕಂಡು ಆ ನರಭಕ್ಷಕನಿಗೆ ಆಶ್ಚರ್ಯವಾಯಿತು. ಏಕೆಂದರೆ ಜೀವನದಲ್ಲಿ ಪ್ರಥಮಬಾರಿ ಆತನನ್ನು ಕಂಡು ಹೆದರದೆ ಮಾತನಾಡಿಸುವವರನ್ನು ಕಂಡನು. ಹಾಗೆಯೇ ತಂದೆಗಾಗಿ ಪ್ರಾಣ ನೀಡಲು ಸಂತೋಷವಾಗಿ ಮುಂದೆ ಬಂದಿರುವುದನ್ನು ಕಂಡು ಆಶ್ಚರ್ಯಪಟ್ಟನು. ಸಂತೋಷವಾಗಿ ತಿನ್ನು ಎಂದು ಹೇಳುವಾಗ ಆತನ ದಾನ ಸ್ವಭಾವ ಕಂಡು, ನರಭಕ್ಷಕನ ಮನಸ್ಸು ಪರಿವರ್ತನೆ ಹೊಂದಿತು. ಆತನು ಆ ಬಾಲಕನಿಗೆ ಹಾಗೇ ಕಳುಹಿಸಿಕೊಡಲು ನಿರ್ಧರಿಸಿ, ಅದರಂತೆ ಋಣಮುಕ್ತನಾಗಿರುವೆ ನಿನ್ನನ್ನು ತಿನ್ನಲಾರೆ ನೀನು ಹೊರಡು ಎಂದನು.
ಆಗ ಅಲೀನ ಶತ್ರುಕುಮಾರನು ನರಭಕ್ಷಕನನ್ನು ಸೂಕ್ಷ್ಮವಾಗಿ ವಿಶ್ಲೇಷಣೆಯಿಂದ ಗಮನಿಸಿ ಹೀಗೆ ಹೇಳುತ್ತಾರೆ: ನೀನು ಯಕ್ಷನಲ್ಲ, ಸ್ವತಃ ನನ್ನ ದೊಡ್ಡಪ್ಪನಾಗಿರುವೆ. ಏಕೆಂದರೆ ನಿನಗೂ ನನ್ನ ತಂದೆಗೂ ಮುಖ ಲಕ್ಷಣದಲ್ಲಿ ಹೋಲಿಕೆಯಿದೆ ಮತ್ತು ನೀನು ಚಿಕ್ಕವನಿರುವಾಗ ಯಕ್ಷಿಣಿಯೊಬ್ಬಳು ತಿನ್ನಲೆಂದು ನಿನ್ನನ್ನು ಎತ್ತಿಕೊಂಡು ಹೋಗಿದ್ದಳು. ಪುನಃ ಅವಳೇ ನಿನ್ನನ್ನು ವಾತ್ಸಲ್ಯದಿಂದ ಹಾಗೆ ಮಾಡದೆ, ನಿನ್ನನ್ನು ಕಾಪಾಡಿ ಬೆಳೆಸಿದ್ದಾಳೆ. ನನ್ನ ಜೊತೆ ರಾಜ್ಯಕ್ಕೆ ಬಾ, ನಿನ್ನನ್ನು ರಾಜನನ್ನಾಗಿಸುವೆ ಎಂದರು. ಆದರೆ ನರಭಕ್ಷಕನು ಇದನ್ನು ನಂಬಲಿಲ್ಲ. ಆದರೆ ಹತ್ತಿರದಲ್ಲೇ ವಾಸವಾಗಿದ್ದ ದಿವ್ಯಚಕ್ಷು ಸಾಧಿಸಿದ ಋಷಿಯ ಬಳಿಗೆ ಬಂದು ಈ ಬಗ್ಗೆ ವಿಚಾರಿಸಿದಾಗ ಅಲೀನಕುಮಾರ ಹೇಳಿದ್ದು ಅಕ್ಷರಶಃ ನಿಜವೆಂದು ಆ ಋಷಿಯು ಆ ಇಬ್ಬರಿಗೆ ಮಾತ್ರ ತಿಳಿದಂತಹ ಸಂಗತಿಗಳನ್ನು ಹೇಳಿ ಅವರಲ್ಲಿ ನಂಬಿಕೆ ತರಿಸಿ ಒಪ್ಪಿಸಿದರು. ಈಗ ಪುನಃ ಅಲೀನಕುಮಾರರು ನರಭಕ್ಷಕನಿಗೆ ರಾಜ್ಯಕ್ಕೆ ಮರಳಿ ಬರುವಂತೆ ಕೇಳಿಕೊಂಡರು. ಆದರೆ ಅದಕ್ಕೆ ಆತನು ಒಪ್ಪದೆ, ಋಷಿಯ ಬಳಿ ಪ್ರವಜ್ಯ ಸ್ವೀಕರಿಸಿ, ಶೀಲವಂತಿಕೆ ಜೀವನ ನಡೆಸಿದನು. ಅಲೀನಕುಮಾರರು ರಾಜ್ಯಕ್ಕೆ ಮರಳಿ ವಿಷಯವನ್ನು ತಿಳಿಸಿದರು.

ಬೋಧಿಸತ್ವ ಋರು ನೀಡಿದ ಅಭಯದಾನ

ಬೋಧಿಸತ್ವ ಋರು ನೀಡಿದ ಅಭಯದಾನ

ಬಹುಕಾಲದ ಹಿಂದೆ ಬೋಧಿಸತ್ವರು ಋರು ಎಂಬ ಜಿಂಕೆಯಾಗಿ ಹುಟ್ಟಿದರು. ಅವರ ಹಿಂದಿನ ಜನ್ಮದ ಪುಣ್ಯದಿಂದಾಗಿ, ಅವರ ಚರ್ಮವು ಚಿನ್ನದ ಬಣ್ಣವನ್ನು ಹೊಂದಿದ್ದು, ಬೇರೆ ಜಿಂಕೆಗಳಿಗಿಂತ ಅತ್ಯಂತ ಸುಂದರಾಕೃತಿಯನ್ನು ಹೊಂದಿತ್ತು. ಹಿಂದಿನ ಜನ್ಮದ ಸತ್ಯಾಚರಣೆಯಿಂದಾಗಿ, ಅದು ಮಾನವರಂತೆ ಮಾತನಾಡುತ್ತಿತ್ತು. ತನ್ನ ಸೌಂದರ್ಯದಿಂದಲೇ ತನಗೆ ಹಾನಿಯಾಗುವುದೆಂದು ಅದು ಶಾಲ ಮತ್ತು ಮಾವಿನ ತೋಪುಗಳಿಂದ ಕೂಡಿದ ಏಕಾಂತ ಸ್ಥಳದಲ್ಲಿ ಏಕಾಂಗಿಯಾಗಿ ವಾಸವಾಗಿತ್ತು.
ಒಂದುದಿನ ಅದು ಗಂಗೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಂತಹ ಮಾನವನನ್ನು ತನ್ನ ಅಸೀಮ ಶಕ್ತಿಯಿಂದ ಕಾಪಾಡಿತು. ಆ ಮಾನವನಿಗೆ ಹಣ್ಣು ಹಂಪಲುಗಳನ್ನು ನೀಡಿ ಸತ್ಕರಿಸಿತು. ನಂತರ ಆತನೊಂದಿಗೆ ಹೀಗೆ ಹೇಳಿತು: ಓ ಮನುಷ್ಯನೇ, ನಿನಗೆ ವಾರಾಣಸಿಯ ದಾರಿಯವರೆಗೆ ಬಿಡುತ್ತೇನೆ, ನೀನು ಸುಖಿಯಾಗಿ ಹೋಗು. ಆದರೆ ದುರಾಸೆಗೆ ವಶವಾಗಿ ಸ್ವರ್ಣಮೃಗವಾದ ನಾನು ವಾಸಿಸುವ ಸ್ಥಳದ ಬಗ್ಗೆ ಹೇಳಬೇಡ ಎಂದು ವಚನ ಸ್ವೀಕರಿಸಿ ಕಳುಹಿಸಿಕೊಟ್ಟಿತು.
ಆದರೆ ಮಾರನೆಯದಿನ ವಾರಾಣಸಿಯ ಪಟ್ಟಮಹಿಷಿಯ ಸ್ವಪ್ನದಲ್ಲಿ ಸ್ವರ್ಣ ಜಿಂಕೆಯೊಂದು ಆಕೆಗೆ ಧಮ್ಮೋಪದೇಶ ನೀಡಿದಂತೆ ಕಂಡಳು. ಇದರಿಂದ ಉತ್ತೇಜಿತಳಾದ ಆಕೆಯು ಅಂತಹ ಜಿಂಕೆಯನ್ನು ನಾನು ಕಾಣದಿದ್ದರೆ ನಾನು ಬದುಕಲಾರೆ ಎಂದು ಹಠಹಿಡಿದಳು. ಆಕೆಗಾಗಿ ರಾಜನು ಯಾರು ಸ್ವರ್ಣ ಜಿಂಕೆಯ ಸುಳಿವನ್ನು ನೀಡುವರೋ ಅವರಿಗೆ ಸಾವಿರ ಚಿನ್ನದ ನಾಣ್ಯ, ಗ್ರಾಮ ಮತ್ತು ಸುಂದರ ನಾರಿಯನ್ನು ನೀಡುತ್ತೇನೆ ಎಂದು ಡಂಗೂರ ಸಾರಿದನು.
ಯಾವ ಮನುಷ್ಯನನ್ನು ಋರು ಸ್ವರ್ಣ ಮೃಗವು ಕಾಪಾಡಿತ್ತೋ ಆ ಕೃತಘ್ನ ಪುರುಷನು ಬಹುಮಾನದ ಆಸೆಯಿಂದ ಆ ಸ್ಥಳದ ಮಾಹಿತಿಯೆಲ್ಲಾ ರಾಜನಿಗೆ ನೀಡಿದನು.
ರಾಜನು ಆ ಸ್ಥಳಕ್ಕೆ ಬಂದು ಋರುವಿಗೆ ಬಾಣದಿಂದ ಗುರಿಯಿಟ್ಟನು. ತಕ್ಷಣವೇ ಋರು ಬೋಧಿಸತ್ವರು ಹೀಗೆಂದರು: ತಡೆ ರಾಜ, ಆತುರಬೇಡ, ನಾನು ಓಡಿಹೋಗುವುದಿಲ್ಲ. ಮೊದಲು ನನ್ನ ಪ್ರಶ್ನೆಗೆ ಉತ್ತರಿಸು, ನಾನು ಇಲ್ಲಿರುವುದು ಹೇಗೆ ತಿಳಿಯಿತು.
ರಾಜನಿಗೆ ಅದು ಮಾತನಾಡಿದ್ದು ಕಂಡು ಆಶ್ಚರ್ಯವಾಯಿತು. ಆತನ ಆ ಕೃತಘ್ನ ಪುರುಷನನ್ನು ತೋರಿಸಿದನು. ಸ್ವರ್ಣ ಮೃಗವು ಹೀಗೆ ನುಡಿಯಿತು: ಮುಳುಗುತ್ತಿರುವ ಮನುಷ್ಯನನ್ನು ಕಾಪಾಡುವ ಬದಲು, ಮುಳುಗುತ್ತಿರುವ ಮರದ ದಿಮ್ಮಿಯನ್ನು ಕಾಪಾಡುವುದು ಉತ್ತಮವೆಂದು ಜ್ಞಾನಿಗಳು ಹೇಳುವುದು ಸತ್ಯವೇ ಆಗಿದೆ ಎಂದಿತು.
ಅರ್ಥವಾಗದ ರಾಜನಿಗೆ ನಂತರ ವಿವರವಾಗಿ ತಾನು ಹೇಗೆ ಪ್ರವಾಹದಲ್ಲಿ ಸಿಲುಕಿದ್ದ ಆತನನ್ನು ಕಾಪಾಡಿದೆನು ಎಂದೆಲ್ಲಾ ತಿಳಿಸಿತು. ರಾಜನಿಗೆ ಕೋಪವುಂಟಾಗಿ ಆ ಕೃತಘ್ನನನ್ನು ಕೊಲ್ಲಲು ನಿರ್ಧರಿಸಿದನು. ಆದರೆ ಬೋಧಿಸತ್ವ ಋರು ಅದಕ್ಕೆ ತಡೆದು ಕ್ಷಮೆ ನೀಡುವಂತೆ  ಕೇಳಿಕೊಂಡು ಆ ಕೃತಘ್ನನಿಗೆ ಬಹುಮಾನವು ಸಿಗುವಂತೆ ಮಾಡಿತು.
ನಂತರ ರಾಣಿಯ ಸ್ವಪ್ನದಂತೆ ಆಕೆಗೆ ಧಮ್ಮೋಪದೇಶವನ್ನು ಮಾಡಿತು. ಬೋಧಿಸತ್ವ ಋರುವಿನ ಉಪದೇಶದಂತೆ ಅಂದಿನಿಂದ ರಾಜ್ಯದಲ್ಲೆಲ್ಲಾ ಯಾರು ಪಶು-ಪಕ್ಷಿಗಳಿಗೆ ಪ್ರಾಣ ತೆಗೆಯುವುದು ಮತ್ತು ಹಿಂಸೆ ಮಾಡುವುದನ್ನು ತ್ಯಜಿಸಿದರು. 

ಬೋಧಿಸತ್ತರ ಅಭಯದಾನ

 ಬೋಧಿಸತ್ತರ ಅಭಯದಾನ


ಬಹುಕಾಲದ ಹಿಂದೆ ಬೋಧಿಸತ್ತರು ವಾರಾಣಸಿಯಲ್ಲಿ ವಾನರರಾಗಿ ಹುಟ್ಟಿದರು. ನಂತರ ಅವರೇ ಆ ಕಪಿಗಳ ದಂಡಿಗೆ ನಾಯಕರೂ ಆದರು. ಅವರು ಹಿಮಾಲಯದ ಗಂಗಾತಟದಲ್ಲಿ ಬೃಹತ್ ಮಾವಿನ ಮರದಲ್ಲಿ ವಾಸವಾಗಿದ್ದರು. ಆ ಮಾವಿನ ಮರದ ಒಂದು ಭಾಗವು ಹರಿಯುತ್ತಿರುವ ಗಂಗಾನದಿಯ ಕಡೆಗಿತ್ತು. ಆ ಮಾವಿನ ಮರದ ಹಣ್ಣುಗಳು ನಿಜಕ್ಕೂ ಅದ್ಭುತವಾಗಿತ್ತು. ಅದರ ರುಚಿಗೆ ಮಾರುಹೋಗದವರೇ ಇರಲಿಲ್ಲ. ಆ ಕಪಿಗಳ ಗುಂಪು ಸಹಾ ಆ ಮಾವಿಗೆ ಆಕಷರ್ಿತರಾಗಿ ಅಲ್ಲೇ ನೆಲೆಸಿದ್ದವು. ಆ ಮರವು ನಾಗರಿಕ ಪ್ರಪಂಚದಿಂದ ದೂರವಾಗಿತ್ತು. ಹೀಗಾಗಿ ಆ ಮಾವು ಜನರ ಕಣ್ಣಿಗೆ ಬಿದ್ದಿರಲಿಲ್ಲ. ಬೋಧಿಸತ್ವರಿಗೆ ದೂರದೃಷ್ಟಿಯ ಪ್ರಜ್ಞೆಯಿದ್ದುದರಿಂದಾಗಿ ಅವರು ಆ ಮಾವು ಜನರ ಕಣ್ಣಿಗೆ ಬೀಳಬಾರದೆಂದು ಅವರು ಗಂಗಾನದಿಗೆ ವಾಲಿದ್ದ ಕೊಂಬೆಯಲ್ಲಿದ್ದ ಹೂವು, ಕಾಯಿ ಮತ್ತು ಹಣ್ಣುಗಳೆಲ್ಲವನ್ನೂ ನಾಶಪಡಿಸಿತ್ತು. ಹೀಗಾಗಿ ಎಂದಿಗೂ ಮಾವು ನೀರಿನಲ್ಲಿ ಹರಿದು ಜನರಿಗೆ ಸಿಕ್ಕಿರಲಿಲ್ಲ. ಆದರೂ ಒಮ್ಮೆ ಹೇಗೋ ಒಂದು ಮಾವು ಹರಿಯುತ್ತ, ಹರಿಯುತ್ತ, ಜಲಕ್ರೀಡೆಯಾಡುತ್ತಿದ್ದ ವಾರಾಣಸಿಯ ರಾಜನಿಗೆ ಸಿಕ್ಕಿತ್ತು. ಅದನ್ನು ಆತನು ತಿಂದನಂತರ ಆತನು ಅಪಾರ ರಸತೃಷ್ಣೆಗೆ ಒಳಗಾದನು. ಕಂಡಕಂಡವರೊಂದಿಗೆ ಈ ಹಣ್ಣಿನ ಬಗ್ಗೆ ವಿಚಾರಿಸಿದನು. ಆದರೆ ಆ ಹಣ್ಣಿನ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಕೊನೆಗೆ ಒಬ್ಬ ಹಿಮಾಲಯದಲ್ಲಿ ವಾಸವಾಗಿ ಅಲ್ಲಿಂದ ವಲಸೆ ಬಂದಿದ್ದಂತಹ ಕಾಡು ಮನುಷ್ಯರಿಗೆ ವಿಚಾರಿಸಿದಾಗ ಆ ಮಾವಿನ ಹಣ್ಣು ಹಿಮಾಲಯ ಪ್ರಾಂತ್ಯದಲ್ಲಿ ಸಿಗುವುದೆಂದು ಮಾಹಿತಿ ಪಡೆದನು. ರಾಜನು ಕೂಡಲೇ ಪ್ರಯಾಣ ಆರಂಭಿಸಿ ಆ ಸ್ಥಳವನ್ನು ಸಹಾ ಹುಡುಕಿ, ರಾಜ ಮತ್ತು ಆತನ ಸೈನ್ಯವು ಅಲ್ಲಿ ಬೀಡುಬಿಟ್ಟು ಹೊಟ್ಟೆ ತುಂಬಾ ಮಾವು ತಿಂದು ಅಲ್ಲೇ ಮಲಗಿದರು.

ಆ ಸಮಯದಲ್ಲಿ ಅಲ್ಲಿದ್ದ ವಾನರರು ಬೇರೆ ಸ್ಥಳದಲ್ಲಿ ಸುತ್ತಾಡಿ, ರಾತ್ರಿ ವೇಳೆಗೆ ಮಾವಿನ ಮರದ ಬಳಿಗೆ ಬಂದಾಗ, ಅಲ್ಲಿ ರಾಜ ಮತ್ತು ಅವನ ಸೈನ್ಯವನ್ನು ಕಂಡರು. ಅವುಗಳು ಹಸಿವು ತಾಳಲಾರದೆ ಎಚ್ಚರಿಕೆಯಿಂದ ಮರವನ್ನು ಹತ್ತಿ, ಹಣ್ಣುಗಳನ್ನು ತಿನ್ನತೊಡಗಿದವು. ಆದರೆ ಒಂದು ಕಪಿಯು ಅಭ್ಯಾಸ ಬಲದಿಂದ ಬೀಜವನ್ನು ಕೆಳಕ್ಕೆ ಎಸೆದಾಗ ಮಲಗಿದ್ದ ರಾಜನ ಮೇಲೆ ಬಿದ್ದಿತು. ಎಚ್ಚೆತ್ತ ಆತನು ಕಪಿಗಳು ಮಾವು ತಿನ್ನುವುದನ್ನು ಕಂಡು ಅತಿಯಾಗಿ ಕೋಪಗೊಂಡನು. ಕೂಡಲೇ ಹೀಗೆ ಆಜ್ಞಾಪಿಸಿದನು: ಈ ಕೋತಿಗಳನ್ನೆಲ್ಲಾ ಕೊಲ್ಲಿ, ನಾಳೆ ಕೋತಿ ಮಾಂಸದ ಜೊತೆಗೆ ಮಾವು ತಿನ್ನೋಣ ಎಂದನು. ಭಟರು ಬಾಣಗಳನ್ನು ಬಿಡತೊಡಗಿದರು. ಕೋತಿಗಳೆಲ್ಲಾ ಹೆದರಿದವು. ದೊಡ್ಡ ರೆಂಬೆಯ ಮರೆಯಲ್ಲಿ ಎಲ್ಲವೂ ರಕ್ಷಣೆ ಪಡೆದವು. ಆದರೂ ಅಲ್ಲಿಯೂ ಸುರಕ್ಷಿತೆ ಎಲ್ಲಿಯವರೆಗೆ, ಹೀಗಾಗಿ ಬೋಧಿಸತ್ವರಿಗೆ ಶರಣು ಹೇಳಿದವು. ಆಗ ಭೋಧಿಸತ್ವರು ಓ ಸೋದರರೇ, ಹೆದರದಿರಿ ನಾನು ಕಾಪಾಡುವೆನು, ಅಲ್ಲಿಯವರೆಗೆ ಇದೇ ಮರೆಯಲ್ಲಿರಿ ಎಂದು ಆಜ್ಞಾಪಿಸಿ, ಮಾವಿನ ಮರದ ತುದಿಗೆ ಏರಿ, ಒಂದು ಬಾಗಿದ ರೆಂಬೆಯಲ್ಲಿ ದುಮುಕಿ, ಅದರಿಂದಾದ ಎಸೆತಕ್ಕೆ ಹಾರಿ, ಗಂಗಾನದಿಯ ತೀರದ ಮರವೊಂದಕ್ಕೆ ದುಮುಕಿದನು. ನಂತರ ಆ ಮರದಿಂದ, ಈ ಮರಕ್ಕೆ ಆಗುವ ದೂರವನ್ನು ಲೆಕ್ಕಾಚಾರ ಹಾಕಿ ಅಲ್ಲಿದ್ದ ಬಳ್ಳಿಗಳನ್ನು ಸೇರಿಸಕೊಂಡು ಸೊಂಟಕ್ಕೆ ಕಟ್ಟಿಕೊಂಡು, ಆ ಮರದಿಂದ, ಮಾವಿನ ಮರಕ್ಕೆ ದೊಂಬಾರ ನೆಗೆತ ಮಾಡಿದನು. ಆದರೆ ಸ್ವಲ್ಪ ಲೆಕ್ಕಾಚಾರ ತಪ್ಪಿ, ಆತನು ಮಾವಿನ ಮರದಲ್ಲಿ ಇಳಿಯಲಾರದೆ, ಕೇವಲ ರೆಂಬೆಯನ್ನು ಹಿಡಿದನು. ಆದರೂ ವಿಷಾಧಿಸದೆ ತನ್ನ ಪಡೆಗೆ, ತನ್ನ ಬೆನ್ನ ಮೇಲಿಂದ ನಡೆದುಕೊಂಡು ಬಳ್ಳಿಯ ಸಹಾಯದಿಂದ ಆ ದಡವನ್ನು ಸೇರಿ ಪ್ರಾಣ ಉಳಿಸಿಕೊಳ್ಳಿ ಎಂದು ಸನ್ನೆ ಮಾಡಿದನು. ಅದರಂತೆಯೇ ಆ ಕಪಿಗಳೆಲ್ಲ ಬೋಧಿಸತ್ವರ ಬೆನ್ನನ್ನು ತುಳಿದುಕೊಂಡು ಬಳ್ಳಿಯಲ್ಲಿ ನೇತಾಡುತ್ತ ಆ ದಡವನ್ನು ತಲುಪಲು ಆರಂಭಿಸಿದವು.


 ಆದರೆ ಆ ಕಪಿ ಗುಂಪಿನಲ್ಲಿ ದುಷ್ಟ ಕೋತಿಯೊಂದು ಸಹಾ ಇತ್ತು. ಅದಕ್ಕೆ ಬೋಧಿಸತ್ವರನ್ನು ಕಂಡರೆ ಈಷರ್ೆಯಿತ್ತು. ಹೀಗಾಗಿ ಅದು ದೊಡ್ಡ ರೆಂಬೆ ಏರಿ, ಅಲ್ಲಿಂದ ಬೋಧಿಸತ್ವರ ಬೆನ್ನಮೇಲೆ ಜೋರಾಗಿ ಧುಮುಕಿತು. ಇದರಿಂದಾಗಿ ಬೋಧಿಸತ್ವರಿಗೆ ಪ್ರಾಣ ಹೋದಂತೆ ಆಯಿತು. ಆದರೂ ಸರ್ವಹಿತಕ್ಕಾಗಿ, ನೋವನ್ನು ಸಹಿಸಿಕೊಂಡು, ರೆಂಬೆ ಮಾತ್ರ ಬಿಡಲಿಲ್ಲ. ಎಲ್ಲರೂ ಹೊರಟ ನಂತರ ಕುಸಿದು ಬಿದ್ದಿತ್ತು.

 ರಾಜನು ಬೋಧಿಸತ್ವರ ಈ ಪರಾಕ್ರಮ, ನಾಯಕತ್ವ, ಬುದ್ಧಿಮತ್ತತೆ, ತನ್ನ ಗುಂಪಿಗಾಗಿ ತನ್ನನ್ನು ಅಪರ್ಿಸಿಕೊಂಡಿತ್ತು. ಈ ಎಲ್ಲವನ್ನು ಬಹುವಾಗಿ ಮೆಚ್ಚಿ ಆ ವಾನರನ ಆರೈಕೆ ಮಾಡಿದನು. ರಾಜನು ಮಾತನಾಡಿಸಿದಾಗ ಅದು ಹೀಗೆ ಹೇಳಿ ಮಡಿಯಿತು ನಾಯಕನಾದವನು ತನ್ನ ಹಿಂಡಿನ ಎಲ್ಲರ ಬಗ್ಗೆ ಕ್ಷೇಮ ಚಿಂತಿಸಿ, ಸುಖವನ್ನುಂಟು ಮಾಡಬೇಕು ಎಂದು. ರಾಜನು ಗೌರವದಿಂದ ಬೋಧಿಸತ್ತರಿಗೆ ಚೈತ್ಯ ಕಟ್ಟಿಸಿದನು. 

ಬೋಧಿಸತ್ತ ಸಿವಿ (ಶಿಬಿ)

ಬೋಧಿಸತ್ತ ಸಿವಿ (ಶಿಬಿ)


ಒಮ್ಮೆ ಭಿಕ್ಷುಗಳು ಕೋಸಲ ನರೇಶ ಪಸೇನದಿಯನ್ನು ಕುರಿತು, ಆತನ ದಾನ ಗುಣಗಳನ್ನು ಪ್ರಶಂಸಿಸುತ್ತಿದ್ದರು. ಆಗ ಭಗವಾನರು ಭಿಕ್ಷುಗಳೇ, ಬಾಹ್ಯ ವಸ್ತುಗಳ ದಾನ ಮಾಡುವುದು ಸುಲಭ. ಹಿಂದೆ ಸಹಾ ಪಂಡಿತರು ಪ್ರತಿನಿತ್ಯ ಆರೇಳು ಸಾವಿರ ದಾನ ಮಾಡುತ್ತಿದ್ದರು. ಆದರೂ ಅದರಿಂದಾಗಿ ಸಂತುಷ್ಟರಾಗದೆ ತಮ್ಮ ದೇಹದ ಅಂಗವನ್ನೇ ದಾನವಾಗಿ ನೀಡಿದರು.
ಭಿಕ್ಷುಗಳು ಅದನ್ನು ವಿವರಿಸುವಂತೆ ಕೇಳಿಕೊಂಡಾಗ ಭಗವಾನರು ತಾವು ಹಿಂದೆ ಸಿವಿ ಬೋಧಿಸತ್ತರಾಗಿದ್ದಾಗಿನ ಘಟನೆಯನ್ನು ತಿಳಿಸಿದರು.
ಬಹುಕಾಲದ ಹಿಂದೆ ಶಿಬಿ ರಾಷ್ಟ್ರವನ್ನು ಸಿವಿ ಮಹಾರಾಜನು ಆಳುತ್ತಿದ್ದನು. ಆತನ ಪುತ್ರನೇ ಸಿವಿಕುಮಾರ (ಬೋಧಿಸತ್ತ). ಮುಂದೆ ಸಿವಿಕುಮಾರರೇ ರಾಜರಾದರು. ಅವರು ಅತ್ಯಂತ ದಾನ ಹೃದಯಿಗಳಾಗಿದ್ದರು. ಪ್ರತಿನಿತ್ಯವೂ ಸಾವಿರಗಟ್ಟಲೇ ದಾನವನ್ನು ಮಾಡುತ್ತಿದ್ದರು. ನಾನಾರೀತಿಯ ಆಹಾರ, ಪಾನೀಯ, ವಸ್ತ್ರಗಳು, ವಾಹನಗಳು, ವಸತಿಗಳು, ವಸ್ತುಗಳು ಹಾಗೆಯೇ ಸರ್ವರೀತಿಯ ದಾನವನ್ನು ಪ್ರತಿನಿತ್ಯ ಮಾಡುತ್ತಿದ್ದರು. ಪ್ರಜೆಗಳನ್ನು ಮಕ್ಕಳಂತೆ ಭಾವಿಸಿ, ಪ್ರಜೆಗಳಿಗೆ ಸ್ವಲ್ಪವೂ ತೊಂದರೆಯಾಗದಂತೆ, ಸದಾ ಸುಖಿಯಾಗಿರುವಂತೆ ನಾನಾ ಸವಲತ್ತುಗಳನ್ನು ಮಾಡಿದರು. ಹೀಗೆ ನಾನಾ ದಾನಗಳನ್ನು ಮಾಡಿದರೂ ಸಹಾ ಅವರಿಗೆ ಅದು ತೃಪ್ತಿತರಲಿಲ್ಲ. ಇದಕ್ಕಿಂತ ಶ್ರೇಷ್ಠವಾದುದನ್ನೇ ದಾನ ನೀಡಬೇಕೆಂದು ಚಿಂತಿಸುತ್ತಿದ್ದಾಗ ಅವರ ಮನಸ್ಸಿನಲ್ಲಿ ದಾನ ಹೃದಯವು ವಿಕಸಿತವಾಗಿ ಹೀಗೆ ಮನಸ್ಸಿನಲ್ಲಿ ದಾನಸಂಕಲ್ಪಗಳನ್ನು ಮಾಡತೊಡಗಿದರು.
ನಾನು ದಾನ ಮಾಡದೆ ಇರುವಂತಹ ಬಾಹ್ಯವಸ್ತುವೇ ಇಲ್ಲವಾಗಿದೆ. ಈಗ ನಾನು ನನ್ನಲ್ಲಿನ ಯಾವುದನ್ನಾದರೂ ದಾನ ಮಾಡಬೇಕಾಗಿದೆ. ಯಾರಾದರೂ ಅತಿಥಿಗಳು ನನ್ನ ದೇಹದ ಮಾಂಸವನ್ನಾಗಲಿ, ನನ್ನ ರಕ್ತವಾಗಲಿ, ನನ್ನ ಕಣ್ಣುಗಳಾಗಲಿ ಅಥವಾ ನನ್ನ ಹೃದಯವಾಗಲಿ ಕೇಳಿದರೆ ನಾನು ಲವಲೇಶವೂ ಕಂಪಿಸದೆ ಅವನ್ನೆಲ್ಲಾ ಕತ್ತರಿಸಿ ಅಥವಾ ಕಿತ್ತು ದಾನ ಮಾಡಿಬಿಡುವೆ.
ಅವರ ಈ ಶುದ್ಧ ಸಂಕಲ್ಪವು ದಶದಿಕ್ಕುಗಳಿಗೂ ಪ್ರಸರಿಸಿತು, ದೇವೇಂದ್ರ ಸಕ್ಕನಿಗೂ ಇದು ಕೇಳಿಸಿತು. ಇದನ್ನು ಪರೀಕ್ಷಿಸಬೇಕೆಂದು ಕುರುಡ ವೃದ್ಧ ಬ್ರಾಹ್ಮಣನಾಗಿ ವೇಷ ಧರಿಸಿಕೊಂಡು, ರಾಜನ ದಾನ ಭವನಕ್ಕೆ ಬಂದನು. ನಂತರ ಹೀಗೆ ಹೇಳಿದನು:
ಮಹಾಪ್ರಭು ನಿಮ್ಮ ದಾನ ಖ್ಯಾತಿಯನ್ನು ಆಲಿಸಿ ಬಹುದೂರದಿಂದ ಬಂದಿರುವೆನು. ನನಗೆ ಎರಡು ಕಣ್ಣಿಲ್ಲ. ನೀವೇನಾದರೂ ಒಂದು ಕಣ್ಣನ್ನು ನನಗೆ ದಾನವಾಗಿ ನೀಡಿದರೆ, ನಾವಿಬ್ಬರೂ ಏಕನೇತ್ರರಾಗುತ್ತೇವೆ.
ಇದನ್ನು ಆಲಿಸುತ್ತಲೇ ಬೋಧಿಸತ್ವರು ಆನಂದಭರಿತರಾದರು. ತಮ್ಮ ಸಂಕಲ್ಪವು ಇಂದು ಸಿದ್ಧಿಸುವುದೆಂದು ಹಿಗ್ಗಿ ಅವರು ಆ ಬ್ರಾಹ್ಮಣನಿಗೆ ಹೀಗೆ ಹೇಳಿದರು: ಓ ಬ್ರಾಹ್ಮಣ, ನೀನು ಒಂದು ಕಣ್ಣನ್ನು ಕೇಳುತ್ತಿದ್ದೀಯೇ, ಆದರೆ ನಾನು ಎರಡು ಕಣ್ಣನ್ನು ದಾನವಾಗಿ ನೀಡುತ್ತೇನೆ, ಸ್ವೀಕರಿಸು ಎಂದು ಹೇಳಿ ರಾಜನು ಸೀವಕನೆಂಬ ಪ್ರಖ್ಯಾತ ಶಸ್ತ್ರಚಿಕಿತ್ಸಕನನ್ನು ಕರೆಸಿದನು. ಆತನಿಗೆ ತನ್ನ ಅಭಿಪ್ರಾಯವನ್ನು ತಿಳಿಸಿದನು. ಅದನ್ನು ಆಲಿಸಿದ ವೈದ್ಯ, ರಾಣಿ, ಅಂತಃಪುರವು, ನಾಗರೀಕರು ಗಾಬರಿಗೊಂಡರು. ಹಾಗೆ ಮಾಡಬೇಡಿ ಎಂದು ಗೋಳಾಡಿ ಪ್ರಲಾಪಿಸಿದರು. ಓ ಪ್ರಭು, ಅದರ ಬದಲು ಮುತ್ತುರತ್ನ, ವಜ್ರ ವೈಢೂರ್ಯವನ್ನು ಬೇಕಾದರೆ ನೀಡಿರಿ. ಆದರೆ ಚಕ್ಷು ಅಮೂಲ್ಯವಾದುದು, ನೀಡದಿರಿ ಎಂದರು.
ಅದಕ್ಕೆ ಬೋಧಿಸತ್ವರು ಹೀಗೆ ಉತ್ತರಿಸಿದರು: ದಾನ ನೀಡುವೆ ಎಂದು ನಂತರ ನಿರಾಕರಿಸಿದರೆ, ಮಿಥ್ಯಾವಾದಿಯಾಗುವೆನು, ಪಾಪಿಯಾಗುವೆನು, ಕೇಳಿದ್ದನ್ನು ನೀಡಬೇಕು ಹೊರತು ಕೇಳದುದನ್ನು ನೀಡಬಾರದು. ಆದ್ದರಿಂದ ನಾನು ನೇತ್ರಗಳನ್ನು ನೀಡಿಯೇ ತೀರುತ್ತೇನೆ ಎಂದರು.
ಇದನ್ನು ಆಲಿಸಿದ ಅಮಾತ್ಯರು ಏತಕ್ಕಾಗಿ, ಯಾವ ಪುರುಷಾರ್ಥಕ್ಕಾಗಿ ಹೀಗೆ ನೇತ್ರದಾನ ನೀಡುತ್ತಿರುವಿರಿ ಎಂದು ಪ್ರಶ್ನಿಸಿದರು.
ಅದಕ್ಕೆ ಬೋಧಿಸತ್ವರು ಹೀಗೆ ಉತ್ತರಿಸಿದರು:
ನಾನು ಯಾವುದೇ ಪ್ರಾಪಂಚಿಕ
ಯಶಸ್ಸಿಗಾಗಲಿ, ಪುತ್ರಿಚ್ಛೆಗಾಗಲಿ,
ಧನ ಅಥವಾ ರಾಷ್ಟ್ರಾಪೇಕ್ಷೆಗಾಗಲಿ, ನೀಡುತ್ತಿಲ್ಲ.
ನನಗೆ ದಾನದಲ್ಲೇ ಆನಂದವಿರುವುದರಿಂದ ದಾನ ನೀಡುತ್ತಿರುವೆ.
ನನ್ನ ನೇತ್ರಗಳ ಬಗ್ಗೆ ನನಗೆ ದ್ವೇಷವಿಲ್ಲ,
ಅವು ನನಗೆ ಅಪ್ರಿಯವೂ ಅಲ್ಲ. ನನಗೆ
ಸಬ್ಬಞ್ಞತೆ (ಸಮ್ಮಾಸಂಭೋದಿ)ಯು
ಪರಮ ಪ್ರಿಯವಾಗಿದೆ, ಅದಕ್ಕಾಗಿ ನಾನು
ಕಣ್ಣುಗಳೇ ಅಲ್ಲ, ಏನನ್ನಾದರೂ ದಾನ ಮಾಡಲು
ನಾನು ಸಿದ್ಧನಾಗಿದ್ದೇನೆ ಎಂದರು.
ನಂತರ ಬ್ರಾಹ್ಮಣನಿಗೆ ಚಕ್ಷುಗಳನ್ನು ತನ್ನಿಂದ ತೆಗೆದು ಜೋಡಿಸುವಂತೆ ವೈದ್ಯನಾದ ಸೇವಕನಿಗೆ ಆಜ್ಞಾಪಿಸಿದನು.
ಪ್ರಭು, ಚಕ್ಷುದಾನ ಅತ್ಯಂತ ಗಂಭೀರಕರ ವಿಷಯ. ತಾವು ಮತ್ತೊಂದುಬಾರಿ ಯೋಚಿಸಿ ನಿರ್ಧರಿಸಿದರೆ ಉತ್ತಮ ಎಂದು ವೈದ್ಯನು ಹೇಳಿದಾಗ,
ನನ್ನ ನಿಧರ್ಾರ ಸ್ಥಿರವಾಗಿದೆ, ತಡಬೇಡ ಆರಂಭಿಸು ಎಂದು ಸಿವಿ ಬೋಧಿಸತ್ವರು ನುಡಿದರು.
ವೈದ್ಯನು ತನ್ನ ಕಾರ್ಯ ಆರಂಭಿಸಿದನು. ಕೆಲವು ಹಂತದ ಶಸ್ತ್ರಚಿಕಿತ್ಸೆಯ ನಂತರ ಮಹಾಪ್ರಭು ಮತ್ತೆ ಮೊದಲಿನಂತೆ ಮಾಡುವೆನು, ನಿಧರ್ಾರ ಬದಲಿಸುವಿರಾ? ಎಂದು ಕೇಳಿಕೊಂಡನು.
ಬೇಡ, ಮುಂದುವರೆಸು. ನನಗೆ ಈ ಕಣ್ಣಿಗಿಂತಲೂ ಸಾವಿರಪಟ್ಟು ಲಕ್ಷಪಟ್ಟು ಬುದ್ಧತ್ವದ ಚಕ್ಷುವೇ ಪ್ರಿಯವಾದುದು. ಈ ನೇತ್ರದಾನದಿಂದಾಗಿ ನನಗೆ ಸಮ್ಮಾಸಂಬೋಧಿಯನ್ನು ಪ್ರಾಪ್ತಿಮಾಡುವ ಚಕ್ಷು ಸಿಗುವಂತಾಗಲಿ ಎಂದು ಬೋಧಿಸತ್ವರು ಮರುನುಡಿದರು. ವೈದ್ಯರು ಅದರಂತೆಯೇ ಮಾಡಿದರು.
ಚಕ್ಷುಗಳನ್ನು ಪಡೆದ ನಂತರ ಆ ಬ್ರಾಹ್ಮಣನು ನಗರದಿಂದ ಹೊರಟುಹೋದನು. ಹೀಗೆ ಬೋಧಿಸತ್ವರು ಆ ಜನ್ಮದಲ್ಲಿ ಅಭಯ ದಾನವನ್ನು ಮಾಡಿದರು.

ಬೋಧಿಸತ್ವ ಬ್ರಹ್ಮದತ್ತ ಕುಮಾರರ ಅಭಯ ದಾನ

 ಬೋಧಿಸತ್ವ ಬ್ರಹ್ಮದತ್ತ ಕುಮಾರರ ಅಭಯ ದಾನ



ಬಹುಕಾಲದ ಹಿಂದೆ ಬೋಧಿಸತ್ವರು ವಾರಣಾಸಿಯ ಪಟ್ಟದ ರಾಣಿಯಲ್ಲಿ ಜನಿಸಿ ಬಹ್ಮದತ್ತಕುಮಾರ ಎಂದು ಹೆಸರನ್ನು ಪಡೆದರು. ಅವರು ಮುಂದೆ ಯುವರಾಜರಾದರು. ಆ ಕಾಲದಲ್ಲೂ ಸಹಾ ದೇವರಿಗೆ ಹರಕೆ ಹೊತ್ತು ಅಥವಾ ದೇವತೆಗಳಿಗೆ ಪ್ರಸನ್ನರಾಗಿಸಲು ಪ್ರಾಣಿ ಬಲಿಗಳನ್ನು ನೀಡುತ್ತಿದ್ದರು. ಸಾವಿರಗಟ್ಟಲೇ ಪ್ರಾಣಿಗಳನ್ನು ಬಲಿ ನೀಡುತ್ತಿದ್ದರು. ಇದನ್ನು ಕಂಡ ಬೋಧಿಸತ್ವರು ಹೀಗೆ ಸಂಕಲ್ಪಿಸಿದರು: ಈ ಜನರು ಮೌಢ್ಯದಿಂದಾಗಿ ಮುಗ್ಧ ಪ್ರಾಣಿಗಳನ್ನು ಬಲಿ ನೀಡುತ್ತಿದ್ದಾರೆ. ನಾನು ಉಪಾಯದಿಂದಾಗಿ ಈ ಪ್ರಾಣಿ ಬಲಿಯನ್ನು ಮುಂದೆ ತಡೆಗಟ್ಟುತ್ತೇನೆ.
ಅದಕ್ಕಾಗಿ ಅವರು ಉಪಾಯವನ್ನು ಮಾಡಿದರು. ಅದೇನೆಂದರೆ, ವಟವೃಕ್ಷವೊಂದಕ್ಕೆ ಪ್ರತಿದಿನ ಪೂಜಿಸಿ ಬರುತ್ತಿದ್ದರು. ಕಾಲನಂತರ ಅವರ ತಂದೆಯವರು ಮೃತರಾಗಿರುವುದನ್ನು ಕಂಡು, ಅವರನ್ನೇ ಮಹಾರಾಜನನ್ನಾಗಿ ಮಾಡಿದರು. ಆಗ ಬೋಧಿಸತ್ವರು ಪ್ರಜೆಗಳನ್ನು ಉದ್ದೇಶಿಸಿ ಹೀಗೆ ಭಾಷಣ ಮಾಡಿದರು ಪ್ರಿಯ ಪ್ರಜೆಗಳೇ, ನನಗೆ ರಾಜ್ಯ ದೊರೆತಿರುವುದು ಈ ವಟವೃಕ್ಷದಲ್ಲಿರುವ ದೇವತೆಯ ಪ್ರಭಾವದಿಂದಲೇ ಆಗಿದೆ. ನಾನು ರಾಜನಾದರೆ ಬಲಿಕೊಡುವೆ ಎಂದು ಹರಕೆ ಹೊತ್ತಿದ್ದೇನೆ, ಅದನ್ನು ನೆರವೇರಿಸಲು ಸಿದ್ಧತೆಗಳನ್ನು ಪ್ರಾರಂಭಿಸಿರಿ.
ಆಯಿತು ಪ್ರಭು, ಯಾವ ಪ್ರಾಣಿಗಳ ಆಯ್ಕೆ ನಿಮ್ಮದಾಗಿದೆ?
ಮಾನವರು.
ಏನು ಮಾನವರೇ?
ಹೌದು, ಯಾರು ಜೀವಹತ್ಯೆ ಮಾಡುವರೋ, ಕಳ್ಳತನ ಮಾಡುವರೋ, ವ್ಯಭಿಚಾರ ತಲ್ಲೀನರೋ, ಸುಳ್ಳುಗಾರರೋ, ಚಾಡಿಕೋರರೋ, ನಿಂದನೆಗಾರರೋ, ಹರಟೆಗಾರರೋ, ದುರಾಸೆ ಪೀಡಿತರೋ, ದ್ವೇಷಿಗಳೋ ಮತ್ತು ಮೂಢನಂಬಿಕೆಯವರೋ ಅಂತಹವನ್ನು ಸಾವಿರ ಸಂಖ್ಯೆಯು ತುಂಬಿದ ದಿನವೇ ದೇವತೆಗೆ ಬಲಿಯನ್ನು ಅಪರ್ಿಸೋಣ. ಇದನ್ನು ಡಂಗೂರ ಸಾರಿಸಿ ಎಂದು ಆಜ್ಞಾಪಿಸಿದರು.
ಇದನ್ನು ಆಲಿಸಿದ ಜನರು ಪ್ರಾಣ ಭಯದಿಂದಾಗಿ ಆ ದಶಪಾಪ ಕರ್ಮಗಳನ್ನು ಮಾಡುವುದನ್ನೇ ಬಿಟ್ಟುಬಿಟ್ಟರು. ಇದರಿಂದಾಗಿ ಪಾಪಕರ್ಮಗಳು ತಡೆಯಲ್ಪಟ್ಟವು. ಅಪಾರ ಜೀವಿಗಳು ರಕ್ಷಿಸಲ್ಪಟ್ಟವು.

ಬೋಧಿಸತ್ವ ಮಹಾಔಷಧಕುಮಾರ

 ಬೋಧಿಸತ್ವ ಮಹಾಔಷಧಕುಮಾರ

ಬಹುಕಾಲದ ಹಿಂದೆ ಮಿಥಿಲಾನಗರದಲ್ಲಿ ಶ್ರೀವರ್ಧ ಮತ್ತು ಸುಮನ ದೇವಿಯವರಿಗೆ ಪುತ್ರರತ್ನವೊಂದು ಜನಿಸಿತು. ಆ ಮಗುವೇ ಬೋಧಿಸತ್ವ ಮಹಾಔಷಧಕುಮಾರ. ಈ ಬೋಧಿಸತ್ತ ಜನಿಸುವಾಗಲು ಸಹಾ ತಾಯಿಗೆ ಸ್ವಲ್ಪವೂ ನೋವು ಉಂಟಾಗಲಿಲ್ಲ. ಬೋಧಿಸತ್ವ ಹುಟ್ಟುವಾಗ ದೇವೇಂದ್ರ ಸಕ್ಕನು ಸಹಾ ಅಲ್ಲಿಗೆ ಬಂದುಬಿಟ್ಟಿದ್ದನು. ಆತನು ಆ ಮಗುವಿನ ಅಂಗೈಯಲ್ಲಿ ಮೂಲಿಕೆಯನ್ನಿಟ್ಟು ಅದೃಶ್ಯನಾದನು. ಆದರೆ ಅಲ್ಲಿನ ಜನರಿಗೆ ಮೂಲಿಕೆ ಸಹಿತವೇ ಜನ್ಮಿಸಿದ್ದಾನೆ ಎಂದು ಭಾವಿಸಿದರು. ತಾಯಿಯು ಮಗುವಿಗೆ ಕಂದ ಕೈಯಲ್ಲಿ ಏನಿದೆ? ಎಂದು ಸುಮ್ಮನೆ ಪ್ರಶ್ನಿಸಿದಾಗ ಅಮ್ಮ ನಾನು ಔಷಧಿ ತಂದಿದ್ದೇನೆ, ಇದರಿಂದ ಎಲ್ಲಾ ರೋಗಗಳು ವಾಸಿಯಾಗುತ್ತದೆ ಎಂದಿತು. ಆಕೆ ಪತಿಗೆ ವಿಷಯ ತಿಳಿಸಿದಳು. ಅತನಿಗೆ ಏಳು ವರ್ಷದಿಂದ ತಲೆನೋವು ಇತ್ತು. ಮೂಲಿಕೆಯನ್ನು ಕಲ್ಲಿನ ಮೇಲೆ ತೇಯ್ದು ಹಣೆಗೆ ಸ್ವಲ್ಪ ಹಚ್ಚುತ್ತಲೇ ತಲೆನೋವು ಮಾಯವಾಗಿತ್ತು.
ಎಲ್ಲೆಡೆ ಈ ವಿಚಿತ್ರ ಸುದ್ದಿ ಹಬ್ಬಿತು. ಮೂಲಿಕೆಯೊಂದಿಗೆ ಜನಿಸಿದ್ದಾನೆ, ಅದರಿಂದ ಸರ್ವರೋಗಗಳು ವಾಸಿಯಾಗುತ್ತವೆ. ಆ ಮಗುವು ಹುಟ್ಟುತ್ತಲೇ ಮಾತನಾಡಬಲ್ಲನು. ಆ ಮೂಲಿಕೆ ಇರುವವರೆಗೂ ಅದು ರೋಗವುಳ್ಳ ಸರ್ವರಿಗೂ ಕಾಯಿಲೆಯಿಂದ ಮುಕ್ತಿ ದೊರೆಯಿತು. ಆದ್ದರಿಂದಲೇ ಆ ಮಗುವಿಗೆ ಮಹಾಔಷಧಕುಮಾರ ಎಂದು ಹೆಸರಿಡಲಾಯಿತು.
ಬೋಧಿಸತ್ವರು ಮೂರು ಜನ್ಮದಲ್ಲಿ ಮಾತ್ರ ಹುಟ್ಟುತ್ತಲೇ ಮಾತನಾಡಿದ್ದಾರೆ. ಮಹಾಔಷಧಕುಮಾರನಾಗಿರುವಾಗ, ವೆಸ್ಸಂತರರಾಗಿದ್ದಾಗ ಮತ್ತು ಸಿದ್ಧಾರ್ಥನಾಗಿ ಕೊನೆಯ ಜನ್ಮದಲ್ಲಿ ಹುಟ್ಟುತ್ತಲೇ ಮಾತನಾಡಿದ್ದಾರೆ.

ವಿಸಯ್ಹ ಬೋಧಿಸತ್ವ

ವಿಸಯ್ಹ ಬೋಧಿಸತ್ವ

ಬಹುಕಾಲದ ಹಿಂದೆ ಬೋಧಿಸತ್ವರು ವಾರಣಾಸಿಯಲ್ಲಿ ವಿಸಯ್ಹ ಶ್ರೇಷ್ಠಿಯಾಗಿ 80 ಕೋಟಿ ಐಶ್ವರ್ಯಕ್ಕೆ ಒಡೆಯರಾಗಿದ್ದರು. ಅವರು ಪ್ರತಿದಿನ ಆರು ಲಕ್ಷ ಮೌಲ್ಯದ ದಾನ ಮಾಡುತ್ತಿದ್ದರು. ಇದರಿಂದಾಗಿ ಸಮಸ್ತ ಜಂಬೂದ್ವೀಪದಲ್ಲೇ ಪ್ರಸಿದ್ಧಿಯನ್ನು ಪಡೆದರು.
ಇದರ ಪರಿಣಾಮವಾಗಿ ಇಂದ್ರನಿಗೆ ಭಯವುಂಟಾಯಿತು. ಏಕೆಂದರೆ ಈ ರೀತಿಯ ದಾನ ಮಾಡಿದವರು ಸಕ್ಕನ ಸ್ಥಾನವನ್ನು ಹೊಂದಬಹುದಾಗಿತ್ತು. ಅದಕ್ಕಾಗಿ ಸಕ್ಕನು ಬೋಧಿಸತ್ವನ ಸಮಸ್ತ ಐಶ್ವರ್ಯವನ್ನೆಲ್ಲಾ ಅಂತದರ್ಾನ ಮಾಡಿಬಿಟ್ಟನು. ಉಟ್ಟ ಬಟ್ಟೆಯ ವಿನಃ ಅವರಲ್ಲಿ ಅರ್ಧ ಕಾಸೂ ಸಹಾ ದೊರೆಯಲಿಲ್ಲ.
ಪರಿಸ್ಥಿತಿ ಹೀಗಿದ್ದರೂ ಸಹಾ ಬೋಧಿಸತ್ವರ ದಾನದ ಉತ್ಸಾಹ ಮಾತ್ರ ಲವಲೇಶವೂ ತಗ್ಗಲಿಲ್ಲ. ಅವರು ಹುಲ್ಲು ಕೊಯ್ದು ಅದನ್ನು ಮಾರಿ ದಾನ ಮಾಡಲು ನಿರ್ಧರಿಸಿದರು. ಹಾಗೆಯೇ ಮಾಡಿ ಬಂದ ಲಾಭದಲ್ಲಿ ಅರ್ಧಭಾಗ ದಾನಕ್ಕೆಂದು ನಿರ್ಧರಿಸಿದರು. ಯಾಚಕರು ಹೆಚ್ಚಾಗಿದ್ದರಿಂದಾಗಿ ಎಲ್ಲಾ ದಾನ ಮಾಡಿ ವಿಸಯ್ಹ ಮತ್ತು ಅವರ ಪತ್ನಿಯು ಉಪವಾಸದಿಂದ ಮಲಗಿದರು. ಇದೇಬಗೆಯಲ್ಲಿ ಏಳು ದಿನಗಳು ಕಳೆದಾಗ, ಆ ದಿನ ಆತನು ನಿತ್ರಾಣದಿಂದಾಗಿ ಕಣ್ಣು ತಿರುಗಿ ಬಿದ್ದುಬಿಡುತ್ತಾನೆ. ಆಗ ಶಕ್ರನು ಪ್ರತ್ಯಕ್ಷನಾಗಿ ಹೀಗೆ ನುಡಿಯುತ್ತಾನೆ: ಓ ವಿಸಯ್ಹ, ಬಹುಕಾಲದಿಂದಲೂ ದಾನ ನೀಡುತ್ತಿರುವೆ. ಇದರಿಂದಲೇ ನಿನ್ನ ಐಶ್ವರ್ಯ ಪೂರ್ಣವಾಗಿ ಕ್ಷಯವಾಗಿದೆ. ಆದ್ದರಿಂದ ದಾನದಲ್ಲಿ ನಿಯಂತ್ರಣವುಳ್ಳವನಾಗು, ಆಗ ನಿನಗೆ ನಿನ್ನ ಐಶ್ವರ್ಯವನ್ನೆಲ್ಲಾ ಮರಳಿ ಸಿಗುವುದು.
ಆಗ ಬೋಧಿಸತ್ವ ನೀವು ಯಾರು ಎಂದು ಕೇಳುತ್ತಾರೆ. ನಾನು ಇಂದ್ರ ಎಂದು ಆತನು ಉತ್ತರಿಸಿದಾಗ, ಬೋಧಿಸತ್ವರು ಹೀಗೆ ಉತ್ತರಿಸುತ್ತಾರೆ. ಓ ಇಂದ್ರ, ನೀನು ಸ್ವತಃ ದಾನ, ಶೀಲ ಮತ್ತು ಉಪೋಸತದಿಂದಲೇ ಈ ಪದವಿ ಪಡೆದಿರುವಿರಿ. ನನಗೆ ದಾನ ಮಾಡಬೇಡೆಂದು ಅಕಾರ್ಯವನ್ನು ಏಕೆ ಎಸಗುತ್ತಿರುವಿರಿ? ಇದು ಸರಿಯಲ್ಲ, ಧನಕ್ಕಾಗಿ ದಾನವನ್ನು ನಾನು ತೊರೆಯಲಾರೆ. ಬೇಕಾದರೆ ದಾನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವೆ. ನಿರ್ಗತಿಕ ಸ್ಥಿತಿಯಲ್ಲೂ ಕೈಲಾದಷ್ಟು ದಾನವನ್ನು ನಾನು ಮಾಡಿಯೇ ತೀರುವೆ.
ಓ ವಿಸಯ್ಹ ದಾನವನ್ನು ಏಕೆ ಮಾಡುವೆ? ಶಕ್ರತ್ವದ ಬಯಕೆಯೇ?
ನನ್ನ ದಾನದ ಉದ್ದೇಶ ಶಕ್ರತ್ವವಲ್ಲ, ಬ್ರಹ್ಮತ್ವವೂ ಅಲ್ಲ. ಸಮ್ಮಾಸಂಬೋಧಿಯ ಪ್ರಾಪ್ತಿಗಾಗಿ ನಾನು ದಾನವನ್ನು ಮಾಡುತ್ತೇನೆ.
ಈಗ ಶಕ್ರನಿಗೆ ಭಯ ನಿವಾರಣೆಯಾಗಿ, ಆನಂದಿತನಾಗಿ ಬೋಧಿಸತ್ವನ ಬೆನ್ನನ್ನು ಮುಟ್ಟುವುದೇ ತಡ, ಶರೀರ ಮತ್ತೆ ಆರೋಗ್ಯಯುತವಾಗಿ, ಶಕ್ತಿಯುತವಾಗಿ, ತೇಜಸ್ಸುಭರಿತವಾಯಿತು. ಶಕ್ರನು ವಿಸಯ್ಹರವರ ಐಶ್ವರ್ಯವನ್ನು ಹಿಂತಿರುಗಿಸಿ, ಇನ್ನಷ್ಟು ಪ್ರಮಾಣದ ಐಶ್ವರ್ಯ ಸೇರಿಸಿ, ದಾನಕ್ಕೆ ಪ್ರೋತ್ಸಾಹಿಸಿ ಹೊರಟುಹೋದನು.

ಬೋಧಿಸತ್ತ ಅಕಿತ್ತಿ (ಅಕೀತರ್ಿ)ಯವರ ಅಲೋಭತೆ

 ಬೋಧಿಸತ್ತ ಅಕಿತ್ತಿ (ಅಕೀತರ್ಿ)ಯವರ ಅಲೋಭತೆ

ಬಹುಕಾಲದ ಹಿಂದೆ ಬೋಧಿಸತ್ತರು ಎಂಬತ್ತು ಕೋಟಿ ಐಶ್ವರ್ಯ ಇದ್ದಂತಹ ಬ್ರಾಹ್ಮಣನ ಮಗನಾಗಿ ಹುಟ್ಟಿದರು. ಅವರಿಗೆ ಅಕಿತ್ತಿ (ಅಕೀತರ್ಿ) ಎಂದು ಹೆಸರಿಡಲಾಯಿತು. ಕೆಲವರ್ಷ ನಂತರ ಅವರಿಗೆ ತಂಗಿಯು ಜನಿಸಿದಳು. ಆಕೆಯೇ ಯಶೋಮತಿ.
ಬೋಧಿಸತ್ವರು 16ನೇ ವಯಸ್ಸಿನಲ್ಲಿರುವಾಗಲೇ ಅವರ ತಂದೆ-ತಾಯಿಗಳು ಮೃತರಾದರು. ಆಗ ಬೋಧಿಸತ್ವರು ಹೀಗೆ ಚಿಂತಿಸಿದರು. ಇಲ್ಲಿ ಐಶ್ವರ್ಯ ಮಾತ್ರ ಕಾಣಿಸುತ್ತಿದೆ, ಆದರೆ ಸಂಪಾದಿಸಿದವರನ್ನು ನಾನು ಕಾಣದೇ ಹೋಗುತ್ತಿರುವೆನು. ಸಾವಿನ ನಂತರ ಐಶ್ವರ್ಯ ಇಲ್ಲೇ ಇರುತ್ತದೆ. ನಾನು ಸಹಾ ಇದನ್ನು ಬಿಟ್ಟು ಹೋಗಬೇಕಾಗಿದೆ ಎಂದು ಚಿಂತಿಸಿ, ತಂಗಿಗೆ ಆ ಸಂಪತ್ತು ನೀಡಿ ಪಬ್ಬಜಿತರಾಗಲು ನಿರ್ಧರಿಸಿದರು. ಆದರೆ ಅವರು ಇಷ್ಟಪಡದ ಆ ಸಂಪತ್ತು ತಂಗಿಗೂ ಇಷ್ಟವಾಗಲಿಲ್ಲ. ಹೀಗಾಗಿ ಅವರು ಒಂದು ವಾರಕ್ಕೂ ಅಧಿಕಕಾಲ ಇಡೀ ಸಂಪತ್ತನ್ನು ದಾನಮಾಡಿ, ನಂತರ ದೂರದ ಸ್ಥಳಕ್ಕೆ ತಲುಪಿ ಪರ್ಣಕುಟೀರವನ್ನು ನಿಮರ್ಿಸಿಕೊಂಡು ವಾಸಿಸಲಾರಂಭಿಸಿದರು. ಇದರಿಂದಾಗಿ ಅವರ ಕೀತರ್ಿ ಬಹುವಾಗಿ ವ್ಯಾಪಿಸಿತು. ಅವರ ಹೆಸರಲ್ಲೇ ಸ್ಥಳಗಳನ್ನು ಹೆಸರಿಸಿದರು. ಅಕೀತರ್ಿದ್ವಾರ, ಅಕೀತಿ ತೀರ್ಥ ಇತ್ಯಾದಿ. ಬೋಧಿಸತ್ವರಿಂದ ಪ್ರೇರೇಪಿತರಾಗಿ ಬಹುಜನರು ತಾವು ಸಹಾ ಪಬ್ಬಜಿತರಾಗಿ ಅವರ ಸಂಗಡ ನೆಲೆಸಿದರು. ಹೀಗೆ ನಡೆದರೆ ಸತ್ಕಾರ ಲಾಭ ಸಿಗುವುದು. ಆದರೆ ದ್ಯಾನಲಾಭ ಸಿಗದೆಂದು ಬೋಧಿಸತ್ವರು ಯಾರಿಗೂ ತಿಳಿಸದೆ ಅಹಿ ಎಂಬ ದ್ವೀಪದಲ್ಲಿ ನೆಲೆಸಿದರು.
ಬೋಧಿಸತ್ತರು ಅತ್ಯಂತ ಅಲ್ಪೆಚ್ಛೆವುಳ್ಳವರಾಗಿದ್ದರು. ತಾವು ಧ್ಯಾನಿಸುತ್ತಿದ್ದ ಮರದ ಹಣ್ಣು ಮತ್ತು ಎಲೆಗಳನ್ನು ತಿಂದೇ ಅವರು ಜೀವಿಸುತ್ತಿದ್ದರು. ಬೇರೆಲ್ಲೂ ಹೋಗುತ್ತಿರಲಿಲ್ಲ. ಆಗ ಇವರ ದೃಢನಿಧರ್ಾರಕ್ಕೆ ಆಕಷರ್ಿತನಾಗಿ ಇಂದ್ರನು ಯಾಚನೆ ಬಂದಾಗ ತಮಗೆಂದು ಇಟ್ಟಿದ್ದ ಎಲೆಗಳ ಆಹಾರವನ್ನೇ ದಾನವಾಗಿ ಅಪರ್ಿಸಿ ತಾವು ಉಪವಾಸದಿಂದಲೇ ಧ್ಯಾನಿಸಿದರು. ಹೀಗೆಯೇ ಮೂರು ದಿನವೂ ಪುನರಾವತರ್ಿತವಾಯಿತು. ಆಗ ಇಂದ್ರ ತನ್ನ ನಿಜರೂಪ ತೋರಿಸಿ, ಇಂತಹ ಸಂತೃಪ್ತ, ಧ್ಯಾನಜೀವನದ ಉದ್ದೇಶವನ್ನು ಕೇಳಿದನು. ಆಗ ಬೋಧಿಸತ್ವರು ಬುದ್ಧತ್ವವೇ ತಮ್ಮ ಉದ್ದೇಶವೆಂದು ಹೇಳಿದರು. ಇವರ ಉತ್ತರದಿಂದ ಸಂತೋಷಗೊಂಡ ಇಂದ್ರ ಅವರಿಗೆ ವರಗಳನ್ನು ಕೇಳಿಕೋ ಎಂದಾಗ ಅವರು ಈ ಬಗೆಯ ವರಗಳನ್ನು ಕೇಳಿಕೊಂಡರು.
ನನಗೆ ಯಾವ ವಸ್ತುವಿನಲ್ಲಾಗಲಿ, ವಿಷಯದಲ್ಲಿಯಾಗಲಿ, ಯಾವ ವ್ಯಕ್ತಿಯಲ್ಲಾಗಲಿ ಲೋಭ ಉಂಟಾಗದಿರಲಿ.
ನನ್ನಲ್ಲಿ ದ್ವೇಷ ಉಂಟಾಗದಿರಲಿ.
ನಾನು ಮೂರ್ಖರನ್ನು ದಶರ್ಿಸದಿರಲಿ, ಸಂಧಿಸದಿರಲಿ.
ನಾನು ಸದಾ ವಿವೇಕಿಯನ್ನೇ ಕಾಣುವಂತಾಗಲಿ.
ಮತ್ತೆ ನೀವು ನನಗೆ ಕಾಣದಿರಲಿ, ಏಕೆಂದರೆ ಕಾಮನೆಗಳನ್ನು ಪೂರೈಸುವ ನಿಮ್ಮಿಂದ, ನಾನು ಪ್ರಮಾದಿಯಾಗದಿರಲಿ.
ನಂತರ ಇಂದ್ರನು ಹಾರೈಸಿ ಮಾಯವಾದನು.

ಬೋಧಿಸತ್ವರು ಬಲಿಷ್ಠರಾಗುವ ಹತ್ತು ವಿಧಗಳು

ಬೋಧಿಸತ್ವರು ಬಲಿಷ್ಠರಾಗುವ ಹತ್ತು ವಿಧಗಳು



1. ಬೋಧಿಸತ್ವರು ಈ ಜಗತ್ತಿನಲ್ಲಿ ದೇಹವನ್ನು ಮತ್ತು ಪ್ರಾಣವನ್ನು ಬೇಕಾದರೆ ನೀಡುತ್ತಾರೆ. ಆದರೆ ಸದ್ಧಮ್ಮವನ್ನು ಎಂದಿಗೂ ಬಿಡುವುದಿಲ್ಲ. ಅವರೆಂದು ಸಧಮ್ಮವಾದ ದಾನ, ಶೀಲ, ಸಮಾಧಿ ಮತ್ತು ಪ್ರಜ್ಞಾವನ್ನು ತೊರೆಯುವುದಿಲ್ಲ.
2. ಬೋಧಿಸತ್ವರು ಸರ್ವಜೀವಿಗಳ ಎದುರು ತಲೆಬಾಗುವರು ಮತ್ತು ಅಹಂಕಾರವನ್ನು ಬೆಳೆಯಲು ಬಿಡಲಾರರು.
3. ಬೋಧಿಸತ್ವರು ದುರ್ಬಲ ಜೀವಿಗಳ ಬಗ್ಗೆ ಕರುಣಾಭರಿತರಾಗಿರುತ್ತಾರೆ, ಜೀವಿಗಳಿಗೆ ಅವರು ಎಂದಿಗೂ ದ್ವೇಷಿಸುವುದಿಲ್ಲ.
4. ಬೋಧಿಸತ್ವರು ಹಸಿದವರಿಗೆ ಉತ್ತಮವಾದ ಆಹಾರ ನೀಡುತ್ತಾರೆ.
5. ಬೋಧಿಸತ್ವರು ಭೀತಿಗೊಂಡವರಿಗೆ ರಕ್ಷಣೆ ನೀಡುತ್ತಾರೆ.
6. ಬೋಧಿಸತ್ವರು ರೋಗಿಗಳಿಗೆ ವಾಸಿಯಾಗುವವರೆಗೆ ಆರೈಕೆ ಮಾಡುತ್ತಾರೆ.
7. ಬೋಧಿಸತ್ವರು ಬಡವರಲ್ಲಿ ಕರುಣಾಭರಿತರಾಗಿರುತ್ತಾರೆ.
8. ಬೋಧಿಸತ್ವರು ಬುದ್ಧ ಚೇತಿಯಗಳಿಗೆ ಸರಿಪಡಿಸಿ ಸುಭದ್ರಗೊಳಿಸುತ್ತಾರೆ.
9. ಬೋಧಿಸತ್ವರು ಮಧುರವಾಗಿಯೇ ಮಾತನಾಡತ್ತಾರೆ.
10. ಬೋಧಿಸತ್ವರು ಬಡವರೊಂದಿಗೆ ತಮ್ಮ ಸಂಪತ್ತು ಹಂಚಿಕೊಳ್ಳುತ್ತಾರೆ (ದುಃಖಿತರ) ಭಾರವುಳ್ಳವರ ಭಾರ ತೆಗೆದುಕೊಳ್ಳುತ್ತಾರೆ.

ಪುಣ್ಯದಿಂದ ಸಿಗುವ 32 ಮಹಾಪುರುಷ ಲಕ್ಷಣಗಳು

 ಪುಣ್ಯದಿಂದ ಸಿಗುವ 32 ಮಹಾಪುರುಷ ಲಕ್ಷಣಗಳು

ಬೋಧಿಸತ್ವರು ತಮ್ಮ ಹಿಂದಿನ ಜನ್ಮದಲ್ಲಿ ಯತೇಚ್ಛ ದಾನ, ಶೀಲ ಪರಿಪಾಲನೆ, ಮೈತ್ರಿ, ಉಪಸೋತ ಇತ್ಯಾದಿ ಪುಣ್ಯಗಳಿಂದಾಗಿ ಈ ಬಗೆಯ ಮಹಾ ಪುಣ್ಯಗಳಿಂದಾಗಿ, ದಿವ್ಯವಾದ 32 ಮಹಾಪುರುಷ ಲಕ್ಷಣಗಳಿಂದ ಕೂಡಿದ ಶರೀರವನ್ನು ಪಡೆದರು. ಅದರ ಕುರಿತಾಗಿ ಭಗವಾನರು ಹೀಗೆ ಹೇಳಿದ್ದಾರೆ. ಭಿಕ್ಷುಗಳೇ, ಮಹಾಪುರುಷನಾದವನಿಗೆ 32 ಮಹಾಪುರುಷ ಲಕ್ಷಣಗಳಿರುತ್ತವೆ. ಇಂತಹ ಲಕ್ಷಣಗಳಿರುವವನು ಎರಡರಲ್ಲಿ ಒಂದಾಗುತ್ತಾನೆ. ಆತನು ಗೃಹಸ್ಥನಾಗಿಯೇ ಮನೆಯಲ್ಲೇ ಉಳಿದರೆ ಧಾಮರ್ಿಕನು ಧರ್ಮರಾಜನು ಆಗಿರುವ ಆತನು ನಾಲ್ಕು ದಿಕ್ಕುಗಳಲ್ಲಿ ಹಬ್ಬಿರುವ ಭೂಮಿಯನ್ನು ಹಿಂಸಾರಹಿತವಾಗಿಯೇ ಜಯಿಸುತ್ತಾನೆ. ದೇಶವನ್ನು ರಕ್ಷಿಸುವವನು, ಸಪ್ತರತ್ನಗಳನ್ನು ಪಡೆದಿರುವ ಚಕ್ರವತರ್ಿ ಆಗುತ್ತಾನೆ. ಆ ಸಪ್ತರತ್ನಗಳೆಂದರೆ ಚಕ್ರರತ್ನ, ಹಸ್ತಿರತ್ನ, ಅಶ್ವರತ್ನ, ಮಣಿರತ್ನ, ಸ್ತ್ರೀರತ್ನ ಗೃಹಪತಿರತ್ನ ಮತ್ತು ನಾಯಕರತ್ನ. ಹಾಗೂ ಶೂರರು ಪರಾಕ್ರಮಿಗಳು ಆದ ಸಹಸ್ರಕ್ಕೂ ಮೀರಿದ ಪುತ್ರರು ಆತನಿಗೆ ಇರುತ್ತಾರೆ. ದಂಡಶಸ್ತ್ರಗಳಿಲ್ಲದೆಯೇ ಕೇವಲ ಧಮ್ಮದಿಂದಲೇ ಪೃಥ್ವಿಯನ್ನು ಜಯಿಸಿ ಚಕ್ರವತರ್ಿಯಾಗಿ ಆತನು ವಿರಾಜಿಸುತ್ತಾನೆ.
ಹಾಗಿಲ್ಲದೆ ಆತನೇನಾದರೂ ಮನೆಯನ್ನು ತೊರೆದು ಪಬ್ಬಜಿತನಾದರೆ ಅರಹಂತರು, ಸಮ್ಮಾಸಂಬುದ್ಧರು ಆಗಿ ಲೋಕದಲ್ಲಿ ಅಜ್ಞಾನದ ಅಂಧಕಾರವನ್ನು ದೂರಮಾಡುತ್ತಾನೆ. ಇವೆರಡು ಸಂಭವನಿಯತೆಯೇ ಹೊರತು ಬೇರ್ಯಾವುದೂ ಆಗುವುದಿಲ್ಲ.

32 ಮಹಾಪುರುಷ ಬುದ್ಧರ ಲಕ್ಷಣಗಳು 

1. ಮಹಾಪುರುಷರ ಪಾದವು ಒಂದೇ ಸಮವಾಗಿರುತ್ತದೆ. ಕಾಲನ್ನು ನೆಲದಲ್ಲಿಟ್ಟಾಗ ಸಂದು ಬಿಡದ ಪಾದವು ಇರುತ್ತದೆ.
2. ಮಹಾಪುರುಷರ ಅಂಗಾಲಿನಲ್ಲಿ ಸಾವಿರ ಅರೆಗಳು, ಅವಕ್ಕೆ ಹೊಂದುವಂತಹ ನೇಮಿ ನಾಭಿಗಳಿಂದ ಇರುವ ಎಲ್ಲಾರೀತಿಯಲ್ಲಿ ಪರಿಪೂರ್ಣವಾದ ಚಕ್ರವಿರುತ್ತದೆ.
3. ಮಹಾಪುರುಷರು ಚಾಚಿದ ಹಿಮ್ಮಡಿ ಪಡೆದಿರುತ್ತಾರೆ.
4. ಮಹಾ ಪುರುಷರ ಕೈಬೆರಳುಗಳಾಗಲಿ ಅಥವಾ ಕಾಲ್ಬೆರಳುಗಳಾಗಲಿ ಸಾಮಾನ್ಯರಿಗಿಂತ ಉದ್ದವಾಗಿರುತ್ತವೆ.
5. ಮಹಾಪುರುಷರ ಹಸ್ತಗಳಾಗಲಿ ಅಥವಾ ಪಾದಗಳಾಗಿ ಅತ್ಯಂತ ಮೃದು ಮತ್ತು ಕೋಮಲವಾಗಿರುತ್ತವೆ.
6. ಮಹಾಪುರುಷರ ಹಸ್ತಗಳಾಗಲಿ ಅಥವಾ ಪಾದಗಳಲ್ಲಿ ಆಗಲಿ ಅವರಿಗೆ ಬಲೆಯಂತಹ ರೇಖಾ ಚಿತ್ರವಿರುತ್ತದೆ.
7. ಮಹಾಪುರುಷರ ಹಿಮ್ಮಡಿಯು ದುಂಡಾದ ಶಿಲಾಕೃತಿಯಲ್ಲಿರುತ್ತದೆ.
(ಈ ಬಗೆಯ ಹಿಮ್ಮಡಿಯಿಂದಾಗಿ ದೀರ್ಘಕಾಲ ಪದ್ಮಾಸನದಲ್ಲಿ ಸುಖವಾಗಿರಬಹುದು).
8. ಮಹಾಪುರುಷರ ಕಾಲುಗಳು ಜಿಂಕೆಯ ಕಾಲುಗಳ ರೀತಿ ಆಕಾರದಲ್ಲಿದ್ದು, ಅತ್ಯಂತ ಸುಂದರವಾಗಿ ಕಾಣುವುದು.
9. ಮಹಾಪುರುಷರು ನಿಂತಾಗ, ಅವರು ಬಾಗದೆಯೇ ಇರುವಾಗಲು ಅವರ ಕೈಗಳು ಮಂಡಿಯನ್ನು ಮುಟ್ಟುವಷ್ಟು ಉದ್ದವಾಗಿರುತ್ತದೆ.
10. ಮಹಾಪುರುಷರ ಗುಹ್ಯವಸ್ತುವು ಕೋಶದಿಂದ ಆವೃತವಾಗಿರುತ್ತದೆ.
11. ಮಹಾಪುರುಷರ ಮೈಬಣ್ಣವು ಸುವರ್ಣ ವರ್ಣದ್ದಾಗಿರುತ್ತದೆ.
12. ಮಹಾಪುರುಷರ ಮೈ ಚರ್ಮವು ಅತ್ಯಂತ ಮೃದುವಾಗಿದ್ದು, ಅದರಿಂದಾಗಿ ಯಾವುದೇ ದೂಳು ಶರೀರಕ್ಕೆ ಅಂಟುವುದಿಲ್ಲ.
13. ಮಹಾಪುರುಷರ ಚರ್ಮದ ಮೇಲಿನ ರೋಮರಂಧ್ರಗಳಲ್ಲಿ ಒಂದೊಂದೇ ಕೂದಲು ಇರುತ್ತದೆ.
14. ಮಹಾಪುರುಷರ ಮೈಕೂದಲುಗಳು ಕಡು ನೀಲಿ ವರ್ಣವನ್ನು ಹೊಂದಿದ್ದು ಮೇಲ್ಮುಖವಾಗಿದ್ದು, ಗುಂಗುರು ರೀತಿಯಲ್ಲಿ ಬಲಗಡೆಗೆ ತಿರುಗಿರುತ್ತದೆ.
15. ಮಹಾಪುರುಷರ ದೇಹವು ಬ್ರಹ್ಮಲೋಕದವರಂತೆ ನೆಟ್ಟಗೆ ಇರುತ್ತದೆ. (ಜಾಗ್ರತೆಯಿಂದ ಗಂಭೀರವಾಗಿರುತ್ತದೆ, ಹಿಂದಕ್ಕೆ ಮುಂದಕ್ಕೆ ಬಾಗದೆ ನೇರವಾಗಿರುತ್ತದೆ.)
16. ಮಹಾಪುರುಷರ ದೇಹದಲ್ಲಿ ಏಳು ಉಬ್ಬಿರುತ್ತದೆ (ಅಂದರೆ ಸಮಪ್ರಮಾಣದ ಮಾಂಸಾಕೃತಿಯಲ್ಲಿದ್ದು ಬೇರೆಯವರಿಗಿಂತ ಭಿನ್ನವಾಗಿ ಸುಂದರ ಸುಲಕ್ಷಣದಿಂದಿರುತ್ತದೆ)
17. ಮಹಾಪುರುಷರ ದೇಹವು ಮುಂಭಾಗದ ಅರ್ಧಭಾಗವು ಸಿಂಹದಂತಿರುತ್ತದೆ.
18. ಮಹಾಪುರುಷರ ಭುಜಗಳ ನಡುವೆ ಯಾವ ತಗ್ಗು ಇರುವುದಿಲ್ಲ.
19. ಮಹಾಪುರುಷರ ದೇಹದ ಅಂಗಾಗಗಳು ಆಲದ ಮರದಂತೆ ಸಮ ಪ್ರಮಾಣ ದಲ್ಲಿರುತ್ತವೆ. ಅಂದರೆ ಅವರ ದೇಹದ ಉದ್ದವು, ಎರಡು ತೋಳುಗಳನ್ನು ಚಾಚಿದಾಗ ಬರುವ ಉದ್ದದಷ್ಟೇ ಇರುತ್ತದೆ.
20. ಮಹಾಪುರುಷರ ಎದೆಯು ಸಮವಾಗಿ, ಸುಂದರವಾಗಿ, ವಿಶಾಲವಾಗಿ ಯೋಗ್ಯ ಪ್ರಮಾಣದಲ್ಲಿರುತ್ತದೆ.
21. ಮಹಾಪುರುಷರ ರಸಸ್ವಾದನೆಯು (ಅಭಿರುಚಿಯು) ತೀಕ್ಷ್ಣವಾಗಿರುತ್ತದೆ.
22. ಮಹಾಪುರುಷರ ದವಡೆಯು ಸಿಂಹದ ದವಡೆಯಂತಿರುತ್ತದೆ.
23. ಮಹಾಪುರುಷರು 40 ಹಲ್ಲುಗಳನ್ನು ಹೊಂದಿರುತ್ತಾರೆ.
24. ಮಹಾಪುರುಷರ ಹಲ್ಲಿನ ಸಾಲು ಸಮಮಟ್ಟದಲ್ಲಿರುತ್ತದೆ.
25. ಮಹಾಪುರುಷರ ಹಲ್ಲುಗಳ ನಡುವೆ ಸಂದುಗಳಿರುವುದಿಲ್ಲ, ಎಡೆಬಿಡದೆ ಕೂಡಿಕೊಂಡಿರುತ್ತವೆ.
26. ಮಹಾಪುರುಷರ ಕಣ್ಣುಗಳಾಗಲಿ, ಹಲ್ಲುಗಳಾಗಲಿ, ಶ್ವೇತವರ್ಣದಿಂದಿದ್ದು ಸದಾ ಹೊಳೆಯುತ್ತಿರುತ್ತವೆ.
27. ಮಹಾಪುರುಷರ ನಾಲಗೆಯು ಉದ್ದವಾಗಿದ್ದು, ಅದನ್ನು ಹುಬ್ಬುಗಳಿಗೂ, ಕಿವಿಗಳಿಗೂ ಸ್ಪಶರ್ಿಸಬಹುದಾಗಿದೆ.
28. ಮಹಾಪುರುಷರಿಗೆ ದಿವ್ಯವಾದ ಧ್ವನಿಯಿದ್ದು, ಆ ಧ್ವನಿಯು ಕಾರವಿಕ-ಪಕ್ಷಿಗೆ ಹೋಲುತ್ತದೆ. ಆ ಧ್ವನಿಯು ಎಂಟು ವಿಶೇಷತೆಯಿಂದ ಕೂಡಿರುತ್ತದೆ.
29. ಮಹಾಪುರುಷರಿಗೆ ಪರಮ ದಿವ್ಯವಾದ ಕಡುನೀಲಿ ವರ್ಣದ ಕಣ್ಣುಗಳಿದ್ದು (ವಿಶಾಲವಾಗಿಯು, ಸುಂದರವಾಗಿಯೂ ಕಮಲಾಕೃತಿಯಿಂದ ಇರುತ್ತದೆ.)
30. ಮಹಾಪುರುಷರಿಗೆ ಇರುವಂತಹ ಅಂತಹ ಕಣ್ಣುಗಳಿಗೆ ರೆಪ್ಪೆಯು ಎಳೆ ಕರುವಿ (ಹಸುವಿನ) ನಂತೆ ಉದ್ದವಾಗಿಯೂ ಸುಂದರವಾಗಿರುತ್ತದೆ.
31. ಮಹಾಪುರುಷರ ಎರಡು ಹುಬ್ಬುಗಳ ನಡುವೆ ಶ್ವೇತವರ್ಣದ ಒಂದೇ ಕೂದಲು ಇದ್ದು ಅದು ಹತ್ತಿಯಂತೆ ಮೃದುವಾಗಿ ಸುಂದರವಾಗಿರುತ್ತದೆ.
32. ಮಹಾಪುರುಷರ ಶಿರವು ರಾಜನಿಗೆ ಮಾಡಿಸಿದ ಕಿರೀಟದಂತಹ ಆಕೃತಿಯಲ್ಲಿರುತ್ತದೆ. ಇವೇ ಅಂತಿಮ ಜನ್ಮದ ಬೋಧಿಸತ್ವ (ಬುದ್ಧರು) ಪಡೆಯುವ 32 ಮಹಾಪುರುಷ ಲಕ್ಷಣಗಳಾಗಿವೆ.

ದಾನ ಪಾರಮಿ

 ದಾನ ಪಾರಮಿ

ಬೋಧಿಸತ್ವರ ಹೃದಯವು ಸದಾ ಪರಹಿತಕ್ಕೆ ಮಿಡಿಯುತ್ತಿರುತ್ತದೆ. ಪರಹಿತಕ್ಕಾಗಿಯೇ ಶ್ರಮಿಸುವ ಏಕೈಕ ಜೀವಿಯೇ ಬೋಧಿಸತ್ವ ಆಗಿದ್ದಾರೆ.

ಬೋಧಿಸತ್ವರು ದಾನವನ್ನು ಮೂರು ಉದ್ದೇಶಕ್ಕಾಗಿ ಮಾಡುತ್ತಾರೆ.
1. ಅನುತ್ತರವಾದ ಸಮ್ಯಕ್ ಸಂಬೋಧಿ ಸಾಧಿಸಲು.
2. ದಾನದಿಂದ ಹೃದಯ (ಕರುಣೆಯನ್ನು)ವನ್ನು ಪರಿಪೂರ್ಣಗೊಳಿಸುವುದು, ವ್ಯಕ್ತಿತ್ವದ ಪರಿಪೂರ್ಣತೆಗಾಗಿ.
3. ಪರರ ಹಿತಕ್ಕಾಗಿಯೇ ದಾನ ಆಚರಿಸುವುದು.

ದಾನಕ್ಕಾಗಿ ಈ ಮೂರು ಉದ್ದೇಶಗಳಿದ್ದರೂ ಸಹಾ ನಿಜವಾದ ಉದ್ದೇಶವು ಲೋಕ ಕಲ್ಯಾಣವೇ ಆಗಿದೆ. ಹೇಗೆಂದರೆ ಅವರು ಪರಿಪೂರ್ಣ ವ್ಯಕ್ತಿತ್ವ ಪಡೆಯಲು ಹಂಬಲಿಸುವುದು ಲೋಕ ಹಿತಾರ್ಥಕ್ಕಾಗಿಯೇ ಆಗಿದೆ. ಹಾಗು ಅವರು ಅನುತ್ತರ ಸಮ್ಯಕ್ ಸಂಬೋಧಿ ಹಂಬಲಿಸುವುದು ಸಹಾ ಸರ್ವರನ್ನೂ ದುಃಖದಿಂದ ರಕ್ಷಿಸುವುದಕ್ಕೇ ಆಗಿದೆ.
ದಾನಗಳಲ್ಲಿ ಮೂರು ವಿಧಗಳಿವೆ:


1. ಆಮಿಷದಾನ  2. ಅಭಯದಾನ  3. ಧಮ್ಮದಾನ.
ಬೋಧಿಸತ್ವರು ಈ ಮೂರನ್ನೂ ಸಹಾ ಪರಿಪೂರ್ಣಗೊಳಿಸುತ್ತಾರೆ. ಅವರ ಆ ಸಾಹಸಗಳನ್ನೆಲ್ಲಾ ನಾವು ಜಾತಕ ಕಥೆಗಳಲ್ಲಿ ತಿಳಿಯಬಹುದು.
ಹಾಗೆಯೇ ದಾನದಲ್ಲಿ ಮತ್ತೆ ಮೂರು ವಿಧವಿದೆ.
ಹಾಗೆಯೇ ದಾನಪಾರಮಿಯಲ್ಲಿ ಮೂರು ಹಂತಗಳಿವೆ:
1. ದಾನಪಾರಮಿ  2. ದಾನ ಉಪಪಾರಮಿ  3. ದಾನ ಪರಮತ್ಥ ಪಾರಮಿ.
1.  ದಾನ ಪಾರಮಿ :
 ಈ ಪಾರಮಿಯನ್ನು ಪರಿಪೂರ್ಣಗೊಳಿಸಲು ಬೋಧಿಸತ್ವರು ತಮ್ಮ ಎಲ್ಲಾ ಐಶ್ವರ್ಯ, ಅಧಿಕಾರ, ಅಷ್ಟೇ ಏಕೆ? ಪತ್ನಿ ಹಾಗು ಮಕ್ಕಳನ್ನು ಸಹಾ ದಾನ ಮಾಡಿಬಿಡುತ್ತಾರೆ. ಇದಕ್ಕೆ ವೆಸ್ಸಂತರ ಜಾತಕವೇ ಸಾಕ್ಷಿಯಾಗಿದೆ. ಅದರಲ್ಲಿ ವೆಸ್ಸಂತರ ಬೋಧಿಸತ್ವರು ಸಮ್ಮಾಸಂಬೋಧಿಗಾಗಿ ತಮ್ಮ ಪತ್ನಿ, ಪುತ್ರ ಹಾಗು ಪುತ್ರಿಯನ್ನು ಸಹಾ ದಾನವಾಗಿ ನೀಡಿಬಿಡುತ್ತಾರೆ. ಅವರ ಇಡೀ ಕಾಲ ಪರಹಿತಕ್ಕಾಗಿಯೇ ಆಗಿರುತ್ತದೆ. ವೆಲಾಮ ಜಾತಕದಲ್ಲಿ ಬೋಧಿಸತ್ತರು ಪ್ರತಿಯೊಂದು 84,000 ಸಂಖ್ಯೆಯಲ್ಲಿ ಐಶ್ವರ್ಯ, ಆಹಾರ, ವಸ್ತ್ರ, ಪಾನಿಯ, ಔಷಧಿ, ವಾಹನ, ದೀಪಗಳು ಇತ್ಯಾದಿ ದಾನ ಮಾಡುತ್ತಿರುತ್ತಾರೆ. ತಮ್ಮ ಹಿಂದಿನ ಒಂದು ಜನ್ಮದಲ್ಲಿ ಹುಟ್ಟಿದ ಸ್ವಲ್ಪ ಸಮಯದಲ್ಲೇ ತಾಯಿಗೆ ಹೀಗೆ ಕೇಳುತ್ತಾರೆ: ಅಮ್ಮ, ನಾನು ದಾನ ಮಾಡಬೇಕು, ಇಲ್ಲಿ ಬೇಕಾದಷ್ಟು ಇದೆಯಲ್ಲವೆ? ಎಂದು. ಅವರ ದಾನ ಪರಾಕ್ರಮವನ್ನು ಜಾತಕ ಕಥೆಗಳನ್ನು ಓದಿಯೇ ಸವಿಯಬೇಕಾಗಿದೆ. ಔಷಧಕುಮಾರರಾಗಿ ಹುಟ್ಟಿರುವ ಸಮಯದಲ್ಲಿ ಅವರು ಹುಟ್ಟುತ್ತಲೇ ಮೂಲಿಕೆಯೊಂದನ್ನು ಹಿಡಿದುಕೊಂಡೇ ಹುಟ್ಟಿರುತ್ತಾರೆ. ಅದರ ಪರಿಣಾಮವಾಗಿ ಅಸಂಖ್ಯಾತ ಜನರಿಗೆ ರೋಗವು ವಾಸಿಯಾಗುತ್ತದೆ. ಹೀಗೆ ಅವರು ತಮ್ಮ ಐಶ್ವರ್ಯ, ಐಶ್ವರ್ಯದಿಂದ ಲಭಿಸುವ ಸರ್ವವನ್ನು, ಕಾಲವನ್ನು, ಪತ್ನಿ ಪುತ್ರರನ್ನು, ತಮ್ಮ ಜ್ಞಾನವನ್ನು ಪರಹಿತಕ್ಕಾಗಿಯೇ ಮಿಸಲಾಗಿಡುತ್ತಾರೆ.
2. ದಾನ ಉಪಪಾರಮಿ:
 ಇಲ್ಲಿ ಬೋಧಿಸತ್ವರು ತಮ್ಮ ರಕ್ತ ಹಾಗು ಅಂಗಾಗಗಳನ್ನು ದಾನವಾಗಿಸಿ ನೀಡಬೇಕಾಗುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಶಿಬಿ (ಸಿಬಿ) ಬೋಧಿಸತ್ತರ ಘಟನೆಯಾಗಿದೆ. ಅದರಲ್ಲಿ ಒಂದು ಕಣ್ಣು ದಾನವಾಗಿ ಕೇಳಿದಾಗ, ಬೋಧಿಸತ್ವರು ಎರಡನ್ನು ದಾನವಾಗಿ ನೀಡುತ್ತಾರೆ. ಇನ್ನೊಂದು ಜಾತಕದಲ್ಲಿ ಬಾಯಾರಿದವರಿಗೆ ನೀರು ಸಿಗದಿದ್ದಾಗ ತಮ್ಮ ರಕ್ತವನ್ನೇ ಕುಡಿಸಿ ಬಾಯಾರಿಕೆ ನೀಗಿಸುತ್ತಾರೆ. ಹೀಗೆ ಇಲ್ಲಿ ಬೋಧಿಸತ್ವರು ಬುದ್ಧತ್ವಕ್ಕಾಗಿ ತಮ್ಮ ದೇಹದ ಅಂಗಾಂಗಗಳನ್ನೇ ಅತ್ಯಂತ ಆನಂದವಾಗಿ ದಾನ ನೀಡಲು ಸಿದ್ಧರಾಗಿರುತ್ತಾರೆ.
3. ದಾನ ಪರಮತ್ಥ ಪಾರಮಿ :
 ಇಲ್ಲಿ ಬೋಧಿಸತ್ವರು ದಾನಕ್ಕಾಗಿ ತಮ್ಮ ಪ್ರಾಣವನ್ನೇ, ಜೀವವನ್ನೇ ತ್ಯಾಗ ಮಾಡುತ್ತಾರೆ. ಇಂತಹ ಅನೇಕ ಉದಾಹರಣೆಗಳನ್ನು ನಾವು ಜಾತಕ ಕಥೆಗಳಲ್ಲಿ ಕಾಣಬಹುದು. ಖದಿರಂಗಾರ ಜಾತಕದಲ್ಲಿ ಅವರು ಪಚ್ಚೇಕ ಬುದ್ಧರಿಗೆ ಆಹಾರ ದಾನ ನೀಡಲು ಬೆಂಕಿ ದಾಟುತ್ತ ಜೀವವನ್ನು ಲೆಕ್ಕಿಸದೆ ದಾನ ನೀಡುತ್ತಾರೆ. ಆದರೆ ಅವರು ಅದರಲ್ಲಿ ಜೀವದಿಂದ ಉಳಿಯುತ್ತಾರೆ. ಅವರ ಮನಸ್ಥಿತಿಯು ಎಲ್ಲದಕ್ಕೂ ಸಿದ್ಧವಾಗಿತ್ತು.

 ದಾನ ಪಾರಮಿತ ಸಾಧನೆ

ಇಲ್ಲಿ ಬೋಧಿಸತ್ವರು ಆಮಿಷದಾನ, ಅಭಯದಾನ ಮತ್ತು ಧಮ್ಮದಾನ ಮೂರರಲ್ಲೂ ಪರಿಪೂರ್ಣತೆ ಸಾಧಿಸುತ್ತಾರೆ.
ದಾನದ ರೀತಿ : ಅವರು ಕೇಳಿದಾಗ ತಪ್ಪದೆ ದಾನ ಮಾಡುತ್ತಾರೆ. ಕೇಳದೆ ಇದ್ದಾಗಲೂ ಪರಿಸ್ಥಿತಿ ಅರ್ಥಮಾಡಿಕೊಂಡು ದಾನ ನೀಡುತ್ತಾರೆ. ಅವರು ಮಾತಿಗೆ ತಪ್ಪದಂತೆ ಹೇಳಿದ್ದನ್ನೇ ನೀಡುತ್ತಾರೆ. ಅವರು ತುಚ್ಛವಾಗಿರುವುದನ್ನು ದಾನವಾಗಿ ನೀಡುವುದಿಲ್ಲ. ಉತ್ಕೃಷ್ಟವಾಗಿರುವುದನ್ನೇ ದಾನ ಮಾಡುವರು. ಅಗತ್ಯವಾಗಿರುವುದನ್ನು ದಾನ ನೀಡುತ್ತಾರೆ. ಆನಂದಿತರಾಗಿ ದಾನ ನೀಡುತ್ತಾರೆ. ಸಾಕಷ್ಟು ಪ್ರಮಾಣದಲ್ಲಿ ದಾನ ನೀಡುತ್ತಾರೆ. ಕೊರತೆಯಿದ್ದರೆ ಎಲ್ಲರಿಗೂ ಸಮಾನವಾಗಿ ಹಂಚುತ್ತಾರೆ. ದಾನಕ್ಕೆ ಅರ್ಹರಾದ ಎಲ್ಲರಿಗೂ ದಾನ ನೀಡುತ್ತಾರೆ. ಅವರು ಮನಸ್ಸಿನಲ್ಲಿ ಮೋಸವಿಟ್ಟುಕೊಂಡು ದಾನ ಮಾಡುವುದಿಲ್ಲ. ನಗುಮೊಗದಿಂದ ದಾನ ಮಾಡುತ್ತಾರೆ. ಪ್ರಿಯವಾದ ನುಡಿಯ ಸಹಿತ ದಾನ ಮಾಡುತ್ತಾರೆ. ಗೃಹಸ್ಥರಿಗೆ ಯೋಗ್ಯವಾದುದು ಯಾವುದೋ ಅದನ್ನೇ ಗೃಹಸ್ಥರಿಗೂ, ಭಿಕ್ಷುಗಳಿಗೆ ಯೋಗ್ಯವಾದುದನ್ನು ಭಿಕ್ಷುಗಳಿಗೂ ನೀಡುವರು. ಆದರೆ ಅವರು ಕಶ್ಮಲ ಮನದಿಂದ ದಾನ ಮಾಡುವುದಿಲ್ಲ. ಕೋಪದಿಂದ ದಾನ ಮಾಡುವುದಿಲ್ಲ, ಕಟು ಮಾತು ಆಡುತ್ತ ದಾನ ಮಾಡುವುದಿಲ್ಲ. ಅವರಲ್ಲಿ ದಾನ ಮಾಡುವಾಗ ಅಥವಾ ಆನಂತರವೂ ಯಾವುದೇ ಲೋಭವಿರುವುದಿಲ್ಲ. ಅವರು ದಾನ ನೀಡುವುದು ಲಾಭಕ್ಕಲ್ಲ, ಪ್ರಶಂಸೆಗಲ್ಲ, ಕೀತರ್ಿಗಲ್ಲ, ಸ್ವರ್ಗಕ್ಕಲ್ಲ, ಸುಖಕ್ಕಲ್ಲ, ಶ್ರೀಮಂತರಾಗಲು ಅಲ್ಲ. ಅವರ ದಾನದ ಗುರಿ ಒಂದೇ ಆಗಿರುತ್ತದೆ, ಅದೇ ಬುದ್ಧತ್ವ.



ಬಾಹ್ಯ ವಸ್ತುಗಳ ದಾನ (ಆಮಿಷ ದಾನ)

ದಾನವು ಎರಡು ವಿಧವಾಗಿ ವಿಂಗಡಿತವಾಗುತ್ತದೆ.
1. ಬಾಹ್ಯ ವಸ್ತುಗಳ ದಾನ  2. ಆಂತರಿಕ ವಸ್ತುವಿನ ದಾನ
ಬಾಹ್ಯ ವಸ್ತುಗಳು ಮತ್ತೆ ಆರು ವಿಧವಾಗಿ ವಿಂಗಡಿತವಾಗುತ್ತದೆ. ಅವೆಂದರೆ: ಕಣ್ಣಿನಿಂದ ನೋಡುವಂತಹುದು, ಕಿವಿಯಿಂದ ಕೇಳುವಂತಹುದು, ಮೂಗಿನಿಂದ ಆಘ್ರಾಣಿಸುವಂತಹುದು, ನಾಲಿಗೆಯಿಂದ ರುಚಿಸುವಂತಹುದು, ದೇಹದಿಂದ ಸ್ಪಶರ್ಿಸುವಂತಹುದು ಮತ್ತು ಮಾನಸಿಕ ವಿಷಯ.
ಇವನ್ನು ಸರಳವಾಗಿ ಹೇಳುವುದಾದರೆ ಆಹಾರ, ಪಾನಿಯ, ವಸ್ತ್ರ, ವಾಹನ, ಹೂಹಾರ, ಸುಗಂಧ, ಔಷಧಿ, ಹಾಸಿಗೆ, ವಸತಿ ಮತ್ತು ದೀಪ. ಇವು ಪ್ರಾಥಮಿಕವಾಗಿ ಪ್ರತಿಯೊಬ್ಬರಿಗೂ ಬೇಕಾಗಿರುವಂತಹುದು. ಇವುಗಳ ದಾನವನ್ನು ಬಾಹ್ಯ ವಸ್ತುಗಳ ದಾನ ಅಥವಾ ಆಮಿಷದಾನ ಎನ್ನುತ್ತಾರೆ. ಇವು ಐದು ಇಂದ್ರಿಯ ವಿಷಯಗಳ ಅಡಿಯಲ್ಲಿ ಬರುವುದು.
ಎಲ್ಲಾ ಭೋದಿಸತ್ವರು ಧನದಾನ, ಧಾನ್ಯದಾನ, ಸಂತಾನದಾನ, ಭಾರ್ಯೆದಾನ, ರಾಜ್ಯದಾನ ಮತ್ತು ಅಂಗಗಳ ದಾನಗಳನ್ನು ಖಂಡಿತವಾಗಿ ನೀಡುತ್ತಾರೆ. ಹಾಗೆಯೇ ಇಲ್ಲಿ ಬೋಧಿಸತ್ವರು ದಾನಪೂರ್ಣತೆಗಾಗಿ ದಾಸರನ್ನು, ಸೇವಕರನ್ನು ದಾನವಾಗಿ ನೀಡುತ್ತಾರೆ. ಅಷ್ಟೇ ಅಲ್ಲ, ಪತ್ನಿ ಮತ್ತು ಮಕ್ಕಳನ್ನು ಸಹಾ ದಾನವಾಗಿ ನೀಡುತ್ತಾರೆ. ಒಟ್ಟಾರೆ ತಮ್ಮದೆಂದು ಅನಿಸಿಕೊಳ್ಳುವ ಎಲ್ಲವನ್ನೂ ಸಹಾ ಬೋಧಿಸತ್ವರು ಪರಹಿತಕ್ಕಾಗಿ ದಾನವಾಗಿ ನೀಡುತ್ತಾರೆ. ಆದರೂ ಹಾಗೆ ದಾನ ಮಾಡಿದರೂ ಇಚ್ಛೆಪಡದವರನ್ನು ಅವರು ದಾನ ಮಾಡುವುದಿಲ್ಲ. ಹಾಗೂ ನರಭಕ್ಷಕರಿಗೆ ದಾನ ಮಾಡುವುದಿಲ್ಲ. ಕ್ರೂರಿಗಳಿಗೆ, ಸ್ವಾಥರ್ಿಗಳಿಗೆ, ಹುಚ್ಚರಿಗೆ ದಾನವಾಗಿ ನೀಡುವುದಿಲ್ಲ. ಬದಲಾಗಿ ಉತ್ತಮ ವ್ಯಕ್ತಿಗೆ ಸತ್ಪುರುಷನಿಗೆ ದಾನವಾಗಿ ನೀಡುತ್ತಾರೆ.
ಇಲ್ಲಿ ಭೋಧಿಸತ್ವರು ಜ್ಞಾನ ದಾನವನ್ನು ಮಾಡುತ್ತಾರೆ. ಮಾನವರಿಗೆ ನೀಡುವಂತಹ ಶ್ರೇಷ್ಠದಾನವೆಂದರೆ ಅದು ಜ್ಞಾನದಾನವೇ ಆಗಿದೆ. ಇಲ್ಲಿ ಬೋಧಿಸತ್ವರು ಉಚಿತವಾಗಿ ಜ್ಞಾನದಾನ ಮಾಡುತ್ತಾರೆ. ಅಥವಾ ಜ್ಞಾನಕ್ಕೆ ಬೇಕಾಗುವ ವೆಚ್ಚವನ್ನು ತಾವೇ ನೋಡಿಕೊಳ್ಳುತ್ತಾರೆ. ಹಾಗೆ ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡುತ್ತಾರೆ. ಹೀಗೆ ಬೋಧಿಸತ್ವರು ಬಾಹ್ಯದಿಂದ ಲಭಿಸುವ ಎಲ್ಲವನ್ನೂ ದಾನವಾಗಿ ನೀಡುತ್ತಾರೆ.


 ಆಂತರಿಕ ವಸ್ತುಗಳ ದಾನ (ಅಭಯದಾನ)
ಇಲ್ಲಿ ಬೋಧಿಸತ್ವರು ತಮ್ಮ ಅಂಗಗಳಾದ, ರಕ್ತ, ಮಾಂಸ, ಕಣ್ಣು, ಹೃದಯ ಇತ್ಯಾದಿಗಳನ್ನು ಕಂಪಿಸದೆ ದಾನವಾಗಿ ನೀಡಿಬಿಡುತ್ತಾರೆ. ಪರರ ಹಿತಕ್ಕಾಗಿ, ದಾನದ ಪರಿಪೂರ್ಣತೆಗಾಗಿ ಮತ್ತು ಬುದ್ಧತ್ವಕ್ಕಾಗಿ ಅವರು ಹೀಗೆ ದಾನವಾಗಿ ನೀಡುತ್ತಾರೆ. ಆದರೆ ವ್ಯರ್ಥವಾಗಿ ಕತ್ತರಿಸಿ ದಾನ ನೀಡುವುದಿಲ್ಲ. ಬದಲಾಗಿ ಯಾಚಕನಿಗೆ ಒಳಿತಾಗುವುದಾದರೆ ಮಾತ್ರ ದಾನ ನೀಡುತ್ತಾರೆ. ಹಾಗು ಹುಚ್ಚನೊಬ್ಬನು ಅಥವಾ ದುಷ್ಟನೊಬ್ಬನು ಅಂಗದಾನ ಯಾಚಿಸಿದರೆ ದಾನ ನೀಡುವುದಿಲ್ಲ. ಇಲ್ಲಿ ದಾನದಿಂದ ಯಾಚಕನಿಗೆ ಲಾಭವಾಗಬೇಕು ಮತ್ತು ದಾನಿಗೂ ಪುಣ್ಯ ಲಭಿಸಬೇಕಾಗಿದೆ.
ಅಭಯದಾನದ ಇನ್ನೊಂದು ವಿಧವೇ ಭಯವನ್ನು ಹೋಗಲಾಡಿಸುವಂತಹುದು. ಇಲ್ಲಿ ಬೋಧಿಸತ್ವರು ಜೀವಿಗಳು ಭಯಗೊಂಡಾಗ ಸಮಾಧಾನಿಸುತ್ತಾರೆ, ಅಗ್ನಿಯಿಂದ ಕಾಪಾಡುತ್ತಾರೆ, ಜಲಗಂಡಾಂತರದಿಂದ ಕಾಪಾಡುತ್ತಾರೆ, ಶತ್ರುಗಳಿಂದ, ಶಸ್ತ್ರಗಳಿಂದ ಕಾಪಾಡುತ್ತಾರೆ. ಕ್ರೂರ ಪ್ರಾಣಿಗಳಿಂದ ಕಾಪಾಡುತ್ತಾರೆ. ಭೂತ ಪಿಶಾಚಿಗಳಿಂದಲೂ ಕಾಪಾಡುತ್ತಾರೆ. ಹಾಗೆಯೇ ದುಷ್ಟ ರಾಜಾಧಿಕಾರಿಗಳಿಂದ ಮತ್ತು ಕಳ್ಳರಿಂದ, ಕಾಪಾಡುತ್ತಾರೆ. ಒಟ್ಟಾರೆ ಅಪಾಯ, ಸಂಕಷ್ಟಗಳಿಂದ ಕಾಪಾಡುತ್ತಾರೆ.

 ಧಮ್ಮ ದಾನ

ಎಲ್ಲಾ ದಾನಕ್ಕಿಂತಲೂ ಧಮ್ಮದಾನವು ಶ್ರೇಷ್ಠವೆಂದು ಬುದ್ಧ ಭಗವಾನರು ಹೇಳಿದ್ದಾರೆ. ಏಕೆಂದರೆ ಧಮ್ಮದಾನದಿಂದ ಇಹ ಮತ್ತು ಪರಲೋಕದ ಸರ್ವ ದುಃಖಗಳು ನಿವಾರಣೆಯಾಗುತ್ತವೆ. ಧಮ್ಮದಾನವೆಂದರೆ ಬುದ್ಧರ ಬೋಧಿ ಜ್ಞಾನದ ಬೋಧನೆಯಾಗಿದೆ.
ಇಲ್ಲಿ ಬೋಧಿಸತ್ವರು ದಾನಕ್ಕೆ ಸ್ಫೂತರ್ಿಯಾಗುವಂತೆ ದಾನದ ಮೌಲ್ಯಗಳ ಬಗ್ಗೆ ಬೋಧಿಸುತ್ತಾರೆ. ನಂತರ ದುಶ್ಶೀಲತೆಯ ಅಪಾಯಗಳನ್ನು ವಿವರಿಸುತ್ತ, ಶೀಲವಂತಿಕೆಯ ಮಹತ್ವತೆಯನ್ನು ವಿವರಿಸುತ್ತಾರೆ. ಅತಿ ಇಂದ್ರೀಯ ಭೋಗಗಳ ಅಪಾಯವನ್ನು ಮತ್ತು ಇಂದ್ರೀಯ ನಿಗ್ರಹದ ಸುಲಾಭಗಳನ್ನು ಬೋಧಿಸುತ್ತಾರೆ. ನಂತರ ತ್ಯಾಗ, ವೈರಾಗ್ಯಗಳ ಮಹೋನ್ನತೆಯನ್ನು ವಿವರಿಸುತ್ತಾರೆ. ನಂತರ ಆರ್ಯಸತ್ಯಗಳ ಅಥವಾ ಬೋಧಿಪಕ್ಖೀಯಗಳ ಶ್ರೇಷ್ಠತೆಯನ್ನು ಬೋಧಿಸುತ್ತಾರೆ. ಹೀಗೆ ಅವರು ಧಮ್ಮದಾನವನ್ನು ಬೋಧಿಸುವುದಷ್ಟೇ ಅಲ್ಲ, ಅದಕ್ಕೆ ಮುನ್ನ ಅವರು ಅವನ್ನೆಲ್ಲಾ ಪಾಲಿಸಿಯೂ ಇರುತ್ತಾರೆ.
ಕೇವಲ ಮಹೋನ್ನತೆಯ ಜ್ಞಾನವಾದ ಧಮ್ಮದಾನ ಅಷ್ಟೇ ಅಲ್ಲ, ಬೋಧಿಸತ್ವರು ಲೌಕಿಕ ವಿಷಯ ಎಲ್ಲಾ ಜ್ಞಾನಗಳನ್ನು ಅಭ್ಯಸಿಸುತ್ತಾರೆ. ಅಗಾಧ ಜ್ಞಾನವನ್ನು ಪಡೆದಿರುತ್ತಾರೆ, ವಿದ್ಯಾಕಾಂಕ್ಷಿಗಳಿಗೆ ಆ ಜ್ಞಾನವೆಲ್ಲವನ್ನು ಉಚಿತವಾಗಿಯೇ ದಾನ ಮಾಡುತ್ತಾರೆ.


 ದಾನದಿಂದಾಗಿ ಬೋಧಿಸತ್ವರಿಗೆ ಲಭಿಸುವ ಲಾಭಗಳು

4 ಬೋಧಿಸತ್ವರು ಎಂದಿಗೂ ಅವಿಚಿ ನರಕದಲ್ಲಿ ಹುಟ್ಟುವುದಿಲ್ಲ.
4 ಬೋಧಿಸತ್ವರು ಎಂದಿಗೂ ಅರೂಪ ಲೋಕಗಳಲ್ಲಿ ಹುಟ್ಟುವುದಿಲ್ಲ.
4 ಬೋಧಿಸತ್ವರು ಎಂದಿಗೂ ಅಸುರರಾಗಲಿ ಅಥವಾ ಹಸಿವು ಬಾಯಾರಿಕೆಯ ಪ್ರೇತಗಳಾಗಿ ಹುಟ್ಟುವುದಿಲ್ಲ.
4 ಬೋಧಿಸತ್ವರು ದುರ್ಗತಿಯಲ್ಲಿ ಹುಟ್ಟಿದರೂ ಚಿಕ್ಕ ಆಕಾರದ ಜೀವಿಯಾಗಿ ಹುಟ್ಟುವುದಿಲ್ಲ.
4 ಬೋಧಿಸತ್ವರು ಮಾನವರಾಗಿ ಹುಟ್ಟಿದರೂ ಅಂಧರಾಗಿ ಹುಟ್ಟುವುದಿಲ್ಲ.
4 ಬೋಧಿಸತ್ವರು ಮಾನವರಾಗಿ ಹುಟ್ಟಿದರೂ ಕಿವುಡರಾಗಿ, ಮೂಕರಾಗಿ, ಅಂಗಹೀನರಾಗಿ ಹುಟ್ಟುವುದಿಲ್ಲ.
4 ಬೋಧಿಸತ್ವರು ಎಂದಿಗು ಸ್ತ್ರೀಯಾಗಿ ಆಗಲಿ, ನಪುಂಸಕರಾಗಿ ಆಗಲಿ ಮತ್ತು ದ್ವಿಲಿಂಗಿಯಾಗಿ ಹುಟ್ಟಲಾರರು.
4 ಬೋಧಿಸತ್ವರು ಎಂದಿಗೂ ಪಂಚ ಮಹಾ ಪಾತಕಗಳನ್ನು ಮಾಡಲಾರರು.
4 ಬೋಧಿಸತ್ವರು ಜೀವನದಲ್ಲಿ ಪರಿಶುದ್ಧ ವ್ಯವಹಾರಿಯಾಗಿರುತ್ತಾರೆ, ದೋಷರಹಿತ ರಾಗಿರುತ್ತಾರೆ.
4 ಬೋಧಿಸತ್ವರು ಎಂದಿಗೂ ಮಿಥ್ಯಾದೃಷ್ಟಿಯಿಂದ ಕೂಡಿರುವುದಿಲ್ಲ.
4 ಬೋಧಿಸತ್ವರು ಸುಗತಿಯಲ್ಲಿ ಜನಿಸಿದರೂ, ಅಸನ್ಯಾಸತ್ತರಾಗಿ ಜನಿಸುವುದಿಲ್ಲ.
ಅಂತಹ ಮಹಾಮಹಿಮರು ತ್ಯಾಗದಲ್ಲೇ ಬಾಗಿರುತ್ತಾರೆ. ಎಲ್ಲಾ ಲೋಕಗಳ ಲಾಲಸೆಯಿಂದ ಮುಕ್ತರಾಗಿ, ಪರಹಿತದಲ್ಲೇ ತೊಡಗಿ ಪಾರಮಿಯ ಪರಿಪೂರ್ಣತೆಗೆ ಶ್ರಮಿಸುತ್ತಾರೆ.


 ಬೋಧಿಸತ್ವರಿಗೆ ಸಿಗುವ ದಾನದ ಪರಮ ಲಾಭಗಳು

ಬೋಧಿಸತ್ವರು ಮಾನವರಾಗಿ ಜನ್ಮಿಸಿದಾಗ ದೀಘರ್ಾಯುವಾಗಿ, ಸೌಂದರ್ಯದಿಂದ, ಸುಖದಿಂದ ಬಲದಿಂದ ಪ್ರಜ್ಞಾಶಕ್ತಿಯಿಂದ ಕೂಡಿರುತ್ತಾರೆ. ವಸ್ತ್ರದಾನದಿಂದಾಗಿ ಅವರ ಚರ್ಮವು ಸುವರ್ಣದಿಂದ ಕೂಡಿರುತ್ತದೆ. ವಾಹನ ದಾನಗಳಿಂದಾಗಿ ನಿಬ್ಬಾಣಕ್ಕೆ ವಾಹನವಾದ ಸಮಾಧಿಯಲ್ಲಿ ತೀವ್ರತೆ ಸಾಧಿಸುತ್ತಾರೆ. ಸುಗಂಧಗಳ ದಾನದಿಂದಾಗಿ, ದೇಹದಲ್ಲಿ ಶ್ರೀಗಂಧದ ಪರಿಮಳ ಪಡೆಯುತ್ತಾರೆ. ಹೂಹಾರಗಳ ದಾನದಿಂದಾಗಿ ಸುಲಕ್ಷಣ ದೇಹವನ್ನು ಪಡೆಯುತ್ತಾರೆ. ಆಸನಗಳ ದಾನದಿಂದಾಗಿ ಬೋಧಿಯ ವಜ್ರಾಸನ ಪೀಠವನ್ನು ಪಡೆಯುತ್ತಾರೆ. ಹಾಸಿಗೆಗಳ ದಾನದಿಂದಾಗಿ ತಥಾಗತರ ವಿಶ್ರಾಂತಿಯ ನಿಬ್ಬಾಣ ಪಡೆಯುತ್ತಾರೆ. ವಸತಿ ದಾನಗಳಿಂದ ಜೀವಿಗಳೇ ಅವರಲ್ಲಿ ಶರಣು ಲಾಭ ಪಡೆಯುತ್ತಾರೆ. ದೀಪ ದಾನಗಳಿಂದಾಗಿ ಐದು ರೀತಿಯ ಚಕ್ಷು ಪಡೆಯುತ್ತಾರೆ. ಹಾಗು ವಿಸ್ತಾರವಾದ ಪ್ರಭಾವಳಿಯನ್ನು ಪಡೆಯುತ್ತಾರೆ. ವಿವಿಧ ದಾನದಿಂದಾಗಿ ಬ್ರಹ್ಮಸ್ವರಕ್ಕಿಂತಲೂ ಶ್ರೇಷ್ಠವಾದ ಬುದ್ಧಸ್ವರ ಪಡೆಯುತ್ತಾರೆ. ಔಷದ ದಾನದಿಂದಾಗಿ ನಿಬ್ಬಾಣವನ್ನು ಸಾಧಿಸುತ್ತಾರೆ. ದಾಸರ ದಾನದಿಂದಾಗಿ ಜೀವಿಗಳ ಕಶ್ಮಲ ವಿಮುಕ್ತತೆ ಸಾಧಿಸುತ್ತಾರೆ. ಮಕ್ಕಳ ದಾನದಿಂದಾಗಿ ಸರ್ವಜೀವಿಗಳಲ್ಲೂ ಮಕ್ಕಳನ್ನು ಕಾಣುತ್ತಾರೆ. ಪತ್ನಿ ದಾನದಿಂದಾಗಿ ಸರ್ವ ಲೋಕಗಳಿಗೆ ಒಡೆಯರಾಗುತ್ತಾರೆ, ಲೋಕನಾಥರಾಗುತ್ತಾರೆ. ಅವರು ಚಿನ್ನ, ರತ್ನ, ಮುತ್ತು ಮುಂತಾದ ದಾನ ನೀಡಿ ಮಹಾಪುರುಷ ಲಕ್ಷಣಗಳನ್ನು ಪಡೆಯುತ್ತಾರೆ. ವಿವಿಧ ದಾನಗಳಿಂದ ಸತ್ಪುರುಷ ಲಕ್ಷಣಗಳನ್ನು ಪಡೆಯುತ್ತಾರೆ. ದೇಹದಾನದಿಂದ ಧಮ್ಮಕಾಯ ಪಡೆಯುತ್ತಾರೆ. ಐಶ್ವರ್ಯ ಬಂದಾಗ ದಾನನೀಡಿ ಧಮ್ಮ ಐಶ್ವರ್ಯವನ್ನು ಪಡೆಯುತ್ತಾರೆ. ರಾಜ್ಯ ದಾನ ಮಾಡಿ ಧಮ್ಮ ರಾಜ್ಯ ಗಳಿಸುತ್ತಾರೆ. ವಿಹಾರಗಳ, ತೋಟಗಳ, ಸರೋವರಗಳ ದಾನದಿಂದಾಗಿ ಧ್ಯಾನ ಲಾಭಗಳನ್ನು ಸಾಧಿಸುತ್ತಾರೆ. ಪಾದಗಳ ದಾನದಿಂದಾಗಿ ಬೋಧಿಯೆಡೆಗೆ ಹೆಜ್ಜೆ ಹಾಕುತ್ತಾರೆ. ಕೈಗಳ ದಾನದಿಂದಾಗಿ ಸರ್ವಜೀವಿಗಳನ್ನು ರಕ್ಷಿಸುವ ಸಾಮಥ್ರ್ಯ ಪಡೆಯುತ್ತಾರೆ. ಭೌತಿಕ ಇಂದ್ರಿಯಗಳ ದಾನದಿಂದಾಗಿ ಧಮ್ಮದ ಇಂದ್ರೀಯಗಳನ್ನು ಪಡೆಯುತ್ತಾರೆ. ರಕ್ತಮಾಂಸದ ದಾನದಿಂದಾಗಿ ಸರ್ವರಿಗೆ, ಆಚರಿಸಲ್ಪಡುವ ಸೇವಿಸಲ್ಪಡುವ ಲಾಭ ಪಡೆಯುತ್ತಾರೆ, ಶಿರದಾನದಿಂದಾಗಿ ಸರ್ವ ಶ್ರೇಷ್ಠರಾಗುತ್ತಾರೆ.

ಬೋಧಿಸತ್ವರ ದಾನ ಹೃದಯ ವಿಕಸನೆ-ಚಿಂತನೆ

ಬೋಧಿಸತ್ವರ ದಾನ ಹೃದಯ ವಿಕಸನೆ-ಚಿಂತನೆ





ಜನರಿಗೆ ನಾನಾ ಸ್ವತ್ತುಗಳಿರುತ್ತವೆ. ಹೇಳುವುದಾದರೆ ಹೊಲಗದ್ದೆಗಳು, ಭವನಗಳು, ಐಶ್ವರ್ಯಗಳಾದ ಹಣ, ಚಿನ್ನ, ಆಭರಣ, ಇತ್ಯಾದಿಗಳು. ಪ್ರಾಣಿಗಳಾದ ಕುರಿ, ಕೋಳಿ, ಕುದುರೆ ಇತ್ಯಾದಿಗಳು, ವಾಹನಗಳು, ಅಧಿಕಾರ, ಕೀತರ್ಿ, ಪತ್ನಿ, ಮಕ್ಕಳು, ಇತ್ಯಾದಿ. ಅವರು ಇವಕ್ಕೆಲ್ಲಾ ಪ್ರಬಲವಾಗಿ ಅಂಟಿರುತ್ತಾರೆ. ಆದರೆ ಇವೆಲ್ಲಾ ಸ್ವತ್ತುಗಳು ಕೆಲವರಿಗೆ ಸಿಗುವುದೇ ಇಲ್ಲ. ಅದಕ್ಕಾಗಿ ಕೊರಗಿ ದುಃಖಿಸುತ್ತರೆ. ಕೆಲವರಿಗೆ ಇದ್ದರೂ ಎಂದೂ ವಿಯೋಗವಾಗುವುದೋ ಎಂದು ಹೆದರುತ್ತಾರೆ. ಈ ಸ್ವತ್ತುಗಳಿಗಾಗಿ ಶತ್ರುತ್ವ ಕಟ್ಟಿಕೊಳ್ಳುತ್ತಾರೆ. ಇವುಗಳ ರಕ್ಷಣೆ, ಶಸ್ತ್ರಗಳ ಬಳಕೆ ಮಾಡುತ್ತಾರೆ. ಸಮಾಜದಲ್ಲೇ ಅನೈಕ್ಯತೆ ಉಂಟುಮಾಡುತ್ತಾರೆ. ಆದರೂ ಸಹಾ ಇವುಗಳಲ್ಲಿ ಯಾವುದೂ ಶಾಶ್ವತವಲ್ಲ. ಇವುಗಳು ನಾಶವಾದಾಗ, ವಿಯೋಗವಾದಾಗ, ನಷ್ಟವಾದಾಗ, ದೂರಾದಾಗ ಅವರು ದುಃಖಿಸುತ್ತಾರೆ. ಅವರ ಮನಸ್ಸು ಇವುಗಳಿಗಾಗಿ ಪ್ರಬಲವಾಗಿ ಅಂಟಿ ನನ್ನದು ಎಂಬ ಸ್ವಾರ್ಥ ಬೆಳೆದುಬಿಟ್ಟಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಯಾರಾದರೂ ಬಂದಾಗ ಅವರ ಮೇಲೆ ದ್ವೇಷ ಉಂಟಾಗುತ್ತದೆ. ಇವು ಎಲ್ಲಿ, ಯಾವಾಗ, ಹೇಗಾದರೂ ನಷ್ಟವಾಗುತ್ತದೋ ಎಂದು ಭೀತಿ, ಚಿಂತೆಗಳು ಇರುತ್ತದೆ. ಈ ಬಗೆಯ ಲೋಭದಿಂದ ಒಬ್ಬನು ದುರ್ಗತಿಯಲ್ಲಿ ಹುಟ್ಟುವನು.
ಆದರೆ ಇವುಗಳಿಗೆ ಅಂಟದೆ ಇದ್ದಾಗ ಶಾಂತಿ ಸಿಗುತ್ತದೆ. ಸುರಕ್ಷತೆಯ ಭಾವ ಉಂಟಾಗುತ್ತದೆ. ಆದ್ದರಿಂದಾಗಿ ಜ್ಞಾನಿಯೊಬ್ಬನು ಇವುಗಳಲ್ಲಿ ತ್ಯಾಗ ಮನೋಭಾವ ತಾಳಲಿ.

  • ಈ ಜಗತ್ತಿನಲ್ಲಿರುವವರು ಎಲ್ಲರೂ ಸಹೋದರ, ಸಹೋದರಿಯರೇ ಆಗಿದ್ದಾರೆ, ಮಿತ್ರರೇ ಆಗಿದ್ದಾರೆ. ಇವರೆಲ್ಲಾ ಒಂದು ಜನ್ಮದಲ್ಲಿ ತಂದೆ-ತಾಯಿಗಳೇ ಆಗಿದ್ದಾರೆ. ಆದ್ದರಿಂದಾಗಿ ಎಲ್ಲರಿಗಾಗಿ ದಾನ ಮಾಡುವುದು ಒಳ್ಳೆಯದೇ ಆಗಿದೆ.
  • ಪ್ರತಿಯೊಬ್ಬರೂ ಹಿಂದಿನ ಯಾವುದಾದರೂ ಜನ್ಮದಲ್ಲಿ ಸಹಾಯ ಮಾಡಿಯೇ ಇದ್ದಾರೆ. ಅವರಿಗೆ ಪ್ರತಿಯಾಗಿ ಕೃತಜ್ಞತಾಪೂರ್ವಕವಾಗಿ ದಾನ ಸಹಾಯ ಮಾಡುವಂತಾಗಲಿ.
  • ಯಾವಾಗ ನಾವು ಸಾಯುವೆವೋ ಆಗ ಎಲ್ಲವನ್ನು ತೊರೆಯಬೇಕಾಗುತ್ತದೆ. ಯಾರೂ ಸಹಾ ಯಾವ ಸ್ವತ್ತನ್ನೂ ತೆಗೆದುಕೊಂಡು ಹೋಗಲಾಗುವುದಿಲ್ಲ. ಆದರೆ ದಾನಫಲವನ್ನು ನಾವು ತೆಗೆದುಕೊಂಡು ಹೋಗಬಹುದು. ಆದ್ದರಿಂದಾಗಿ ನಾನು ದಾನ ಮಾಡಲಿ.

  • ಜೀವನವು ಯಾವುದೇ ಕ್ಷಣದಲ್ಲಿ ಅಂತ್ಯವಾಗಬಹುದು. ಹೀಗಾಗಿ ನಾನು ಯಾರೂ ಕೇಳದೆಯೇ ಸಹಾಯ, ದಾನ ಮಾಡಬೇಕಾಗಿದೆ. ಇನ್ನೂ ಕೇಳಿದಾಗ ಖಂಡಿತ ದುಪ್ಪಟ್ಟು ಸಹಾಯ ದಾನ ಮಾಡುವಂತಾಗಲಿ.

  • ಯಾಚಕರೇ ಇಲ್ಲದಿದ್ದಾಗ ದಾನ ಎಲ್ಲಿ? ಹೇಗೆ? ಆಗ ಪುಣ್ಯ ಲಭಿಸುವುದು ಎಂತು? ಆದ್ದರಿಂದ ನಾನು ದಾನ ಮಾಡುವಂತಾಗಲಿ.

  • ನಿಜವಾಗಿಯೂ ನಮಗೆ ಹೇರಳವಾಗಿ ದೊರೆಯುವುದು ಪರರಿಗಾಗಿ ದಾನ ಮಾಡುವುದಕ್ಕಾಗಿಯೇ ಆಗಿದೆ.

  • ಪರರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ದಾನ ನೀಡಬೇಕಾಗಿದೆ. ಕೇಳಿದಾಗಲಂತೂ ಖಂಡಿತ ದಾನ ಮಾಡಲಿ.

  • ಐಶ್ವರ್ಯವಿದ್ದಾಗ ಯಾಚಕರು ಬರುವರು, ಐಶ್ವರ್ಯ ಇಲ್ಲದಿದ್ದಾಗ ನನ್ನ ಶರೀರವೇ ಇದೆಯಲ್ಲ, ನಾನು ನನ್ನ ಭಾಗವನ್ನೇ ದಾನ ನೀಡುವಂತಾಗಲಿ.



  • ಓಹ್! ಒಬ್ಬನು ಯಾಚಿಸುತ್ತಿದ್ದಾನಲ್ಲ, ದಾನಕ್ಕೆ ಅವಕಾಶ ಸಿಕ್ಕಿತಲ್ಲ ಎಂದು ಆನಂದಿಸಲಿ.
  • ಒಳಿತಿಗೆ ಪ್ರತಿಯಾಗಿ ಒಳ್ಳೆಯದು ಆಗುವುದು. ದಾನಕ್ಕೆ ಪ್ರತಿಯಾಗಿ ಸುಖವೇ ಸಿಗುವುದು. ಆದ್ದರಿಂದಾಗಿ ದಾನ ಮಾಡಲಿ.
  • ದಾನದಿಂದ ಸ್ನೇಹಿತರು ದೊರಕುವರು. ಬಾಂಧವ್ಯ ಬಲಿಷ್ಠವಾಗುವುದು. ಆದ್ದರಿಂದ ನಾನು ದಾನ ನೀಡುವಂತಾಗಲಿ.
  • ಶತ್ರುವಿಗೂ ದಾನ ನೀಡಿದರೆ ಮಿತ್ರನಾಗುವನು. ಶತ್ರುತ್ವ ನಾಶಕವಾದ ದಾನವನ್ನು ನಾನು ನೀಡುವಂತಾಗಲಿ.
  • ಒಬ್ಬನು ಮೊದಲು ತನ್ನ ಹಿತವನ್ನು ಮಾಡಿಕೊಳ್ಳಲಿ.
  • ನಂತರ ತಂದೆ-ತಾಯಿಗಳಿಗೆ ಹಿತಮಾಡಲಿ
  • ನಂತರ ಪತ್ನಿ-ಪುತ್ರರಿಗೆ ಹಿತಮಾಡಲಿ
  • ನಂತರ ಮಿತ್ರರಿಗೆ ಹಿತಮಾಡಲಿ
  • ನಂತರ ಬಂಧು-ಬಾಂಧವರಿಗೆ ಹಿತಮಾಡಲಿ
  • ನಂತರ ಯಾಚಕರಿಗೆ ಹಿತಮಾಡಲಿ
  • ನಂತರ ಶತ್ರುಗಳಿಗೆ ಹಿತಮಾಡಲಿ.
  • ಹೀಗಿದ್ದು ದಾನವನ್ನು ಸರ್ವವ್ಯಾಪಿಗೊಳಿಸಲಿ.
  • ಮರದ ಯಾವುದೇ ಭಾಗಗಳನ್ನು ಕಿತ್ತುಕೊಂಡರು, ಕತ್ತರಿಸಿದರೂ ಅದು ನನ್ನದು ಹೋಗುತ್ತಿದೆ, ನನ್ನದನ್ನು ಕಿತ್ತುಕೊಳ್ಳುತ್ತಿದ್ದಾರೆ, ಕತ್ತರಿಸುತ್ತಿದ್ದಾರೆ ಎಂದು ಭಾವಿಸದು. ಹಾಗೆಯೇ ನಿಮ್ಮ ಶರೀರದ ಭಾಗಗಳನ್ನು ನೀವು ನಿಲರ್ಿಪ್ತರಾಗಿ ದಾನ ಮಾಡಿ.
  • ಇದು ನನ್ನದೆಂಬ ಭಾವ ಬೇಡ, ನನ್ನದು ಎಂಬುದರಿಂದ ದುಃಖವಿದೆ. ಆದ್ದರಿಂದ ನನ್ನದೆಂಬುದನ್ನು ಯಾರಿಗೆ ಬೇಕೋ ತೆಗೆದುಕೊಂಡು ಹೋಗಲಿ.
  • ಹೀಗೆ ವಿವಿಧರೀತಿಯಲ್ಲಿ ಬೋಧಿಸತ್ವರು ಚಿಂತನೆ ಮಾಡಿ ದಾನ ಹೃದಯವನ್ನು ವಿಕಾಸಗೊಳಿಸುತ್ತಾರೆ. ಹೀಗೆ ಚಿಂತನೆ ಮಾಡಿದಾಗ ಅವರ ಚಿತ್ತ ಶುದ್ಧಿಯಾಗುತ್ತದೆ, ನನ್ನದು ಎಂಬ ಸ್ವಾರ್ಥದಿಂದ ಬಿಡುಗಡೆ ಹೊಂದುತ್ತದೆ. ಅದರ ಮನೋಭಾವವು ಹೀಗೆಯೇ ದೃಢವಾಗುತ್ತದೆ. ಅವರ ಮಾತು ಮತ್ತು ಕೃತಿಯಲ್ಲಿ ದಾನವು ಹಾಸುಹೊಕ್ಕಿರುತ್ತದೆ. ಅವರು ದಾನದಲ್ಲಿ ಸಹಾ ಮುಂದಿರುತ್ತಾರೆ.

ಬೋಧಿಸತ್ವರ ಪ್ರಜ್ಞಾ-ಕರುಣಾ ಸಂಗಮ

ಬೋಧಿಸತ್ವರ ಪ್ರಜ್ಞಾ-ಕರುಣಾ ಸಂಗಮ



ಭೋಧಿಸತ್ವರು :

  • ಪ್ರಜ್ಞಾದಿಂದಾಗಿ ಬೋಧಿಸತ್ವ ತನ್ನನ್ನು ಪರಿಪೂರ್ಣಗೊಳಿಸುತ್ತಾನೆ. ಆದರೆ ಕರುಣೆಯಿಂದಾಗಿ ಬುದ್ಧರ ಕಾರ್ಯವನ್ನು ಮಾಡುವ ಸಾಮಥ್ರ್ಯ ಪಡೆಯುತ್ತಾನೆ.
  • ಪ್ರಜ್ಞಾದಿಂದಾಗಿ ಆತನು ಸಂಸಾರವನ್ನು ದಾಟುತ್ತಾನೆ. ಆದರೆ ಕರುಣೆಯಿಂದಾಗಿ ಆತನು ಪರರನ್ನು ಸಂಸಾರದಿಂದ ದಾಟಿಸುತ್ತಾನೆ. 
  • ಪ್ರಜ್ಞಾದಿಂದಾಗಿ ಪರರ ದುಃಖವನ್ನು ಅರ್ಥಮಾಡಿಕೊಳ್ಳುತ್ತಾನೆ. ಆದರೆ ಕರುಣೆಯಿಂದಾಗಿ ಪರರ ದುಃಖ ಹೋಗಲಾಡಿಸಲು ಯತ್ನಿಸುತ್ತಾನೆ. 
  • ಪ್ರಜ್ಞಾದಿಂದಾಗಿ ದುಃಖದಿಂದ ವಿಮುಕ್ತನಾಗುತ್ತಾನೆ. ಆದರೆ ಕರುಣೆಯಿಂದಾಗಿ ಪರರಿಗಾಗಿ ದುಃಖವನ್ನು ಸ್ವೀಕರಿಸುತ್ತಾನೆ.
  • ಪ್ರಜ್ಞಾದಿಂದಾಗಿ ನಿಬ್ಬಾಣವನ್ನು ಆಕಾಂಕ್ಷಿಸುತ್ತಾರೆ, ಆದರೆ ಕರುಣೆಯಿಂದಾಗಿ ಪರರಿಗಾಗಿ ಸಂಸಾರದಲ್ಲೇ ಇರುತ್ತಾರೆ. 
  • ಕರುಣೆಯಿಂದಾಗಿ ಸಂಸಾರದಲ್ಲೇ ಇದ್ದರೂ ಪ್ರಜ್ಞಾದಿಂದಾಗಿ ಅವುಗಳಲ್ಲಿ ಆನಂದಿಸಲಾರರು.
  • ಪ್ರಜ್ಞಾದಿಂದ ಎಲ್ಲಾ ಅಂಟುವಿಕೆಯಿಂದ ಪಾರಾದರೂ ಕರುಣೆಯಿಂದಾಗಿ ಪರಹಿತದಲ್ಲೇ ರಮಿಸುವರು, ಕರುಣೆಯಿಂದಾಗಿ ಸರ್ವಜೀವಿಗಳ ಮೇಲೆ ದಯೆಯಿದ್ದರೂ ಅದೇ ವೇಳೆಯಲ್ಲಿ ಪ್ರಜ್ಞಾದಿಂದಾಗಿ ಸರ್ವರಲ್ಲೂ ಅಂಟದೆಯೂ ಇರುವರು.
  • ಪ್ರಜ್ಞಾದಿಂದಾಗಿ ನಾನೇ ಮಾಡುವವನು, ನನ್ನಿಂದಲೇ ಆಯಿತು ಎಂಬುದರಿಂದ ಬಿಡುಗಡೆ ಹೊಂದಿದರೂ, ಕರುಣೆಯಿಂದಾಗಿ ಸೋಮಾರಿತನ ಮತ್ತು ಚಿಂತೆಯಿಂದ ಮುಕ್ತರಾಗುತ್ತಾರೆ. 
  • ಪ್ರಜ್ಞಾ ಮತ್ತು ಕರುಣೆಯಿಂದ ಸರ್ವರ ರಕ್ಷಕರಾಗುತ್ತಾರೆ.
  • ಪ್ರಜ್ಞಾ ಮತ್ತು ಕರುಣೆಯಿಂದ ಸರ್ವರ ಉನ್ನತಿಗೆ ಶ್ರಮಿಸುತ್ತಾರೆ.
  • ಪ್ರಜ್ಞಾ ಮತ್ತು ಕರುಣೆಯಿಂದ ಸರ್ವರಿಗೆ ಅಭಯ ನೀಡುವವರಾಗುತ್ತಾರೆ.
  • ಪ್ರಜ್ಞಾ ಮತ್ತು ಕರುಣೆಯಿಂದ ಕೃತಜ್ಞತೆಯಿಂದ ಕೂಡಿರುತ್ತಾರೆ.
  • ಪ್ರಜ್ಞಾ ಮತ್ತು ಕರುಣೆಯಿಂದ ತೀವ್ರ ಲಾಲಸೆ, ಮೋಹ, ಸ್ವಾರ್ಥ, ದ್ವೇಷದಿಂದ ಮುಕ್ತರಾಗುತ್ತಾರೆ.
  • ಪ್ರಜ್ಞಾ ಮತ್ತು ಕರುಣೆಯಿಂದ ಎಲ್ಲಾ ಜ್ಞಾನಗಳನ್ನು, ಬಲಗಳನ್ನು, ಫಲಗಳನ್ನು ಪಡೆದು ಪಾರಮಿತಗಳನ್ನು ಪರಿಪೂರ್ಣಗೊಳಿಸುತ್ತಾರೆ.

ಬೋಧಿಸತ್ವನಾಗಲು ಬೇಕಾದ ಎಂಟು ಅರ್ಹತೆಗಳು:

  ಬೋಧಿಸತ್ವನಾಗಲು ಬೇಕಾದ ಎಂಟು ಅರ್ಹತೆಗಳು:

1. ಮನುಸ್ಸತ್ತ : ಆತನು ಮಾನವನಾಗಿರಬೇಕು.


2. ಲಿಂಗಸಂಪತ್ತಿ : ಆತನು ಪುರುಷನಾಗಿರಬೇಕು, ಏಕೆಂದರೆ ಸ್ತ್ರೀಯರು ಅರಹಂತರು ಆಗಬಹುದು. ಆದರೆ ಬುದ್ಧರಾಗಲಿ, ಬೋಧಿಸತ್ವರಾಗಲಿ ಆಗಲಾರರು. ಅದಕ್ಕೆ ಸ್ತ್ರೀಯ ದೇಹವೇ ದೊಡ್ಡ ಅಡ್ಡಿಯಾಗುವುದು. ಅದಕ್ಕಾಗಿ ಮೊದಲು ಪುರುಷರಾಗಿ ನಂತರ ಬೋಧಿಸತ್ವರಾಗಬೇಕಾಗುತ್ತದೆ.


3. ಹೇತು : ಆತನು ಕುಶಲ ಮೂಲಗಳಾದ ಅಲೋಭ, ಅದ್ವೇಷ ಮತ್ತು ಅಮೋಹಗಳು ಹೆಚ್ಚಾಗಿರಬೇಕು. ಅಂದರೆ ದಾನ, ವೈರಾಗ್ಯ, ಕರುಣೆ ಮತ್ತು ಪ್ರಜ್ಞಾ ಹೆಚ್ಚಾಗಿರಬೇಕು.


4. ಸತ್ತರಾದಸ್ಸನ : ಬುದ್ಧರನ್ನು ಮುಖಾಮುಖಿಯಾಗಿ ದಶರ್ಿಸಿ, ಅವರ ಮುಂದೆ ಬುದ್ಧರಾಗುವ ಹಂಬಲ ವ್ಯಕ್ತಪಡಿಸಬೇಕು. ಆಗ ಬುದ್ಧರು ಇಂತಹ ಕಾಲದಲ್ಲಿ ಈತನು ಬುದ್ಧನಾಗುವನು ಎಂದು ಭವಿಷ್ಯವಾಣಿ ನುಡಿಯುವರು.


5. ಪಬ್ಬಜ್ಜ : ಆತನು ಪಬ್ಬಜ್ಜ ಪಡೆದು ಭಿಕ್ಷುವಾಗಬೇಕು. ಏಕೆಂದರೆ ಇಂದ್ರೀಯ ಭೋಗಿಯು ಬೋಧಿಸತ್ವನಾಗಲಾರ.


6. ಗುಣಸಂಪತ್ತಿ : ಆತನು ಅಷ್ಟ ಸಮಾಪತ್ತಿ ಮತ್ತು ಐದು ಅಭಿಜ್ಞಾ ಪ್ರಾಪ್ತಿಮಾಡಬೇಕು.


7. ಅಧಿಕಾರ : ಬುದ್ಧರಿಗೆ ಪ್ರಾಣ ನೀಡುವಷ್ಟು ಪ್ರಬಲ ಭಕ್ತಿಯಿರಬೇಕು.

8. ಚಂದತಾ : ಪ್ರಬಲ ಇಚ್ಛಾಶಕ್ತಿಯಿಂದ ಕೂಡಿರಬೇಕು, ದೃಢನಿಧರ್ಾರಿಯಾಗಿರಬೇಕು, ಬುದ್ಧತ್ವಕ್ಕಾಗಿ ನರಕದಂತಹ ಸಂಕಷ್ಟಗಳನ್ನು ಎದುರಿಸಲು ಸಿದ್ಧನಾಗಬೇಕು.

ಹೀಗೆ ಈ ಎಂಟು ಅರ್ಹತೆಗಳ ಪ್ರಾಪ್ತಿಯನಂತರ ಅವರು ಪಾರಮಿಗಳನ್ನು ಪರಿಪೂರ್ಣಗೊಳಿಸಲು ಸಿದ್ಧರಾಗುತ್ತಾರೆ. ಪಾರಮಿಗಳಲ್ಲಿ ದಾನವೇ ಮೊದಲು. ಏಕೆಂದರೆ ಸರ್ವಜೀವಿಗಳಿಗೆ ದಾನವು ಸಾಮಾನ್ಯ ಮತ್ತು ಸಾಮಾನ್ಯ ಮಾನವರು ಪಾಲಿಸಲು ಸಾಧ್ಯವಿರುವುದು, ಸುಲಭವಿರುವುದು ಮತ್ತು ಫಲಕಾರಿಯಾಗಿರುವಂತಹುದು.

ಪಾರಮಿಗಳು

ಪಾರಮಿಗಳು

ಪಾಳಿಯಲ್ಲಿ ಪಾರಮಿ ಮತ್ತು ಸಂಸ್ಕೃತದಲ್ಲಿ ಪಾರಮಿತವೆಂದು ಹೇಳುತ್ತೇವೆ. ಪಾರಮಿಗಳೆಂದರೆ ಪರಮೋತ್ತರ ಸದ್ಗುಣಗಳಾಗಿವೆ. ಅಂದರೆ ದಾನ, ಶೀಲ, ತ್ಯಾಗ ಮುಂತಾದ ಸದ್ಗುಣಗಳಾಗಿವೆ. ಇವು ಸದಾ ಪ್ರಜ್ಞಾ ಮತ್ತು ಕರುಣೆಯಿಂದ ಜೊತೆಗೂಡಿರುತ್ತದೆ. ಆದರೆ ತೀವ್ರಲಾಲಸೆ, ಅಹಂಕಾರ ಮತ್ತು ಮಿಥ್ಯಾ ದೃಷ್ಟಿಗಳಿಂದ ವಿಮುಕ್ತವಾಗಿರುತ್ತವೆ.
ಇವು ಪರಮ ಅಂದರೆ ಮಹತ್ತರವಾದುದರಿಂದ ಇದಕ್ಕೆ ಪಾರಮಿ ಎನ್ನುತ್ತೇವೆ. ಪರತೀತ ಪರಮೋ ಪರಮ ಶ್ರೇಷ್ಠರಾದ ಬೋಧಿಸತ್ವರು ಪಾಲಿಸುವುದರಿಂದ ಇದಕ್ಕೆ ಪಾರಮಿ ಎನ್ನುತ್ತೇವೆ. ಇಂತಹ ಪರಮ ಸದ್ಗುಣಗಳನ್ನು ಪಾಲಿಸುವುದರಿಂದಲೇ ಅವರು ಪರಮ ಉದಾತ್ತರು ಎಂದೆನಿಸಿಕೊಂಡಿದ್ದಾರೆ.
ಒಮ್ಮೆ ಸಾರಿಪುತ್ರರು ಭಗವಾನರಲ್ಲಿ ಹೀಗೆ ಕೇಳಿಕೊಂಡರು: ಭಗವಾನ್ ಬುದ್ಧತ್ವ ಸಾಧಿಸಲು ಎಷ್ಟು ಸದ್ಗುಣಗಳು ಬೇಕಾಗುತ್ತವೆ?
ಓ ಸಾರಿಪುತ್ತ ಬುದ್ಧತ್ವ ಸಾಧಿಸಲು 10 ಪಾರಮಿಗಳು ಬೇಕಾಗುತ್ತವೆ. ಅವೆಂದರೆ: ದಾನ, ಶೀಲ, ತ್ಯಾಗ, ಪ್ರಜ್ಞಾ, ವೀರ್ಯ, ಕ್ಷಾಂತಿ, ಸತ್ಯ, ಅದಿಷ್ಠಾನ, ಮೆತ್ತ ಮತ್ತು ಉಪೇಕ್ಷಾ.
ಸಾಧಾರಣ ಮಾನವನು ಬುದ್ಧರಾಗಲು ಸಾಧ್ಯವಿಲ್ಲ. ಬೋಧಿಸತ್ವರು ಮಾತ್ರ ಬುದ್ಧರಾಗಬಲ್ಲರು, ಆದರೆ ಸಾಧಾರಣ ಮಾನವನು ಮೊದಲು ಬೋಧಿಸತ್ವನಾಗಿ ನಂತರ ಬುದ್ಧನಾಗಬೇಕಾಗುತ್ತದೆ.
ಬೋಧಿಸತ್ವನಾಗಲು ಬೇಕಾದ ಎಂಟು ಅರ್ಹತೆಗಳು
ಬೋಧಿಸತ್ವನಾಗಲು ಅಪಾರ ಮಹತ್ವಾಕಾಂಕ್ಷೆ ಅವಶ್ಯಕವಾಗಿದೆ. ಈ ದೃಢ ಮಹತ್ವಾಕಾಂಕ್ಷೆಯೇ ಎಂಟು ಗುಣಗಳಿಗೆ ಆಹಾರ ನೀಡುವುದು.
ನಾನು ತಡೆಗಳನ್ನು ದಾಟಿ, ಪರರನ್ನು ಮುಕ್ತನನ್ನಾಗಿಸುವೆ
ನಾನು ಮುಕ್ತನಾಗಿ, ಪರರನ್ನು ಮುಕ್ತನನ್ನಾಗಿಸುವೆ
ನಾನು ಪಳಗಲ್ಪಟ್ಟು, ಪರರನ್ನು ಪಳಗಿಸುವೆ
ನಾನು ಶಾಂತನಾಗಿ, ಪರರನ್ನು ಶಾಂತವಾಗಿಸುವೆ
ನಾನು ಕ್ಷೇಮಸ್ಥಾನ ತಲುಪಿ, ಪರರನ್ನು ಕ್ಷೇಮ ಸ್ಥಾನಕ್ಕೆ ತಲುಪಿಸುವೆ
ನಾನು ನಿಬ್ಬಾಣ ಗಳಿಸಿ, ಪರರನ್ನು ನಿಬ್ಬಾಣ ಪ್ರಾಪ್ತಿಮಾಡಿಸುವೆ.
ನಾನು ಪರಿಶುದ್ಧನಾಗಿ, ಪರರನ್ನು ಪರಿಶುದ್ಧಿಗೊಳಿಸುವೆ.
ನಾನು ಬೋಧಿಪ್ರಾಪ್ತಿ ಮಾಡಿ, ಪರರನ್ನು ಬೋಧಿಪ್ರಾಪ್ತಿ ಮಾಡಿಸುವೆ
ಈ ಬಗೆಯ ಮನೋಭಾವವನ್ನು ಬೋಧಿಸತ್ವರು ಹೊಂದಿರುತ್ತಾರೆ

ಬೋಧಿಸತ್ತರ ದಾನ ಪರಾಕ್ರಮ

 ಬೋಧಿಸತ್ತರ ದಾನ ಪರಾಕ್ರಮ

ದಾನಕ್ಕೆ ಯಾರಾದರೂ ಆದರ್ಶವಾಗಿದ್ದರೆ ಅದು ಬೋಧಿಸತ್ತರೇ ಆಗಿರುತ್ತಾರೆ. ಏಕೆಂದರೆ ಅಂತಹ ದಾನವನ್ನು ನಾವು ಬೇರೆಡೆ ಕಂಡಿಲ್ಲ, ಕೇಳಿಲ್ಲ ಹಾಗೂ ಓದಿಲ್ಲ. ಬೋಧಿಸತ್ತ ಎಂದರೆ ಬೋಧಿಜ್ಞಾನ ಪಡೆಯಲಿರುವ ಅರ್ಹ ಜೀವಿ ಅಥವಾ ಜ್ಞಾನದ ಜೀವಿ ಅಥವಾ ಕರುಣಾ ಜೀವಿ. ಬೋಧಿಪ್ರಾಪ್ತಿಗೆ ಸಮರ್ಥ ವ್ಯಕ್ತಿ ಎಂದೆಲ್ಲಾ ಹೇಳುತ್ತಾರೆ. ಅಂದರೆ ಬುದ್ಧತ್ವ ಪಡೆಯಲು ಹಂಬಲಿಸುವ ಯೋಗ್ಯ ವ್ಯಕ್ತಿ.
ಸಿದ್ಧಾರ್ಥ ಗೋತಮ ಬುದ್ಧರು ಬೋಧಿ ಪ್ರಾಪ್ತಿಯ ಮುನ್ನ ಬೋಧಿಸತ್ವರೇ ಆಗಿದ್ದರು. ಈ ಬೋಧಿಸತ್ವರೇ ಬೋಧಿ ಪ್ರಾಪ್ತಿಯ ನಂತರ ಬುದ್ಧರಾಗುತ್ತಾರೆ. ಹೀಗಾಗಿ ಸಾಮಾನ್ಯ ವ್ಯಕ್ತಿಯು ಬುದ್ಧನಾಗಲಾರ, ಆದರೆ ಬೋಧಿಸತ್ವರು ಬುದ್ಧರಾಗುತ್ತಾರೆ. ಅಂದರೆ ಸಾಮಾನ್ಯ ವ್ಯಕ್ತಿಯು ಮೊದಲು ಬೋಧಿಸತ್ವನಾಗಿ ನಂತರ ಬುದ್ಧನಾಗಬಹುದು. ಆದರೆ ಬುದ್ಧತ್ವವು ಒಂದೇ ಜನ್ಮದಲ್ಲಿ ಸಾಧಿಸುವಂತಹುದಲ್ಲ. ಅದಕ್ಕಾಗಿ ಕೋಟ್ಯಾಂತರ ಜನ್ಮಗಳಲ್ಲಿ ಬೋಧಿಸತ್ವರು ಶ್ರಮಿಸಿ ಅಂತಿಮ ಜನ್ಮದಲ್ಲಿ ಬುದ್ಧರಾಗುತ್ತಾರೆ. ಸಾಮಾನ್ಯ ವ್ಯಕ್ತಿಯು ಬೋಧಿಸತ್ವನಾಗಲು ಹಾಗು ಬೋಧಿಸತ್ವರು ಬುದ್ಧರಾಗಲು ಅವರು ಪಾರಮಿಗಳನ್ನು ಪರಿಪೂರ್ಣಗೊಳಿಸಬೇಕಾಗುತ್ತದೆ. ಪಾರಮಿಗಳೆಂದರೆ ಪರಿಪೂರ್ಣಗೊಳಿಸಲು ಅರ್ಹವಾದ ಸದ್ಗುಣಗಳು.
ಈ ಪಾರಮಿಗಳು ಹತ್ತು. ಆದರೆ ಬುದ್ಧತ್ವ ಸಾಧಿಸಲು ಈ ಹತ್ತು ಪಾರಮಿಗಳನ್ನು ಮೂರು ವಿಶಿಷ್ಟ ಹಂತಗಳಲ್ಲಿ ಪರಿಪೂರ್ಣಗೊಳಿಸಬೇಕಾಗುತ್ತದೆ. ಮೂರು ವಿಶಿಷ್ಟ ಹಂತದ ಪಾರಮಿಗಳೆಂದರೆ ಪಾರಮಿ, ಉಪಪಾರಮಿ, ಪರಮತ್ಥ ಪಾರಮಿ. ಈ ಪಾರಮಿಗಳು ಹತ್ತು, ಅವೆಂದರೆ: 1) ದಾನ  2) ಶೀಲ  3) ತ್ಯಾಗ  4) ಪ್ರಜ್ಞಾ  5) ವೀರ್ಯ  6) ಕ್ಷಾಂತಿ  7) ಸತ್ಯ  8) ಆದಿಷ್ಠಾನ  9) ಮೆತ್ತಾ ಮತ್ತು 10) ಉಪೇಕ್ಷಾ.
ಈ ಪಾರಮಿಗಳಲ್ಲಿ ಮೊತ್ತ ಮೊದಲನೆಯದೇ ದಾನ ಆಗಿದೆ. ಬೋಧಿಸತ್ವರು ದಾನವನ್ನು ಪರಿಪೂರ್ಣಗೊಳಿಸಿಯೇ ಮುಂದಿನ ಪಾರಮಿಗೆ ಹೋಗಬಹುದು ಅಥವಾ ದಾನದ ಜೊತೆಗೆ ಉಳಿದ ಪಾರಮಿಗಳನ್ನು ವೃದ್ಧಿಸಬಹುದು. ಆದರೆ ಒಂದು ಜನ್ಮದಲ್ಲಿ ಒಂದು ಪಾರಮಿಯನ್ನು ಮಾತ್ರ ಪರಮಾರ್ಥ ಪಾರಮಿಯಾಗಿ ಸಾಧಿಸಬಹುದು.
ಮಹಾಯಾನ ಬೌದ್ಧ ಪಂಥಿಯರು ಈ ಹತ್ತು ಪಾರಮಿಗಳು ಆರರಲ್ಲೇ ವಿಲೀನಗೊಳಿಸಿ ಆರು ಪಾರಮಿತಗಳೇ ಸಾಕು ಎಂದಿದ್ದಾರೆ. ಅವರ ಆರು ಪಾರಮಿತಗಳು ಹೀಗಿವೆ:
1) ದಾನ ಪಾರಮಿತ 2) ಶೀಲ ಪಾರಮಿತ 3) ಕ್ಷಾಂತಿ ಪಾರಮಿತ
4) ವೀರ್ಯ ಪಾರಮಿತ 5) ಸಮಾಧಿ ಪಾರಮಿತ 6) ಪ್ರಜ್ಞಾ ಪಾರಮಿತ.
ಈಗ ಈ ಕೃತಿಯಲ್ಲಿ ದಾನ ಪಾರಮಿತದ ಬಗ್ಗೆ ವಿವರವಾಗಿ ಅರಿಯೋಣ.

Tuesday, 3 December 2019

ಸಜೀವ ದೇಹ ದಾನ ಮಾಡಿದ ಮಹಾಸತ್ವ ಬೋಧಿಸತ್ವ The Great Sacrifice of Bodhisatta


 ಸಜೀವ ದೇಹ ದಾನ ಮಾಡಿದ ಮಹಾಸತ್ವ ಬೋಧಿಸತ್ವ


ಬಹುಕಾಲದ ಹಿಂದೆ ಮಹಾರಟ್ಠ ಎಂಬ ಬಲಿಷ್ಠ ರಾಜನಿದ್ದನು. ಆತನಿಗೆ ಮೂರು ಮಕ್ಕಳು. ಅವರೆಂದರೆ, ಮಹಾಪ್ರಶಾದ, ಮಹಾದೇವ ಮತ್ತು ಮಹಾಸತ್ವ. ಅವರೆಲ್ಲರೂ ಉತ್ತಮರು ಮತ್ತು ವಿನಮ್ರರಾಗಿದ್ದರು.
ಒಂದುದಿನ ಮೂವರು ರಾಜಕುಮಾರರು ಅರಣ್ಯಕ್ಕೆ ಭೇಟಿ ನೀಡಿದಾಗ ಆ ಕಾಡಿನ ಸೌಂದರ್ಯಕ್ಕೆ ಮನಸೋತು ದಾರಿತಪ್ಪಿದರು. ದಟ್ಟ ಅರಣ್ಯದಲ್ಲಿಯೇ ಅಡ್ಡಾಡುತ್ತ ಅವರು ಒಂದು ಪರ್ವತದ ಮೇಲೆ ನಿಂತರು. ಹಿರಿಯವನಾದ ಮಹಾಪ್ರಶಾದನು ಆ ಹೆಬ್ಬಂಡೆಯ ಕೆಳಗೆ ಹೆಣ್ಣು ಹುಲಿಯನ್ನು ನೋಡಿದನು. ಅದರ ಜೊತೆಗೆ ಐದು ಮರಿಗಳಿದ್ದವು. ಆ ಹೆಣ್ಣು ಹುಲಿಯು ಪ್ರಸವ ನಿಡಿದ ಬಳಿಕ ಏಳು ದಿನಗಳವರೆಗೂ ಏನನ್ನೂ ತಿಂದಿರಲಿಲ್ಲ. ಮರಿಗಳು ಹಾಲನ್ನು ಉಣಲು ಬಂದರೂ ಅವುಗಳ ಹಸಿವನ್ನು ತೃಪ್ತಿಪಡಿಸಲು ಸಾಧ್ಯವಿರಲಿಲ್ಲ. ಅಪಾರ ಹಸಿವಿನಿಂದ ಆ ಹೆಣ್ಣು ಹುಲಿಯು ತನ್ನ ಮರಿಗಳನ್ನೇ ತಿನ್ನಲು ಯೋಚಿಸಿತು. ಅದರ ವರ್ತನೆಯು ಹಾಗೆ ತೋರಿಸಿತು.
ಇದನ್ನು ಕಂಡ ಮೂವರು ಸಹೋದರರು ಕರುಣೆ ವ್ಯಕ್ತಪಡಿಸಿದರು. ಹಿರಿಯರಾದ ಇಬ್ಬರು ಹುಲಿಗೆ ಆಹಾರ ತರಲು ಅಲ್ಲಿಂದ ತೆರಳಿದರು. ಆದರೆ ಕಿರಿಯವ ಬೋಧಿಸತ್ವನಾಗಿದ್ದನು. ಆತನು ಹೀಗೆ ಚಿಂತಿಸುತ್ತಿದ್ದನು:


"ಏತಕ್ಕಾಗಿ ಇನ್ನೊಂದು ಜೀವಿಯ ಮಾಂಸಕ್ಕಾಗಿ ಹುಡುಕಬೇಕು. ನನ್ನ ಶರೀರವೇ ಇಲ್ಲಿದೆಯಲ್ಲಾ! ಈ ಶರೀರವಂತು ದುಃಖ ಮೂಲ. ಈ ಶರೀರವನ್ನು ಪರಹಿತಕ್ಕಾಗಿ ಬಳಸದವನು ಜ್ಞಾನಿಯೇ ಅಲ್ಲ. ಪರರು ದುಃಖದಲ್ಲಿರುವಾಗ ನಾನು ಸುಖಿಸುವುದೆಂತು. ನಾನು ನನ್ನ ಶರೀರವನ್ನು ಈ ಹುಲಿಗೆ ಅಪರ್ಿಸಿದರೆ ಹೇಗೆ? ಮುಗ್ಧ ಮರಿಗಳು ತಾಯಿಯಿಂದಲೇ ಸಾಯುವ ಮುನ್ನ, ಹಸಿವಿಗಾಗಿ ತಾಯಿಯೇ ತನ್ನ ಮರಿಗಳನ್ನು ಹತ್ಯೆ ಮಾಡುವ ಮುನ್ನ, ನನ್ನ ದೇಹವನ್ನು ಅಪರ್ಿಸಬೇಕು. ಹೀಗೆ ಮಾಡುವುದರಿಂದಾಗಿ ನಾನು ದುರ್ಬಲರಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ದಾನ ಪ್ರಜ್ಞಾರಿಗೆ ಆನಂದ ತಂದಂತೆ ಆಗುವುದು. ಶೀಲವಂತರಿಗೆ ದಾನಿಗಳಿಗೆ ಪ್ರೋತ್ಸಾಹಿಸಿದಂತಾಗುವುದು. ನನ್ನ ದೇಹವನ್ನೇ ದಾನ ಮಾಡುವ ಅಪೂರ್ವ ಅಪರೂಪದ ಅವಕಾಶವಿದು. ಕೇವಲ ಕರುಣಾಭರಿತ ನಿಸ್ವಾರ್ಥ ಮಾಡುವಂತಹ ಕಾರ್ಯವಿದು.
ಪರರ ಹಿತಕ್ಕಾಗಿ ನಾನು ದುಡಿಯಲೇಬೇಕಾಗಿದೆ. ಸರ್ವ ಜೀವಿಗಳೊಂದಿಗೆ ದಯೆಯುಳ್ಳವನಾಗಲೇಬೇಕಾಗಿದೆ. ದುಃಖಿತರಿಗೆ ಸಹಾಯ ಮಾಡುವುದೇ ನನ್ನ ಅಗ್ರ ಕರ್ತವ್ಯವಾಗಿದೆ. ಈ ಅಶುಭವಾದ ಶರೀರವನ್ನು ನಾನು ಹೆಣ್ಣು ಹುಲಿಗೆ ಮತ್ತು ಅದರ ಐದು ಮರಿಗಳಿಗೆ ಅಪರ್ಿಸುವೆನು". "ಈ ಮಹಾ ಪುಣ್ಯ ಕಾರ್ಯದಿಂದಾಗಿ ನಾನು ಸಮ್ಮಾಸಂಬುದ್ಧತ್ವವನ್ನು ಪಡೆಯುವಂತಗಲಿ. ಸಂಸಾರದಲ್ಲಿರುವ ಸರ್ವಜೀವಿಗಳನ್ನು ರಕ್ಷಿಸುವಂತಾಗಲಿ! ಸರ್ವ ಜೀವಿಗಳು ಸುಖಿಯಾಗಿರಲಿ ಮತ್ತು ಕ್ಷೇಮವಾಗಿರಲಿ," " ಇನ್ನು ತಡಬೇಡ "
ಎಂದು ಹೆಬ್ಬಂಡೆಯಿಂದ ಹಾರಿ ಹೆಣ್ಣು ಹುಲಿಯ ಮುಂದೆ ಅಷ್ಟು ಎತ್ತರದಿಂದ ಮಹಾಸತ್ವರು ಬಿದ್ದುಬಿಟ್ಟರು. ಆದರೆ ಅವರಿಗೆ ತಕ್ಷಣ ಸಾವು ಲಭಿಸಲಿಲ್ಲ. ಆ ಹುಲಿಯು ಸಹಾ ಕ್ರೂರಿಯಾಗಿದ್ದರೂ ಬೋಧಿಸತ್ವರ ಮೇಲೆ ದಯೆಬೀರಿ ಅವರ ದೇಹವನ್ನು ಸ್ಪಶರ್ಿಸಲಿಲ್ಲ.
ಆದರೆ ಬೋಧಿಸತ್ವರು ಹೀಗೆ ಯೋಚಿಸಿದರು: "ಓಹ್, ಈ ಹುಲಿಯು ನನ್ನನ್ನು ತಿನ್ನಲಾರದಷ್ಟು ದುರ್ಬಲವಾಗಿದೆ" ಎಂದು ಯೋಚಿಸಿ ತನ್ನನ್ನು ತಾನು ಮುಗಿಸಿಕೊಳ್ಳಲು ಆಯುಧ ಹುಡುಕಿ ಕೊನೆಗೆ ಕತ್ತನ್ನು ಕತ್ತರಿಸಿಕೊಂಡು ಅದರ ಮುಂದೆ ಬಿದ್ದುಬಿಟ್ಟರು.
ಆಗ ಆ ಹುಲಿಯು ಹಸಿವಿನಿಂದ ಉದ್ರೇಕಗೊಂಡು ರಕ್ತವನ್ನು ಕುಡಿಯಿತು. ಮಾಂಸವನ್ನು ತಿಂದಿತು ಮತ್ತು ಮೂಳೆಗಳನ್ನು ಉಳಿಸಿತು.
ಆಗ ಭೂಮಿ ಕಂಪಿಸಿತು, ಸಾಗರ ನಡುಗಿತು, ಸೂರ್ಯ ಮಂಕಾದನು. ದೇವದೇವತೆಗಳೆಲ್ಲರೂ ಸಾಧು ಸಾಧು ಸಾಧು ಎಂದು ಉದ್ಗಾರ ತೆಗೆದರು.
ನಂತರ ವಿಷಯವೆಲ್ಲಾ ಎಲ್ಲೆಡೆ ಹಬ್ಬಿತು. ಎಲ್ಲರೂ ದಿಗ್ಭ್ರಾಂತರಾದರು. ತಂದೆ-ತಾಯಿಗಳು ಮೂಛರ್ಿತರಾದರು. ನಂತರ ಅಲ್ಲಿ ಚೇತಿಯ ಕಟ್ಟಿಸಲಾಯಿತು. ಅದರ ಮೇಲೆ ನಮೋ ಬೋಧಿಸತ್ವ ಎಂದು ಕೆತ್ತಲಾಯಿತು.

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....